* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Tuesday 8 October 2019

Talakaveri, Kodagu - 06.10.2019 R.S.Iyer ತಲಕಾವೇರಿ, ಕೊಡಗು

ತಲಕಾವೇರಿಯ ಸನ್ನಿಧಿಯಲ್ಲಿ
****************
ಪ್ರಕೃತಿಯ ರಮ್ಯ ಪರಿಸರದಲ್ಲಿ, ಬೃಹತ್ ಬೆಟ್ಟಗಳ ಸಾಲಿನಲ್ಲಿ ಮೋಡ-ಮಳೆಗಳ ಕಣ್ಣಾಮುಚ್ಚಾಲೆಯ ನಡುವೆ ಕಾವೇರಿ ನದಿಯ ಉಗಮಸ್ಥಾನವಾದ ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ಮಾತೆಯ ದರ್ಶನ ಪಡೆಯುವುದೇ ರೋಮಾಂಚನ ಮೂಡಿಸುವಂತಹುದು. ದಿ. 06-10-2019, ಭಾನುವಾರ ನಮ್ಮ ತಂದೆ, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಇಲ್ಲಿಗೆ ಭೇಟಿ ಕೊಟ್ಟಾಗ ಆಗಷ್ಟೇ ಮಳೆ ಬಂದು ನಿಂತಿತ್ತು. ಇಡೀ ವಾತಾವರಣ ಮನೋಹರವಾಗಿತ್ತು. ನೂರಾರು ಜನರು (ಅಧಿಕವಾಗಿ ಕೇರಳೀಯರು) ಭಕ್ತಿಭಾವದಿಂದ ಕಾವೇರಿ ಮಾತೆಯ ದರ್ಶನಕ್ಕೆ ಬರುತ್ತಿದ್ದರು. ಪುರೋಹಿತರು ಪೂಜಾದಿಗಳಲ್ಲಿ ತಲ್ಲೀನರಾಗಿದ್ದರು. ಇದೇ ಅಕ್ಟೋಬರ್ 17 ರ “ತುಲಾ ಸಂಕ್ರಮಣ”ದಂದು ಇಲ್ಲಿ ತೀರ್ಥೋದ್ಭವ ಆಗಲಿರುವ ಹಾಗೂ ಸಹಸ್ರಾರು ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ಅಲ್ಲಿನ ಸಿಬ್ಬಂದಿ ಇಡೀ ಆವರಣವನ್ನು ಶುಚಿಗೊಳಿಸಲು ಶ್ರಮಿಸುತ್ತಿದ್ದರು. ಪ್ರವಾಸಿಗರು ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಿದ್ದರು.

















------------------------------------------------------------------------------------
ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಸನ್ನಿಧಿಯಲ್ಲಿ......



















No comments:

Post a Comment