* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 16 October 2022

ಡಾ. ಬಾಬು ಕೃಷ್ಣಮೂರ್ತಿ ಅವರಿಗೆ ಗೌರವಾರ್ಪಣೆ- 16-10-2022- Dr. Babu Krishnamurthy- Felicitation Tumkur

ಮಹಾನ್ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಕುರಿತ 'ಅಜೇಯ' ಕೃತಿ ಖ್ಯಾತಿಯ ಪ್ರಸಿದ್ಧ ಸಾಹಿತಿಗಳೂ, ಪತ್ರಕರ್ತರೂ, ಮಿಗಿಲಾಗಿ ದಶಕಗಳ ಕಾಲದ ನಮ್ಮ ಆತ್ಮೀಯರೂ, 80 ವಸಂತಗಳ ಜ್ಞಾನವೃದ್ಧರೂ ಆದ ಸನ್ಮಾನ್ಯ ಡಾ. ಬಾಬು ಕೃಷ್ಣಮೂರ್ತಿಯವರನ್ನು ನೋಡುವ, ಅವರೊಡನೆ ಮಾತನಾಡುವ ಮತ್ತು ಅವರನ್ನು ಗೌರವಿಸಿ ಆಶೀರ್ವಾದ ಪಡೆಯುವ ಸದವಕಾಶ ಇಂದು (ದಿ.16-10-2022, ಭಾನುವಾರ) ನಮಗೊದಗಿಬಂದುದು ನಮ್ಮ ಸೌಭಾಗ್ಯವೆಂದೇ ಭಾವಿಸಿದ್ದೇವೆ.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕೊಡಮಾಡಿದ 2021 ನೇ ಸಾಲಿನ "ಆದಿಕವಿ" ಪ್ರಶಸ್ತಿಗೆ ಡಾ. ಬಾಬು ಕೃಷ್ಣಮೂರ್ತಿಯವರು ಭಾಜನರಾಗಿದ್ದು, ಪ್ರಶಸ್ತಿ ಸ್ವೀಕಾರಕ್ಕಾಗಿ ಇಂದು ಬೆಳಗ್ಗೆ ಅವರು "ನಮ್ಮ ತುಮಕೂರು" ನಗರಕ್ಕೆ ಆಗಮಿಸಿದ್ದರು. ಆಗ ನಾನು ಮತ್ತು ವಿಶ್ವನಾಥನ್ ಅವರನ್ನು ಭೇಟಿಯಾಗಿ, ಸರಸ್ ಫೌಂಡೇಷನ್ ಮತ್ತು ಶ್ರೀ ಶಂಕರ ಜಯಂತಿ ಸಭಾ ಪರವಾಗಿ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ಸಂತೋಷಿಸಿದೆವು. ಡಾ. ಬಾಬು ಕೃಷ್ಣಮೂರ್ತಿಯವರೂ ಅಷ್ಟೇ ಆನಂದಿಸಿದರು. ಅಂತರಂಗದಿಂದ ಮಾತನಾಡಿದರು.
ದೇವರು ಅವರಿಗೆ ಆಯುರಾರೋಗ್ಯ ನೀಡಲಿ. ಅವರಿಂದ ಇನ್ನಷ್ಟು ಮೌಲಿಕ ಕೃತಿಗಳು ಹೊರಹೊಮ್ಮಲಿ ಎಂಬುದು ನಮ್ಮ ಹೃದಯಾಂತರಾಳದ ಹಾರೈಕೆ.
- ಆರ್.ಎಸ್.ಅಯ್ಯರ್, ತುಮಕೂರು, ದಿ. 16-10-2022 ಭಾನುವಾರ

Insta: https://www.instagram.com/r_s_iyer/

Youtube: https://youtu.be/crdQhZDTVyY









-----------------------------------------------------------
VIDEO





No comments:

Post a Comment