* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 9 November 2020

Markonahalli Dam -2020 (R S Iyer, R. Vishwanathan & V S Ramachandran)


ಮಾರ್ಕೋನಹಳ್ಳಿ ಜಲಾಶಯ ಈಗ ತುಂಬಿ ತುಳುಕುತ್ತಿದೆ. ಶತಮಾನದ ಇತಿಹಾಸ ಹೊಂದಿರುವ ಹಾಗೂ ಸ್ವಯಂಚಾಲಿತ ತಂತ್ರಜ್ಞಾನದ ಈ ಜಲಾಶಯ ಕುಣಿಗಲ್ ಸನಿಹವಿದ್ದು, ತುಮಕೂರು ಜಿಲ್ಲೆಯ ಹೆಮ್ಮೆಯೆನಿಸಿದೆ. ತುಂಬಿ ಹರಿಯುತ್ತಿರುವ ಇದನ್ನು ನೋಡುವುದೇ ಒಂದು ಖುಷಿ. ದಿನಾಂಕ 03.11.2020 ರಂದು ಸಂಜೆ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಅಲ್ಲಿಗೆ ಭೇಟಿ ಕೊಟ್ಟಾಗ, ಸೂರ್ಯ ಬಾನಂಗಳದಿಂದ ಮೋಡಗಳ ಹಿನ್ನೆಲೆಯಲ್ಲಿ ಮರೆಯಾಗುತ್ತಿದ್ದ. ಆಗಸದಲ್ಲಿ ಬಣ್ಣದ ಚಿತ್ತಾರಗಳು ಸೃಷ್ಟಿಯಾಗಿತ್ತು. ಮತ್ತೊಂದೆಡೆ ಧೋ ಎಂದು ನೀರು ಜಲಾಶಯದಿಂದ ಹೊರ ನುಗ್ಗುತ್ತಿತ್ತು. ಅದೇ ಹೊತ್ತಿನಲ್ಲಿ ಜಲಾಶಯದಲ್ಲಿ ಸುತ್ತಾಡಿದಾಗ, ಆ ಸೊಬಗು ಹೀಗಿತ್ತು...

ವಿಡಿಯೋ ವಿಕ್ಷಣೆಗೆ ಈ ಕೆಳಗಿನ ಲಿಂಕ್ ಒತ್ತಿ.








 

No comments:

Post a Comment