Tuesday 20 December 2022
Saturday 12 November 2022
Sunday 16 October 2022
ಡಾ. ಬಾಬು ಕೃಷ್ಣಮೂರ್ತಿ ಅವರಿಗೆ ಗೌರವಾರ್ಪಣೆ- 16-10-2022- Dr. Babu Krishnamurthy- Felicitation Tumkur
ಮಹಾನ್ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಕುರಿತ 'ಅಜೇಯ' ಕೃತಿ ಖ್ಯಾತಿಯ ಪ್ರಸಿದ್ಧ ಸಾಹಿತಿಗಳೂ, ಪತ್ರಕರ್ತರೂ, ಮಿಗಿಲಾಗಿ ದಶಕಗಳ ಕಾಲದ ನಮ್ಮ ಆತ್ಮೀಯರೂ, 80 ವಸಂತಗಳ ಜ್ಞಾನವೃದ್ಧರೂ ಆದ ಸನ್ಮಾನ್ಯ ಡಾ. ಬಾಬು ಕೃಷ್ಣಮೂರ್ತಿಯವರನ್ನು ನೋಡುವ, ಅವರೊಡನೆ ಮಾತನಾಡುವ ಮತ್ತು ಅವರನ್ನು ಗೌರವಿಸಿ ಆಶೀರ್ವಾದ ಪಡೆಯುವ ಸದವಕಾಶ ಇಂದು (ದಿ.16-10-2022, ಭಾನುವಾರ) ನಮಗೊದಗಿಬಂದುದು ನಮ್ಮ ಸೌಭಾಗ್ಯವೆಂದೇ ಭಾವಿಸಿದ್ದೇವೆ.
Saturday 15 October 2022
ದೇವರಾಯನದುರ್ಗದ ಸೊಬಗು- 11-10-2022- Beauty of Devarayanadurga Hills, Tumakuru
ದೇವರಾಯನದುರ್ಗದ ನಿಸರ್ಗ ಸೌಂದರ್ಯ ಈಗ ಮೈತುಂಬಿಕೊಂಡಿದೆ. ಮೋಡ ಕವಿದ ವಾತಾವರಣದ ಮಧ್ಯೆ ಆಗಾಗ ಸುರಿವ ಮಳೆಯ ಸೊಬಗು ಅವರ್ಣನೀಯ. ಮೇಲಿನ ಬೆಟ್ಟದ ಮೇಲೇರಿದರೆ, ಕಪ್ಪು-ಬಿಳುಪಿನ ಮೋಡಗಳ ಚಲನೆ, ತಂಗಾಳಿ, ದೂರದಲ್ಲಿ ಸುರಿವ ಮಳೆಯ ಸದ್ದು, ಹಸಿರು ಹೊದ್ದ ಬೆಟ್ಟಗುಡ್ಡಗಳು, ದಟ್ಟಾರಣ್ಯ -ಹೀಗೆ ಒಂದೊಂದೂ ರೋಮಾಂಚನಕಾರಿ. ದಿ.11-10-2022 ರಂದು ನಾನು ಮತ್ತು ವಿಶ್ವನಾಥನ್ ದೇವರಾಯನದುರ್ಗಕ್ಕೆ ಹೋದಾಗ ಕಂಡ ದೃಶ್ಯಗಳಿವು.
