* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday 28 February 2020

ಸನ್ಮಾನ ಸಮಾರಂಭ- ದಿ.28-02-2020. ಶುಕ್ರವಾರ, Felicitation

ತುಮಕೂರಿನ ಕ್ಯಾತಸಂದ್ರದಲ್ಲಿ ಇಂದು (28-02-2020, ಶುಕ್ರವಾರ) ಬೆಳಗ್ಗೆ ಏರ್ಪಟ್ಟಿದ್ದ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪರವರ 78 ನೇ ಹುಟ್ಟುಹಬ್ಬ ಸಮಾರಂಭದಲ್ಲಿ ನನ್ನನ್ನು ತುಮಕೂರು ನಗರದ ಶಾಸಕರೂ, ಆತ್ಮೀಯ ಮಿತ್ರರೂ ಆದ ಶ್ರೀ ಜಿ.ಜಿ.ಜ್ಯೋತಿಗಣೇಶ್ ರವರು ಸನ್ಮಾನಿಸಿದರು.  ತುಮಕೂರಿನ ಪ್ರತಿಷ್ಠಿತ ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪರಮೇಶ್, ಬಿಜೆಪಿ ಧುರೀಣರಾದ ಶ್ರೀ ಶಿವಪ್ರಸಾದ್, ಶ್ರೀ ರುದ್ರೇಶ್, ತುಮಕೂರು ಮಹಾನಗರ ಪಾಲಿಕೆ ಉಪಮೇಯರ್ ಶ್ರೀಮತಿ ಶಶಿಕಲಾ ಗಂಗಹನುಮಯ್ಯ, ಪಾಲಿಕೆಯ ಅನೇಕ ಸದಸ್ಯರುಗಳು ಉಪಸ್ಥಿತರಿದ್ದರು. ನನ್ನನ್ನು ಆಹ್ವಾನಿಸಿ, ಸನ್ಮಾನಕ್ಕೆ ಕಾರಣಕರ್ತರಾದ ಹಾಗೂ ಈ ಕಾರ್ಯಕ್ರಮ ಆಯೋಜಿಸಿದ್ದ "ಆಟೋ ಯಡಿಯೂರಪ್ಪ" ಎಂದೇ ಪ್ರಸಿದ್ಧರಾಗಿರುವ ಶ್ರೀ ಕೆ.ಎಂ.ಶಿವಕುಮಾರ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ.










Saturday 22 February 2020

with Justice Sri M N Venkatachalaiah, Former CJI, - R.S.Iyer and R.Vishwanathan ಸುಪ್ರಿಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ನ್ಯಾ. ಶ್ರೀ ಎಂ.ಎನ್.ವೆಂಕಟಾಚಲಯ್ಯರವರೊಂದಿಗೆ

With Former Chief Justice of Supreme Court of India Justice Sri M.N. Venkatachalaiah...ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯಲ್ಲಿ ದಿನಾಂಕ 26-04-2015, ಭಾನುವಾರ ಏರ್ಪಟ್ಟಿದ್ದ "ವಾತ್ಸಲ್ಯದ ಮಡಿಲಲ್ಲಿ" ಕೃತಿಯ ಲೋಕಾರ್ಪಣೆ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯನ್ಯಾಯಾಧೀಶರಾದ ಪದ್ಮವಿಭೂಷಣ ನ್ಯಾ.ಶ್ರೀ ಎಂ.ಎನ್.ವೆಂಕಟಾಚಲಯ್ಯ ಅವರನ್ನು ನಾನು ಮತ್ತು ವಿಶ್ವನಾಥನ್ .Vishwanathan R. Tumkur ಭೇಟಿಯಾದಾಗ.....(26-04-2015, ಭಾನುವಾರ) . (R S Iyer and R Vishwanathan)







