ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Tuesday, 3 March 2026

ದೇವರಾಯನ ದುರ್ಗದ ಬೆಟ್ಟದಲ್ಲಿದ್ದ ರಣಹದ್ದುಗಳು… Vultures in Devarayanadurga Hills



 

“ನಮ್ಮ ತುಮಕೂರು” ನಗರದ ಹೆಮ್ಮೆಯ ದೇವರಾಯನದುರ್ಗ ಅರಣ್ಯದ ಬೆಟ್ಟದಲ್ಲಿ ಒಂದು ಕಾಲದಲ್ಲಿ ರಣಹದ್ದುಗಳು (Vultures) ಇದ್ದವು ಎಂಬುದೇ ಈ ಅರಣ್ಯ ಪ್ರದೇಶದ ಮಹತ್ವಕ್ಕೊಂದು ಸಾಕ್ಷಿಯಾಗಿತ್ತು.

ಆತ್ಮೀಯ ಮಿತ್ರ, ಈಗ ಕೆನಡಾದಲ್ಲಿರುವ ಪರಿಸರವಾದಿ ಶ್ರೀ ಅಮೀನ್ ಅಹಮದ್ 90 ರ ದಶಕದಲ್ಲಿ (1993 ಅಥವಾ 1994) ಅದೊಂದು ಭಾನುವಾರ ಬೆಳಗ್ಗೆ ಚಿಕ್ಕಪೇಟೆಯ ನಮ್ಮ ಮನೆಗೆ ಬಂದು ನನ್ನನ್ನು ಬೈಕ್ ನಲ್ಲಿ ಕೂರಿಸಿಕೊಂಡು ನೇರವಾಗಿ ದೇವರಾಯನದುರ್ಗಕ್ಕೆ ಕರೆದೊಯ್ದಿದ್ದರು. ಮೇಲಿನ ಬೆಟ್ಟದಲ್ಲಿ ದೇವಸ್ಥಾನಕ್ಕೆ ತೆರಳುವ ದಾರಿ ಕವಲೊಡೆಯುತ್ತದೆ. ಒಂದು ದಾರಿ ಶ್ರೀ ಯೋಗಾನರಸಿಂಹ ದೇವಾಲಯದ ಕಡೆಗೆ ಹಾಗೂ ಇನ್ನೊಂದು ದಾರಿ ಪೊಲೀಸ್ ವೈರ್ ಲೆಸ್ ಸ್ಟೇಷನ್ ಕಡೆಗೆ ತೆರಳುತ್ತದೆ. ಈ ಕವಲಿನ ಬಳಿ ದೇವಾಲಯಕ್ಕೆ ಹೋಗುವ ದಾರಿಯ ಬಲಬದಿಯ ಬೆಟ್ಟದಲ್ಲಿರುವ ಬಂಡೆಗಳು ರಣಹದ್ದುಗಳ ವಾಸಸ್ಥಳವಾಗಿದ್ದವು.

ದಾರಿಯ ಪಕ್ಕದ ಇಳಿಜಾರಿನಲ್ಲಿ ಕಲ್ಲು-ಮುಳ್ಳು-ಪೊದೆಗಳ ನಡುವೆ ತುಸು ಕಷ್ಟದಿಂದಲೇ ಒಳಪ್ರದೇಶಕ್ಕೆ ಹೋದೆವು. ಸ್ವಲ್ಪ ದೂರದಲ್ಲೇ ಬಂಡೆಗಳ ನಡುವೆ ರಣಹದ್ದುಗಳು ಕುಳಿತಿರುವುದನ್ನು ಅಮೀನ್ ಅಹಮದ್ ತೋರಿಸಿದರು. ಆ ಸುಡುಬಿಸಿಲಲ್ಲಿ ಕುಳಿತು ರಣಹದ್ದುಗಳ ಫೋಟೋ ಕ್ಲಿಕ್ಕಿಸಿದರು. ರಣಹದ್ದುಗಳ ಮಹತ್ವವನ್ನು- ಅದು ಹೇಗೆ ನೈಸರ್ಗಿಕ ಸ್ವಚ್ಛತೆಗಾರ ಎಂಬುದನ್ನು- ವಿವರಿಸಿದರು. ಸುಡುಬಿಸಿಲಲ್ಲಿ ಒಂದಷ್ಟು ಹೊತ್ತು ರೋಮಾಂಚನದಿಂದ ರಣಹದ್ದುಗಳನ್ನು ವೀಕ್ಷಿಸಿ ಅಂದು ನಾವು ವಾಪಸ್ಸಾಗಿದ್ದೆವು.