-R. S. Iyer, Tumakuru
'ನಮ್ಮ ತುಮಕೂರು' ನಗರದ ಸನಿಹದ ದೇವರಾಯನದುರ್ಗದ ಮೇಲಿನ ಬೆಟ್ಟದ ಮೇಲೆ ದಿ. 11-10-2022 ರಂದು ನಾನು ಮತ್ತು ವಿಶ್ವನಾಥನ್ ನಿಂತಾಗ ಕಾಣಿಸಿದ ಕೆಳಗಿನ ಬೆಟ್ಟದಲ್ಲಿರುವ "ದೇವರಾಯನದುರ್ಗ" ಗ್ರಾಮದ ವಿಹಂಗಮ ನೋಟವಿದು (1 ನೇ ಚಿತ್ರ). ಅದೇ ರೀತಿ ಮೇಲಿನ ಬೆಟ್ಟದ ರಮಣೀಯ ನೋಟವೂ ಇಲ್ಲಿ ಲಭಿಸಿತು (2 ನೇ ಚಿತ್ರ). ಕೆಳಗಿನ ಬೆಟ್ಟದ ದೇವಾಲಯದ ಹಿಂಬದಿಯಲ್ಲಿರುವ ಕೊಳದ ಸೊಬಗಿದು (4 ನೇ ಚಿತ್ರ).
-------------------------------------------------------------------------
VIDEO
Friday 14 October 2022
Beauty of the Guluru Lake - 07-10-2022- ಗೂಳೂರು ಕೆರೆಯ ಸೊಬಗು
ಹೌದು, ಇದು ನಮ್ಮೂರಿನ "ದೂದ್ ಸಾಗರ್" ! 'ನಮ್ಮ ತುಮಕೂರು' ನಗರಕ್ಕೆ ಹೊಂದಿಕೊಂಡಿರುವ "ಗೂಳೂರು" ಗ್ರಾಮದ ಕೆರೆ ಇತ್ತೀಚಿನ ಮಳೆಯಿಂದ ತುಂಬಿ ಹರಿಯುತ್ತಿದೆ. ಕೋಡಿಯಿಂದ ನೀರು ಧುಮ್ಮಿಕ್ಕುವುದು ಇನ್ನೂ ಮುಂದುವರೆದಿದೆ. "ಹಾಲಿನಂಥ ನೀರು" ಧೋ ಎಂಬ ಶಬ್ದದೊಡನೆ ಧುಮ್ಮಿಕ್ಕುವ ದೃಶ್ಯ ಮನೋಹರವಾಗಿದೆ. ದೂರದ "ದೂದ್ ಸಾಗರ್" ಜಲಪಾತವನ್ನು ನೆನಪಿಸುವಂತಿದೆ. ಇನ್ನೂ ಈಗಲೂ ಗೂಳೂರು ಕೆರೆ ಜನರನ್ನು ಆಕರ್ಷಿಸುತ್ತಲೇ ಇದೆ. ದಿ. 06-10-2022, ಗುರುವಾರ ಸಂಜೆ ಗೂಳೂರು ಗಣಪನ ದರ್ಶನಕ್ಕೆ ಹೋಗಿದ್ದ ನಾನು ಮತ್ತು ವಿಶ್ವನಾಥನ್ ಹಾಗೆಯೇ ಗೂಳೂರು ಕೆರೆಯತ್ತಲೂ ಹೋಗಿ ಬಂದೆವು. "ಧೋ" ಎಂದು ಸುರಿವ ನೀರಿನ ಶಬ್ದ, ಹಾಲು ಬಣ್ಣದಲ್ಲಿ ಧುಮ್ಮಿಕ್ಕುವ ನೀರು ..... ಹೊತ್ತು ಹೋಗುವುದೇ ಗೊತ್ತಾಗದು. Beauty of the Guluru Lake, very near to Tumakuru.
Making Guluru Ganapa 2022 ಗೂಳೂರು ಗಣಪತಿಯ ನಿರ್ಮಾಣ....