with writer Sri Prabhuprasad, Mysore

***************************************************************************

2017 ರ ಮಾರ್ಚ್ ತಿಂಗಳಿನಲ್ಲಿ "ಡಿವಿಜಿ ನೆನಪು" ಮಾಸಿಕ  ಉಪನ್ಯಾಸವು 60 ನೇ ತಿಂಗಳು ಪೂರೈಸಿದ ನೆನಪಿಗಾಗಿ ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಸರಸ್ ಫೌಂಡೇಷನ್ ವತಿಯಿಂದ ಏರ್ಪಟ್ಟಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಶ್ರೀ ಎಂ.ಎನ್.ವೆಂಕಟಾಚಲಯ್ಯ  ಅವರು ಮುಖ್ಯಅತಿಥಿಗಳಾಗಿ ಆಗಮಿಸಿದ್ದಾಗ ಅವರೊಂದಿಗೆ ನಾನು ಮತ್ತು ವಿಶ್ವನಾಥನ್ ಇರುವ ಚಿತ್ರಗಳು 








R.S.Iyer, Sriranjini, Justice Sri M.N.Venkatachalaiah, Smt Vidya Shivasathya, R.Vishwanathan

Wednesday 12 February 2020

with Sri Praveen Godkhindi, Eminent Classical Hindustani Flute Player. ಶ್ರೀ ಪ್ರವೀಣ್ ಗೋಡಖಿಂಡಿಯವರೊಂದಿಗೆ... 12-02-2020 (R S Iyer Tumkur)

ಅಂತರರಾಷ್ಟ್ರೀಯ ಖ್ಯಾತಿಯ ವೇಣುವಾದಕರಾದ ಶ್ರೀ ಪ್ರವೀಣ್ ಗೋಡಖಿಂಡಿಯವರನ್ನು ನೋಡುವ, ಅವರೊಡನೆ ಕೆಲ ನಿಮಿಷ ಮಾತನಾಡುವ ಹಾಗೂ ಅವರ ಕೊಳಲು ವಾದನದ ಇಂಚರವನ್ನಾಲಿಸುವ ಸದವಕಾಶ ಇಂದು (ದಿ.12-02-2020, ಬುಧವಾರ) ಸಂಜೆ ನನಗೆ ಮತ್ತು ವಿಶ್ವನಾಥನ್ ಗೆ ಒದಗಿಬಂತು.
ನಮ್ಮ ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ಏರ್ಪಟ್ಟಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಪ್ರವೀಣ್ ಗೋಡಖಿಂಡಿಯವರು ತಮ್ಮ ವೇಣುವಾದನದ ಧ್ವನಿಯಿಂದ ಸಭಾಂಗಣದಲ್ಲಿ ಅಕ್ಷರಶಃ ಮೋಡಿಯನ್ನೇ ಮಾಡಿಬಿಟ್ಟರು. ಬಳಿಕ ಮಾತನಾಡುತ್ತ, "ಬಾಲಿವುಡ್, ಟ್ಯಾಲಿವುಡ್, ಹಾಲಿವುಡ್, ಸ್ಯಾಂಡಲ್ ವುಡ್ ಗಳ ನಡುವೆ ನಮ್ಮ ಶಾಸ್ತ್ರೀಯ ಸಂಗೀತವನ್ನು ನಿರ್ಲಕ್ಷಿಸದೆ, ಆಸಕ್ತಿಯಿಂದ ಆಲಿಸಿ" ಎಂದು ವಿನಂತಿಸಿದಾಗ ಇಡೀ ಯುವ ಸಮೂಹ ಭಾರಿ ಕರತಾಡನದೊಂದಿಗೆ ಸಹಮತ ವ್ಯಕ್ತಪಡಿಸಿದ್ದು ರೋಮಾಂಚನವಾಗಿತ್ತು.
ಯುವ ಸಮೂಹದಲ್ಲಿ ಇಂತಹುದೊಂದು ಸದಭಿರುಚಿಯನ್ನು ಪ್ರೇರೇಪಿಸುವ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಿದ ಶ್ರೀದೇವಿ ಮೆಡಿಕಲ್ ಕಾಲೇಜನ್ನು. ವಿಶೇಷವಾಗಿ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಆರ್.ಹುಲಿನಾಯ್ಕರ್ ರವರನ್ನು ಅಭಿನಂದಿಸಲೇಬೇಕು.
🙏

with Sri Praveen Godkhindi, Eminent Classical Hindustani Flute Player.. R S Iyer Tumkur and R Vishwanathan Tumkur