* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday 10 September 2022

Mydala Lake overflow -2022 ಕೋಡಿ ಬಿದ್ದ ಮೈದಾಳ ಕೆರೆ

 “ಮೈದಾಳ ಕೆರೆ” ತುಂಬಿ ತುಳುಕುತ್ತಿದೆ. ತುಮಕೂರು ತಾಲ್ಲೂಕು ಮೈದಾಳ ಗ್ರಾಮದಲ್ಲಿರುವ ಈ ಕೆರೆಯು, ಜೈನ ಧರ್ಮೀಯರ ಪವಿತ್ರ ಸ್ಥಳವಾದ ಮಂದರಗಿರಿ ಬೆಟ್ಟದ ಹಿಂಬದಿಯಲ್ಲಿ, ಬೆಟ್ಟಗುಡ್ಡಗಳ ರಮ್ಯ ಪರಿಸರದ ನಡುವೆ ಹರಡಿಕೊಂಡಿದೆ. ಕೆರೆಯನ್ನೆಲ್ಲ ವ್ಯಾಪಿಸಿರುವ ಶುದ್ಧ ತಿಳಿನೀರು ಮನೋಹರವಾಗಿದೆ. ಕೆರೆಯಿಂದ ನೀರು ಧುಮ್ಮಿಕ್ಕುತ್ತಿದೆ. ರಭಸವಾಗಿ ನೀರು ಮುನ್ನುಗ್ಗುತ್ತಿರುವ ದೃಶ್ಯ ಮನಸೂರೆಗೊಳ್ಳುತ್ತಿದೆ. ಇಂದು (ದಿ.06-09-2022, ಮಂಗಳವಾರ) ಸಂಜೆ ನಾನು ಮತ್ತು ವಿಶ್ವನಾಥನ್ ತೆರಳಿದ್ದಾಗ, ಹೊತ್ತು ಜಾರಿದ್ದು ಗೊತ್ತೇ ಆಗಲಿಲ್ಲ!

ಇತ್ತೀಚಿನ ಭರ್ಜರಿ ಮಳೆಯಿಂದ ಕೆರೆ ತುಂಬಿ, ಕೋಡಿ ಬಿದ್ದು ನೀರು ಹೊರಕ್ಕೆ ಹರಿಯುತ್ತಿದೆ. ಆ ನೀರು ಕೆಸರಮಡು ರಸ್ತೆ ಮೂಲಕ ಶೆಟ್ಟಿಹಳ್ಳಿ ಕೆರೆಕಟ್ಟೆಯನ್ನು ತುಂಬಿಸಿದೆ. ಅಲ್ಲಿಂದ ಹೊರಹೊಮ್ಮುವ ನೀರು, ಕಾಲುವೆ ಮೂಲಕ ಮರಳೂರು ಕೆರೆಯತ್ತ ಹರಿಯುತ್ತಿದೆ.
ದಶಕಗಳ ಹಿಂದೆ, ಒಂದು ಕಾಲದಲ್ಲಿ ತುಮಕೂರು ನಗರದ ಜನತೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದುದೇ ಇಲ್ಲಿಂದ. ಮೈದಾಳ ಕೆರೆಯಿಂದ ಬೆಳಗುಂಬ ಮಾರ್ಗವಾಗಿ ತುಮಕೂರಿನ ವಿದ್ಯಾನಗರದ ಜಲಸಂಗ್ರಹಾಗಾರಕ್ಕೆ ಬಂದು, ಅಲ್ಲಿನ ಶುದ್ಧೀಕರಣ ಘಟಕದ ಮೂಲಕ ನಗರದಾದ್ಯಂತ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಹೇಮಾವತಿ ನೀರು ಬರಲಾರಂಭಿಸಿದ ಬಳಿಕ ಪ್ರಸ್ತುತ ಈ ನೀರಿನ ಬಳಕೆ ಸೀಮಿತವಾಗಿದೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ.06-09-2022








-------------------------------------------
VIDEOS









No comments:

Post a Comment