* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Wednesday 29 May 2024

Pavan H S visit- 29-05-2024- ಹೆಚ್.ಎಸ್.ಪವನ್ ಭೇಟಿ

 ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರ ಯೋಗಕ್ಷೇಮ ವಿಚಾರಿಸಲು ಇಂದು (ದಿ. 29-05-2024) ಬೆಳಗ್ಗೆ ಬೆಂಗಳೂರಿನಿಂದ ಹೆಚ್.ಎಸ್.ಪವನ್ ತನ್ನ ಗೆಳೆಯರೊಬ್ಬರ ಬೈಕ್ ನಲ್ಲಿ ತುಮಕೂರಿನ ನಮ್ಮ ಮನೆಗೆ ಬಂದಿದ್ದ. ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಮತ್ತು ಶ್ರೀ ಹೆಚ್.ಎಸ್.ಸತ್ಯನಾರಾಯಣ ದಂಪತಿಯ ಪುತ್ರನಾದ ಪವನ್ ಈಗ ಅಂತಿಮ ಪದವಿ ವಿದ್ಯಾರ್ಥಿ. ಬೈಕ್, ಕಾರನ್ನು ಲೀಲಾಜಾಲವಾಗಿ ಚಾಲನೆ ಮಾಡುವ ಚಾಕಚಕ್ಯತೆ ಇವನಿಗೆ ಕರಗತ. ಹೀಗಾಗಿ ಗೆಳೆಯನ ಬೈಕ್ ನಲ್ಲೇ ಬಂದಿದ್ದ. ಒಂದಿಷ್ಟು ಹೊತ್ತು ನಮ್ಮ ಮನೆಯಲ್ಲಿದ್ದು, ತನ್ನ ತಾತನ ಆಶೀರ್ವಾದ ಪಡೆದುಕೊಂಡ. ಬಳಿಕ ಶೆಟ್ಟಿಹಳ್ಳಿ ಶ್ರೀ ಆಂಜನೇಯ ದೇವಾಲಯ, ಮಾರ್ಕೆಟ್ ವೃತ್ತದ ಶ್ರೀ ಕೋಟೆ ಆಂಜನೇಯ ಸ್ವಾಮಿ ಪ್ರತಿಮೆ ಇತ್ಯಾದಿ ವೀಕ್ಷಿಸುವ ಮೂಲಕ ತುಮಕೂರು ನಗರವನ್ನು ಒಂದು ಸುತ್ತು ಹಾಕಿದ. ಮಧ್ಯಾಹ್ನದ ಭೋಜನ ಮುಗಿಸಿ ಬೆಂಗಳೂರಿಗೆ ನಿರ್ಗಮಿಸಿದ. ಮುಂದಿನ ಎರಡು ಗಂಟೆಗಳೊಳಗೆ ಸುರಕ್ಷಿತವಾಗಿ ಮನೆ ಸೇರಿದ್ದ. ಪರಸ್ಪರ ಭೇಟಿಯ ಸಂತಸವನ್ನು ಬಣ್ಣಿಸಲಾದೀತೇ?

-ಆರ್.ಎಸ್.ಅಯ್ಯರ್, ತುಮಕೂರು, ದಿ. 29-05-2024










Friday 24 May 2024

Dubai Relatives.... ದುಬೈ ಬಂಧುಗಳು ಬಂಧಾಗ... 24-05-2024

 ದುಬೈ ಬಂಧುಗಳು ಬಂದಾಗ....

--------------------------

"ದುಬೈನ ನಮ್ಮ ಮನೆಗೆ ಯಾವಾಗ ಬರುತ್ತೀರಿ?" ಎಂದು ಕಲ್ಯಾಣರಾಮನ್ ಮತ್ತು ಅವರ ಪತ್ನಿ ವೇದವಲ್ಲಿ ಅವರು ಸುಮ್ಮನೆ ಕೇಳಿದರು. "ಸ್ವಲ್ಪ ಕಾಲು ಸರಿಹೋಗಿ ಓಡಾಡುವಂತಾದರೆ, ದುಬೈಗೆ ಖಂಡಿತಾ ಬರುತ್ತೇನೆ" ಎಂದು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95) ರವರು ಅತಿ ಮುಗ್ಧತೆಯಿಂದ ಹೇಳುವಾಗಲೂ, ಅವರಲ್ಲಿ ಅದಮ್ಯ ಆತ್ಮವಿಶ್ವಾಸ ಉಕ್ಕುತ್ತಿತ್ತು. ಆಗ ಮಿಕ್ಕವರ ಮುಖದಲ್ಲಿ ಮಂದಹಾಸ....
ನಮ್ಮ ತಂದೆಯವರ ಕಿರಿಯ ಸಹೋದರಿ ದಿವಂಗತ ಶ್ರೀಮತಿ ವೇದವತಿ ಅವರ ಹಿರಿಯ ಪುತ್ರ ಸಿ.ಕಲ್ಯಾಣರಾಮನ್, ಕಳೆದ ಹಲವು ವರ್ಷಗಳಿಂದ ದುಬೈನ ಪ್ರತಿಷ್ಥಿತ ಕಂಪನಿಯೊಂದರಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ರಜೆಯ ಮೇಲೆ ಬೆಂಗಳೂರಿಗೆ ಬಂದಿದ್ದಾರೆ.
ಇಂದು (ದಿ. 24-05-2024, ಶುಕ್ರವಾರ) ಸಂಜೆ ಬೆಂಗಳೂರಿನಿಂದ ಕಲ್ಯಾಣರಾಮನ್, ಅವರ ಪತ್ನಿ ಶ್ರೀಮತಿ ವೇದವಲ್ಲಿ, ಕಲ್ಯಾಣ್ ರವರ ಕಿರಿಯ ಸಹೋದರಿ ಶಿಕ್ಷಕಿ ಶ್ರೀಮತಿ ಶಾರದಾಮಣಿ (ಬೆಂಗಳೂರು), ಇವರ ಪತಿ ಶ್ರೀ ಕೇಶವಮೂರ್ತಿ ಅವರು ನಮ್ಮ ತಂದೆಯವರ ಯೋಗಕ್ಷೇಮ ವಿಚಾರಿಸಲೆಂದು ತುಮಕೂರಿನ ನಮ್ಮ ಮನೆಗೆ ಆಗಮಿಸಿದ್ದರು. ಆಗ ಮಾತಿನ ನಡುವೆ ಅವರೀರ್ವರ ಮಧ್ಯೆ ಮೇಲ್ಕಂಡಂತೆ ಸಂಭಾಷಣೆ ನಡೆದಾಗ ಎಲ್ಲರ ