* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 24 November 2019

ಕಡಲೆಕಾಯಿ ಪರಿಷೆಯಲ್ಲಿ… 24-11-2019, ಭಾನುವಾರ Groundnut Fair, Basavanagudi, Bengaluru

ಕಡಲೆಕಾಯಿ ಪರಿಷೆಯಲ್ಲಿ…
**********************
ಬೆಂಗಳೂರಿನ ಬಸವನಗುಡಿಯ ಸುಪ್ರಸಿದ್ಧ “ಕಡಲೆಕಾಯಿ ಪರಿಷೆ’’ (Groundnut Fair, Basavanagudi, Bengaluru) ಯಲ್ಲಿ ಇಂದು (24-11-2019, ಭಾನುವಾರ) ಬೆಳಗ್ಗೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ –ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಒಂದು ಸುತ್ತು ಬಂದಾಗ ಇಡೀ ಪರಿಷೆಯ ಪ್ರದೇಶವು ಜನಜೀವನದ ಆಕರ್ಷಕ ವೈವಿಧ್ಯತೆಗಳನ್ನು ಕಣ್ತುಂಬಿಸಿತು. ಜಾತಿ-ಮತ-ಧರ್ಮ-ಲಿಂಗಭೇದ- ವಯೋಭೇದವಿಲ್ಲದೆ ಪರಿಷೆ ನೋಡಲು ಬರುವವರು, ಪರಿಷೆ ಮೂಲಕ ಬದುಕು ಕಟ್ಟಿಕೊಳ್ಳುವವರು, ಬದುಕಿಗಾಗಿ ಅವಲಂಬಿಸಿರುವ ಬಗೆಬಗೆಯ ವೃತ್ತಿಗಳು- ಹೀಗೆ ಹೆಜ್ಜೆಹೆಜ್ಜೆಗೂ ಅದೊಂದು ಬೇರೆಯದೇ ಲೋಕವನ್ನು ಅನಾವರಣಗೊಳಿಸಿತು. ದೊಡ್ಡ ಗಣಪನ ಗುಡಿ ಹಾಗೂ ಬೃಹತ್ ನಂದಿಯ ಗುಡಿಗಳ ಆಸುಪಾಸಿನ ಪ್ರದೇಶದಲ್ಲೆಲ್ಲ ಎಲ್ಲಿ ನೋಡಿದರೂ, ಹೆಜ್ಜೆಯಿಡಲಾಗದಷ್ಟು ಜನ…ಜನ…ಜನ ಎಂದಾಗ ಅಲ್ಲಿನ ಸಂಭ್ರಮೋತ್ಸಾಹಗಳನ್ನು ಊಹಿಸಿಕೊಳ್ಳಬಹುದು.