ಇತಿಹಾಸ ಪ್ರಸಿದ್ಧ "ಗೂಳೂರು ಗಣಪತಿ"ಯ ನಿರ್ಮಾಣ ಕಾರ್ಯ ಬಹುತೇಕ ಪೂರ್ಣವಾಗುವ ಹಂತ ತಲುಪಿದೆ. ಕಳೆದೊಂದು ತಿಂಗಳಿನಿಂದ 12 ಅಡಿ ಅಗಲ ಹಾಗೂ 12 ಅಡಿ ಎತ್ತರದ ಬೃಹತ್ ಗಣಪನ ತಯಾರಿ ಕೆಲಸವು ಎಂದಿನ ಶ್ರದ್ಧೆ-ಭಕ್ತಿಯಿಂದ ನಡೆಯುತ್ತಿದೆ. ದೀಪಾವಳಿ ಹಬ್ಬದ ದಿನ ಅಧಿಕೃತವಾಗಿ "ಗೂಳೂರು ಗಣೇಶೋತ್ಸವ" ಆರಂಭವಾಗಿ, ಮುಂದಿನ ಒಂದು ತಿಂಗಳ ಕಾಲ ನೆರವೇರಲಿದೆ. ಇದೇ ಗ್ರಾಮದ ಶ್ರೀ ಮೂರ್ತಿ ಅವರು ತಮ್ಮ ಕುಟುಂಬದ ಪರಂಪರೆಯಿಂದ ಬಂದ ಪದ್ಧತಿಯಂತೆ ಶ್ರೀ ಗಣಪತಿಯ ಮೂರ್ತಿಯನ್ನು ಮಣ್ಣಿನಿಂದ ನಿರ್ಮಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.
Tuesday 4 October 2022
Sriranjini with Sri Ramesh Aravind 2022 ರಮೇಶ್ ಅರವಿಂದ್ ಸಮ್ಮುಖ ಶ್ರೀರಂಜಿನಿ ಗಾಯನ
ರಮೇಶ್ ಅರವಿಂದ್ ಸಮ್ಮುಖ ಶ್ರೀರಂಜಿನಿ ಗಾಯನ ------------------------------------------
Saturday 24 September 2022
ಕ್ರಿಸ್ಟಲ್ ಕೆರೆ, ಅನುಪನಹಳ್ಳಿ, ತುಮಕೂರು Crystal Lake, Anupanahalli, Tumakuru 20-09-2022
Saturday 10 September 2022
Mydala Lake overflow -2022 ಕೋಡಿ ಬಿದ್ದ ಮೈದಾಳ ಕೆರೆ
“ಮೈದಾಳ ಕೆರೆ” ತುಂಬಿ ತುಳುಕುತ್ತಿದೆ. ತುಮಕೂರು ತಾಲ್ಲೂಕು ಮೈದಾಳ ಗ್ರಾಮದಲ್ಲಿರುವ ಈ ಕೆರೆಯು, ಜೈನ ಧರ್ಮೀಯರ ಪವಿತ್ರ ಸ್ಥಳವಾದ ಮಂದರಗಿರಿ ಬೆಟ್ಟದ ಹಿಂಬದಿಯಲ್ಲಿ, ಬೆಟ್ಟಗುಡ್ಡಗಳ ರಮ್ಯ ಪರಿಸರದ ನಡುವೆ ಹರಡಿಕೊಂಡಿದೆ. ಕೆರೆಯನ್ನೆಲ್ಲ ವ್ಯಾಪಿಸಿರುವ ಶುದ್ಧ ತಿಳಿನೀರು ಮನೋಹರವಾಗಿದೆ. ಕೆರೆಯಿಂದ ನೀರು ಧುಮ್ಮಿಕ್ಕುತ್ತಿದೆ. ರಭಸವಾಗಿ ನೀರು ಮುನ್ನುಗ್ಗುತ್ತಿರುವ ದೃಶ್ಯ ಮನಸೂರೆಗೊಳ್ಳುತ್ತಿದೆ. ಇಂದು (ದಿ.06-09-2022, ಮಂಗಳವಾರ) ಸಂಜೆ ನಾನು ಮತ್ತು ವಿಶ್ವನಾಥನ್ ತೆರಳಿದ್ದಾಗ, ಹೊತ್ತು ಜಾರಿದ್ದು ಗೊತ್ತೇ ಆಗಲಿಲ್ಲ!