ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Monday, 9 June 2025

Sriranjini Visit /2025 / ಶ್ರೀರಂಜಿನಿ ಭೇಟಿ


 ತಾತ-ಮೊಮ್ಮಗಳ ಸಂತಸದ ಕ್ಷಣಗಳು.....
ನಮ್ಮ ಸಹೋದರಿ ಶ್ರೀಮತಿ ಆರ್.ವಿದ್ಯಾ ಮತ್ತು ಪ್ರಸಿದ್ಧ ಸಂಗೀತ ಸಂಯೋಜಕರೂ, ಸಂಗೀತ ನಿರ್ದೇಶಕರೂ ಆಗಿರುವ ಶ್ರೀ ಶಿವಸತ್ಯ ದಂಪತಿಯ ಸುಪುತ್ರಿ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಕು. ಶ್ರೀರಂಜಿನಿ ತನ್ನ ತಾತ (ನಮ್ಮ ತಂದೆ) ಸ್ವಾತಂತ್ರ್ಯ ಹೋರಾಟಗಾರರಾದ ವಿ.ಎಸ್.ರಾಮಚಂದ್ರನ್ (96) ಅವರ ಕುಶಲೋಪರಿ ವಿಚಾರಿಸಲು ಬೆಂಗಳೂರಿನಿಂದ ಆಗಮಿಸಿ, ಜೂನ್ 7 ಮತ್ತು 8 ರಂದು ಎರಡು ದಿನಗಳ ಕಾಲ ತನ್ನ ತಾತನೊಂದಿಗೆ ಸಂತಸದ ಕ್ಷಣಗಳನ್ನು ಕಳೆದಳು.
ಶನಿವಾರ ವಿಶ್ವನಾಥನ್ ಜೊತೆಯಲ್ಲಿ ಹೆಬ್ಬೂರಿನ ಶ್ರೀ ಕೋದಂಡಾಶ್ರಮ ಮಠಕ್ಕೆ ತೆರಳಿ ಶ್ರೀ ಕಾಮಾಕ್ಷಿ ದೇವಿಯ ದರ್ಶನ ಪಡೆದಳು. ಭಾನುವಾರ ಸುಪ್ರಸಿದ್ಧ ಯಾತ್ರಾ ಸ್ಥಳವಾದ ದೇವರಾಯನದುರ್ಗವನ್ನು ವೀಕ್ಷಿಸಿ ಸಂತೋಷಪಟ್ಟಳು.
ಭಾನುವಾರ ಮಧ್ಯಾಹ್ನ ಶ್ರೀರಂಜಿನಿ ಬೆಂಗಳೂರಿಗೆ ಹೊರಡುವಾಗ, ಪ್ರಸ್ತುತ TCS ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ಈ ಮೊಮ್ಮೊಗಳಿಗೆ ಶಾಲು ಹೊದಿಸುವ ಮೂಲಕ ತಾತ ರಾಮಚಂದ್ರನ್ ರವರು ಶುಭಾಶೀರ್ವಾದ ಮಾಡಿದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 08-06-2025 #rsiyertumakuru








Sunday, 1 June 2025

R Gayathri Visit - 01-06-2025

ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರ ಯೋಗಕ್ಷೇಮ ವಿಚಾರಿಸಲು ನಮ್ಮ ಸಹೋದರಿ ಶ್ರೀಮತಿ ಆರ್. ಗಾಯತ್ರಿ ಸತ್ಯನಾರಾಯಣ್ ತನ್ನ ಮಕ್ಕಳಾದ ಹೆಚ್.ಎಸ್. ಪವನ್ ಮತ್ತು ನಮಿತಾ ಅವರ ಜೊತೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದು, ಈ ಭೇಟಿ ನಮ್ಮೆಲ್ಲರಿಗೂ ಸಂತಸ ಮೂಡಿಸಿತು.
ನಿನ್ನೆ (ದಿ. 31-05-2025) ಸಂಜೆ ಅಗಮಿಸಿದ ಅವರು, ಸಂಜೆಯೇ ತುಮಕೂರಿನ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಇಂದು (ದಿ.01-06-2025) ಬೆಳಗ್ಗೆ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಾಲಯ, ಜಯನಗರದ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಬಳಿಕ ಸಮೀಪದ ನಾಮದ ಚಿಲುಮೆ, ದೇವರಾಯನದುರ್ಗ ಹಾಗೂ ದುರ್ಗದ ಹಳ್ಳಿಯ ಶ್ರೀ ವಿದ್ಯಾಶಂಕರ ದೇವಾಲಯ ವೀಕ್ಷಿಸಿ ಸಂತೋಷಪಟ್ಟರು. ಇಂದು ನಾಮದ ಚಿಲುಮೆ ಮತ್ತು ದೇವರಾಯನದುರ್ಗದಲ್ಲಿ ವಿಪರೀತ ಜನಜಂಗುಳಿ ಇತ್ತಂತೆ. ಮಧ್ಯಾಹ್ನಾನಂತರ ಇಲ್ಲಿಂದ ಬೆಂಗಳೂರಿಗೆ ತೆರಳಿದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 01-06-2025