* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 15 December 2019

Kote Betta Narasimha Swamy Temple, ಕೋಟೆ ಬೆಟ್ಟ ನರಸಿಂಹಸ್ವಾಮಿ ದೇಗುಲ 15.12.2019

ಶ್ರೀ ನರಸಿಂಹಸ್ವಾಮಿಯ ಉಗ್ರ ಸ್ವರೂಪದ ಭವ್ಯಮೂರ್ತಿಯನ್ನು ದರ್ಶಿಸಿದಾಗ ಆಗುವ ಅನುಭವವೇ ವಿಭಿನ್ನ. ಬೆಟ್ಟದ ತುದಿಯ ದೇಗುಲದ ಪಾರ್ಶ್ವದಲ್ಲಿ ನಿರ್ಮಿಸಲ್ಪಟ್ಟಿರುವ ಶ್ರೀ ನರಸಿಂಹಾವತಾರದ ಈ “ಅಪರೂಪದ ಬೃಹತ್ ವಿಗ್ರಹ”ದ ಮುಂದೆ ನಿಂತಾಗ, ಸುಯ್ಯನೆ ಬೀಸುವ ತಂಗಾಳಿಯ ನಡುವೆ ಹಿಂಬದಿಯ ಬೃಹತ್ ಕೆರೆ, ಬೆಟ್ಟಗುಡ್ಡಗಳ ರಮ್ಯ ನೋಟ ನಮ್ಮಿರುವಿಕೆಯನ್ನೇ ಮರೆಸಿಬಿಡುತ್ತದೆ! ಮಂಡ್ಯಜಿಲ್ಲೆ ನಾಗಮಂಗಲ ತಾಲ್ಲೂಕಿನ ಸುಪ್ರಸಿದ್ಧ ಕೋಟೆಬೆಟ್ಟ ಗ್ರಾಮದ ಶ್ರೀ ಕಂಬದ ನರಸಿಂಹಸ್ವಾಮಿ ದೇವಾಲಯದ ಪ್ರಮುಖ ಆಕರ್ಷಣೆಯಿದು.

ಕಂಬದಿಂದ ಸೀಳಿ ಬಂದ ಉಗ್ರ ನರಸಿಂಹನು ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವನ ಹೊಟ್ಟೆಯನ್ನು ಬಗೆಯುವ ದೃಶ್ಯದ ಈ ವಿಗ್ರಹ ಸುಮಾರು 20 ಅಡಿಗಳಿಗೂ ಎತ್ತರವಿದ್ದು ಎಲ್ಲರ ಮನಸೂರೆಗೊಳ್ಳುತ್ತದೆ. ಇನ್ನು ಈ ಪುರಾತನ ದೇಗುಲದಲ್ಲಿ ವಿಗ್ರಹವಿಲ್ಲ. ಕಂಬವೊಂದರಲ್ಲಿ ಶ್ರೀನರಸಿಂಹಸ್ವಾಮಿ ಉದ್ಭವವಾಗಿದೆಯೆಂಬ ಪ್ರತೀತಿ ಇದ್ದು, ಆ ಕಂಬವೇ ಇಲ್ಲಿನ ಆರಾಧ್ಯದೈವ. ದೇವಾಲಯವನ್ನು ಸೊಬಗಿನಿಂದ ನವೀಕರಿಸಲಾಗಿದೆ. ತುಂಬ ಅಚ್ಚುಕಟ್ಟಾಗಿದೆ. ದೇಗುಲ ಪ್ರಾಂಗಣದಲ್ಲಿ ಕುಳಿತರೆ, ಸುತ್ತಲಿನ ಪ್ರಕೃತಿಯ ಸೊಬಗು ಅಕ್ಷರಶಃ ಮೈಮರೆಸಿಬಿಡುತ್ತದೆ.

ದಿನಾಂಕ 15-12-2019, ಭಾನುವಾರ ಸಂಜೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಇಲ್ಲಿಗೆ ಭೇಟಿ ನೀಡಿದ್ದೆವು. ಸಮಯಾಭಾವದಿಂದ ಇಲ್ಲೇ ಪಕ್ಕದಲ್ಲಿರುವ ಶ್ರೀ ಕೋಟೆ ವೆಂಕಟರಮಣ ದೇಗುಲದ ಬೆಟ್ಟವನ್ನು ಏರಲು ಸಾಧ್ಯವಾಗಲಿಲ್ಲ. ಅಂದಹಾಗೆ ಈ ಕೋಟೆ ಬೆಟ್ಟವನ್ನು ನಮ್ಮ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ಮೂಲಕ ಸುಲಭವಾಗಿ ತಲುಪಬಹುದು.
https://www.youtube.com/watch?v=xHsjs_vYao0
http://rsiyertumkur.blogspot.com/











No comments:

Post a Comment