* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 9 November 2020

Markonahalli Dam -2020 (R S Iyer, R. Vishwanathan & V S Ramachandran)


ಮಾರ್ಕೋನಹಳ್ಳಿ ಜಲಾಶಯ ಈಗ ತುಂಬಿ ತುಳುಕುತ್ತಿದೆ. ಶತಮಾನದ ಇತಿಹಾಸ ಹೊಂದಿರುವ ಹಾಗೂ ಸ್ವಯಂಚಾಲಿತ ತಂತ್ರಜ್ಞಾನದ ಈ ಜಲಾಶಯ ಕುಣಿಗಲ್ ಸನಿಹವಿದ್ದು, ತುಮಕೂರು ಜಿಲ್ಲೆಯ ಹೆಮ್ಮೆಯೆನಿಸಿದೆ. ತುಂಬಿ ಹರಿಯುತ್ತಿರುವ ಇದನ್ನು ನೋಡುವುದೇ ಒಂದು ಖುಷಿ. ದಿನಾಂಕ 03.11.2020 ರಂದು ಸಂಜೆ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಅಲ್ಲಿಗೆ ಭೇಟಿ ಕೊಟ್ಟಾಗ, ಸೂರ್ಯ ಬಾನಂಗಳದಿಂದ ಮೋಡಗಳ ಹಿನ್ನೆಲೆಯಲ್ಲಿ ಮರೆಯಾಗುತ್ತಿದ್ದ. ಆಗಸದಲ್ಲಿ ಬಣ್ಣದ ಚಿತ್ತಾರಗಳು ಸೃಷ್ಟಿಯಾಗಿತ್ತು. ಮತ್ತೊಂದೆಡೆ ಧೋ ಎಂದು ನೀರು ಜಲಾಶಯದಿಂದ ಹೊರ ನುಗ್ಗುತ್ತಿತ್ತು. ಅದೇ ಹೊತ್ತಿನಲ್ಲಿ ಜಲಾಶಯದಲ್ಲಿ ಸುತ್ತಾಡಿದಾಗ, ಆ ಸೊಬಗು ಹೀಗಿತ್ತು...

ವಿಡಿಯೋ ವಿಕ್ಷಣೆಗೆ ಈ ಕೆಳಗಿನ ಲಿಂಕ್ ಒತ್ತಿ.








 

Tuesday 3 November 2020

Yedeyuru Temple 2020 (R S Iyer, R. Vishwanathan & V S Ramachandran)

ಎಡೆಯೂರು ದೇವಾಲಯದಲ್ಲಿ
*************************
ಶುಭ್ರ ಪರಿಸರ, ಅಚ್ಚುಕಟ್ಟುತನ, ಆಕರ್ಷಕ ದೀಪಾಲಂಕಾರ, ಮುಸ್ಸಂಜೆಯ ನಿಶ್ಯಬ್ದ ವಾತಾವರಣದಿಂದ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯ ನಮ್ಮ ಮನಸ್ಸನ್ನು ಪ್ರಭಾವಿಸಿತು. ನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲೊಂದಾಗಿ ಪ್ರಸಿದ್ಧಿ ಪಡೆದಿರುವ ಎಡೆಯೂರು ದೇವಾಲಯವು, ಕುಣಿಗಲ್ ಸಮೀಪ ಹೆದ್ದಾರಿ ಬದಿ ಕಂಗೊಳಿಸುತ್ತಿದೆ. ಇಂದು (ದಿನಾಂಕ 03-11-2020, ಮಂಗಳವಾರ) ಮುಸ್ಸಂಜೆ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಅಲ್ಲಿಗೆ ಭೇಟಿ ಕೊಟ್ಟಿದ್ದೆವು.  Today evening we visited Yediyuru Sri Siddalingeshwara Swamy Temple, Yediyuru, Kunigal Taluk