* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 7 April 2022

ಶ್ರೀ ಸೊಗಡು ಶಿವಣ್ಣ ಭೇಟಿ 07-04-2022, Sogadu Shivanna Visit

 ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (93 ವರ್ಷ) ರವರನ್ನು ಭೇಟಿ ಮಾಡಲೆಂದೇ “ನಮ್ಮ ತುಮಕೂರು” ನಗರದ ಜನಪ್ರಿಯ ರಾಜಕಾರಣಿಗಳೂ, ಬಿಜೆಪಿಯ ಹಿರಿಯ ನಾಯಕರೂ, ಮಾಜಿ ಸಚಿವರೂ ಆದ ಶ್ರೀ ಸೊಗಡು ಶಿವಣ್ಣನವರು ಇಂದು (ದಿ. 07-04-2022, ಗುರುವಾರ) ಬೆಳಗ್ಗೆ ಅನಿರೀಕ್ಷಿತವಾಗಿ ಜಯನಗರದಲ್ಲಿರುವ ನಮ್ಮ ನಿವಾಸಕ್ಕೆ ಆಗಮಿಸಿದ್ದರು. ಸುಮಾರು ಅರ್ಧಗಂಟೆ ಕಾಲ ಇದ್ದು ಕುಶಲೋಪರಿ ವಿಚಾರಿಸಿದರು. ನಮ್ಮ ತಂದೆಯವರನ್ನು ನೋಡಿ, ಅವರೊಡನೆ ಮಾತನಾಡಿ ಶ್ರೀ ಸೊಗಡು ಶಿವಣ್ಣನವರು ತುಂಬ ಸಂತೋಷಪಟ್ಟರು. ಶಿವಣ್ಣನವರ ಆಪ್ತರಾದ ಶ್ರೀ ಜಯಸಿಂಹರಾವ್ ರವರೂ ಜೊತೆಯಲ್ಲಿದ್ದರು.






No comments:

Post a Comment