* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 1 October 2020

Guluru Ganapathi



 ಗೂಳೂರು ಗಣಪನ ನಿರ್ಮಾಣ ಕಾರ್ಯ…

*****************************


ಇತಿಹಾಸ ಪ್ರಸಿದ್ಧ “ಗೂಳೂರು ಗಣಪ” ಭರದಿಂದ ಸಿದ್ಧಗೊಳ್ಳುತ್ತಿದ್ದಾನೆ.


ಹತ್ತೂಮುಕ್ಕಾಲು ಅಡಿಗಳಷ್ಟು ಅಗಲ ಹಾಗೂ ಅಷ್ಟೇ ಅಡಿಗಳಷ್ಟು ಎತ್ತರದ “ಬೃಹತ್ ಗಣಪ”ನನ್ನು ರೂಪಿಸುವ ಕಾರ್ಯವು ತುಮಕೂರು ಹೊರವಲಯದ ಗೂಳೂರಿನ ಶ್ರೀ ಗಣಪತಿ ದೇಗುಲದಲ್ಲಿ ಶ್ರದ್ಧೆಯಿಂದ ಆರಂಭಗೊಂಡಿದೆ.


ಇಂದು (30-09-2020) ಸಂಜೆ ನಾನು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ಭೇಟಿ ಕೊಟ್ಟಾಗ, ಶಿಲ್ಪಿ ಶ್ರೀ ಗುರುಮೂರ್ತಿರವರು ಗಣಪನ ಹಸ್ತಗಳ ನಿರ್ಮಾಣ ಕಾರ್ಯದಲ್ಲಿ ಕುಶಲತೆಯಿಂದ ನಿರತರಾಗಿದ್ದರು. “ಕಳೆದ ಆರು ದಿನಗಳಿಂದ ಗಣಪನ ನಿರ್ಮಾಣವನ್ನು ಆರಂಭಿಸಲಾಗಿದೆ. ಅವನ ಕೃಪೆಯಿಂದ ಇವತ್ತಿಗೆ ಇಷ್ಟು ಸಾಧ್ಯವಾಗಿದೆ. ಪ್ರತಿದಿನವೂ ಈ ಕೆಲಸ ಮುಂದುವರೆಯುತ್ತದೆ. ನಮ್ಮ ತಂದೆಯವರ ಕಾಲದಿಂದಲೂ ಈ ಸೇವೆಯನ್ನು ನಡೆಸುತ್ತಿದ್ದೇವೆ. ಕಳೆದ 25 ವರ್ಷಗಳಿಂದ ನಾನು ಗಣಪನ ನಿರ್ಮಾಣ ಮಾಡುತ್ತಿದ್ದೇನೆ. ಇದೆಲ್ಲ ಆ ಗಣಪನ ಕೃಪೆ” ಎಂದು ಅವರು ನಮ್ರತೆಯಿಂದ ಪ್ರತಿಕ್ರಿಯಿಸಿದರು.


ತುಮಕೂರಿನ ಹೆಮ್ಮೆಯ ಈ “ಗೂಳೂರು ಗಣಪ” ಸಂಪೂರ್ಣವಾಗಿ ಸಿದ್ಧಗೊಳ್ಳಲು ಇನ್ನೂ ಒಂದೂವರೆ ತಿಂಗಳು ಆಗಲಿದೆ. ನವೆಂಬರ್ 14 ರ ದೀಪಾವಳಿಯಿಂದ “ಗೂಳೂರು ಗಣಪ”ನ ದರ್ಶನಭಾಗ್ಯ ಭಕ್ತಾದಿಗಳಿಗೆ ಲಭಿಸಲಿದೆ.


Historic “Guluru Ganapathi” is preparing by Shilpi Sri Gurumurthy at the temple of Guluru, Tumakuru Taluk. Today evening along with my father Sri V.S.Ramachandran I visited there. Festival starts from 14th November.



No comments:

Post a Comment