ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Monday, 9 June 2025

Sriranjini Visit /2025 / ಶ್ರೀರಂಜಿನಿ ಭೇಟಿ


 ತಾತ-ಮೊಮ್ಮಗಳ ಸಂತಸದ ಕ್ಷಣಗಳು.....
ನಮ್ಮ ಸಹೋದರಿ ಶ್ರೀಮತಿ ಆರ್.ವಿದ್ಯಾ ಮತ್ತು ಪ್ರಸಿದ್ಧ ಸಂಗೀತ ಸಂಯೋಜಕರೂ, ಸಂಗೀತ ನಿರ್ದೇಶಕರೂ ಆಗಿರುವ ಶ್ರೀ ಶಿವಸತ್ಯ ದಂಪತಿಯ ಸುಪುತ್ರಿ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಕು. ಶ್ರೀರಂಜಿನಿ ತನ್ನ ತಾತ (ನಮ್ಮ ತಂದೆ) ಸ್ವಾತಂತ್ರ್ಯ ಹೋರಾಟಗಾರರಾದ ವಿ.ಎಸ್.ರಾಮಚಂದ್ರನ್ (96) ಅವರ ಕುಶಲೋಪರಿ ವಿಚಾರಿಸಲು ಬೆಂಗಳೂರಿನಿಂದ ಆಗಮಿಸಿ, ಜೂನ್ 7 ಮತ್ತು 8 ರಂದು ಎರಡು ದಿನಗಳ ಕಾಲ ತನ್ನ ತಾತನೊಂದಿಗೆ ಸಂತಸದ ಕ್ಷಣಗಳನ್ನು ಕಳೆದಳು.
ಶನಿವಾರ ವಿಶ್ವನಾಥನ್ ಜೊತೆಯಲ್ಲಿ ಹೆಬ್ಬೂರಿನ ಶ್ರೀ ಕೋದಂಡಾಶ್ರಮ ಮಠಕ್ಕೆ ತೆರಳಿ ಶ್ರೀ ಕಾಮಾಕ್ಷಿ ದೇವಿಯ ದರ್ಶನ ಪಡೆದಳು. ಭಾನುವಾರ ಸುಪ್ರಸಿದ್ಧ ಯಾತ್ರಾ ಸ್ಥಳವಾದ ದೇವರಾಯನದುರ್ಗವನ್ನು ವೀಕ್ಷಿಸಿ ಸಂತೋಷಪಟ್ಟಳು.
ಭಾನುವಾರ ಮಧ್ಯಾಹ್ನ ಶ್ರೀರಂಜಿನಿ ಬೆಂಗಳೂರಿಗೆ ಹೊರಡುವಾಗ, ಪ್ರಸ್ತುತ TCS ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ಈ ಮೊಮ್ಮೊಗಳಿಗೆ ಶಾಲು ಹೊದಿಸುವ ಮೂಲಕ ತಾತ ರಾಮಚಂದ್ರನ್ ರವರು ಶುಭಾಶೀರ್ವಾದ ಮಾಡಿದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 08-06-2025 #rsiyertumakuru








No comments:

Post a Comment