* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 12 September 2019

with Sri Suresh Kumar, Minister for education, Karnataka

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಳಿಕ ಇಂದು (12-09-2019, ಗುರುವಾರ) ಸಂಜೆ ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಲು ಪ್ರಥಮ ಬಾರಿಗೆ ನಮ್ಮ ತುಮಕೂರು ನಗರಕ್ಕೆ ಆಗಮಿಸಿದ್ದ ನಮ್ಮ ಆತ್ಮೀಯರಾದ ಶ್ರೀ ಎಸ್.ಸುರೇಶ್ ಕುಮಾರ್ ಅವರನ್ನು ನಾನು ಮತ್ತು ವಿಶ್ವನಾಥನ್ ಭೇಟಿ ಮಾಡಿ ಅಭಿನಂದಿಸಿದೆವು. 🙏🙏
🍀ಅವರ ಸಹಜ ಸ್ವಭಾವವಾದ ಸರಳತೆ, ಸಜ್ಜನಿಕೆ, ಸಹನೆ ನಮ್ಮ ಮನಸೂರೆಗೊಂಡಿತು. ಸಮಾರಂಭದಲ್ಲಿ ಮಾತನಾಡುತ್ತ ''ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು'' ಎಂಬ ಕವಿವಾಣಿಯನ್ನು ಉಲ್ಲೇಖಿಸುತ್ತ “ಈ ವಿಷಯದಲ್ಲಿ ನಾನು ಧನ್ಯ” ಎಂದು ತಮ್ಮ ತಾಯಿಯನ್ನು ನೆನೆಯುತ್ತ ಹೇಳಿದ್ದು ಸಭಿಕರೆಲ್ಲರ ಮನವರಳಿಸಿತು.. "ಈ ವಿಷಯದಲ್ಲಿ ನಾವೂ ಧನ್ಯರು" ಎಂಬುದು ನಮ್ಮ ಮನದಲ್ಲಿ ಪ್ರತಿಧ್ವನಿಸಿತು..