ರಣಹದ್ದುಗಳ ಫೋಟೋವನ್ನು ಅಮೀನ್ ಅಹಮದ್ ಆಗಲೇ ತಮ್ಮ ಫೇಸ್ ಬುಕ್ ಪುಟದಲ್ಲಿ ಬಿತ್ತರಿಸಿದ್ದರು. 2012 ರಲ್ಲಿ ನಾನು ಆ ಮಾಹಿತಿಯನ್ನು ನನ್ನ ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿಕೊಂಡಿದ್ದೆ. ಈಗ ಆ ಹಳೆಯ ನೆನಪನ್ನು ಮೆಲುಕುಹಾಕುತ್ತ ಮತ್ತೊಮ್ಮೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ...

ಅಂದಹಾಗೆ ಆ ರಣಹದ್ದುಗಳು ಈಗ ದೇವರಾಯನದುರ್ಗ ಅರಣ್ಯದ ಭಾಗದಲ್ಲಿ ಕಂಡುಬರುತ್ತಿಲ್ಲ. ಆನಂತರದಲ್ಲಿ ಎಂದೋ-ಯಾವಾಗಲೋ ಇಲ್ಲಿಂದ ಕಣ್ಮರೆ ಆಗಿದೆ ಎಂಬುದು ಮಾತ್ರ ಗಂಭೀರ ವಿಚಾರ.

-ಆರ್.ಎಸ್.ಅಯ್ಯರ್, ತುಮಕೂರು, ದಿ.04-03-2026

https://www.facebook.com/share/p/1DrAqw61vL/













Tuesday, 13 January 2026

VSR -97 / ವಿ.ಎಸ್.ರಾಮಚಂದ್ರನ್ 97 ನೇ ವಸಂತಕ್ಕೆ / 14-01-2026




 

💐 🌺 97 ನೇ ವಸಂತಕ್ಕೆ ಪಾದಾರ್ಪಣೆ....💐 🌺 ನಮ್ಮ ತಂದೆಯವರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರು ಇಂದು (ದಿ.14-01-2026, ಬುಧವಾರ, ಪೌಷ ಕೃಷ್ಣ ಏಕಾದಶಿ) 97 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನಮ್ಮ ಮನೆಯಲ್ಲಿ ಮನೆದೇವರಾದ ಶ್ರೀ ಪಳನಿ ಸುಬ್ರಹ್ಮಣ್ಯ ಸ್ವಾಮಿಗೆ ಆರತಿ ಬೆಳಗುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಹುಟ್ಟುಹಬ್ಬದ ಈ ಸಂದರ್ಭದಲ್ಲಿ ನಮ್ಮ ಕೋರಿಕೆಯಂತೆ ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿರುವ "ಶ್ರೀ ವಲ್ಲೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿ"ಗೆ ಅಭಿಷೇಕ-ಪೂಜೆಯನ್ನು ಪ್ರಧಾನ ಅರ್ಚಕರಾದ ಶ್ರೀ ಕೆ.ವೈ.ಲಕ್ಷ್ಮೀನರಸಿಂಹ ಶಾಸ್ತ್ರಿಯವರು ನೆರವೇರಿಸಿಕೊಟ್ಟರು. ಪೂಜಾ ಪ್ರಸಾದದ ಜೊತೆಗೆ ಪಳನಿ ದೇವಾಲಯದ ವಿಶೇಷ ವಸ್ತ್ರವನ್ನು ಮತ್ತು ತಿರುಪತಿ ದೇವಾಲಯದ ಪ್ರಸಾದವನ್ನೂ ಅವರು ನೀಡಿದ್ದು, ಅಪಾರ ಸಂತಸವನ್ನುಂಟುಮಾಡಿತು. ಹಾಗೂ ಈ ಹುಟ್ಟುಹಬ್ಬಕ್ಕೆ ಮೆರುಗು ಕೊಟ್ಟಿತು. ದೇವರ ಪ್ರಸಾದವನ್ನು ಸ್ವೀಕರಿಸಿ ನಮ್ಮ ತಂದೆಯವರು ಸಂತೋಷಭರಿತರಾದರು.
ಶ್ರೀ ರಾಮಚಂದ್ರನ್ ರವರು ಸ್ವಾತಂತ್ರ್ಯ ಹೋರಾಟಗಾರಷ್ಟೇ ಅಲ್ಲದೆ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆಗಿದ್ದಾರೆ. 1968 ರಲ್ಲಿ ಗೆಳೆಯರೊಡಗೂಡಿ ಶ್ರೀ ಶಂಕರ ಜಯಂತಿ ಸಭಾವನ್ನು ಸ್ಥಾಪಿಸಿ, 30-35 ವರ್ಷಗಳ ಕಾಲ ಚಿಕ್ಕಪೇಟೆಯ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ಶ್ರೀ ಶಂಕರ ಜಯಂತಿ ಆಚರಣೆ, ಉತ್ಸವ, ಪೂಜಾದಿಗಳು, ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಆ ಕಾಲದ ಪ್ರಸಿದ್ಧ ಸಂತರು, ವಿದ್ವಾಂಸರು, ಮಹನೀಯರನ್ನು ಆಹ್ವಾನಿಸಿ ಪ್ರವಚನಗಳನ್ನು ಏರ್ಪಡಿಸಿದ್ದ ಕೀರ್ತಿಗೂ ಪಾತ್ರರಾಗಿದ್ದಾರೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 14-01-2026 #rsiyertumakuru

፨ ಕೆಳಗಿನ ಲಿಂಕ್ ಮೂಲಕ ಯೂಟ್ಯೂಬ್ ವಿಡಿಯೋ ವೀಕ್ಷಿಸಿ.....↓↓↓





*************************************************************************
ಮೊಮ್ಮಕ್ಕಳು - ಮರಿಮಕ್ಕಳೊಡನೆ ಮುತ್ತಜ್ಜ



ಮೊಮ್ಮಗ ವಿ.ವಿವೇಕ್, ರಶ್ಮಿ ಮತ್ತು ಮರಿಮಗ ದತ್ತಕೇಸರಿ ಭಟ್ಟ (ಒಂದೂವರೆ ವರ್ಷ)







************************************


ಮೊಮ್ಮಗಳು ಸುನಯನ, ಶಶಾಂಕ್ ಮತ್ತು ಮರಿಮಗ ಕೃಷ್ಣ (3 ವರ್ಷ)ನೊಂದಿಗೆ




*******************************************


ಶ್ರೀಮತಿ ವಿದ್ಯಾ ಶಿವಸತ್ಯ ಮತ್ತು ಕು. ಶ್ರೀರಂಜಿನಿ ಭೇಟಿ



ಶ್ರೀಮತಿ ಗಾಯತ್ರಿ ಸತ್ಯನಾರಾಯಣ ಭೇಟಿ


**********************************************


--------------------------------------------------------------------------------------------------
↓↓↓ youtube ನಲ್ಲಿ ಈ ವಿಡಿಯೋ ವೀಕ್ಷಿಸಿ....↓↓↓↓↓↓.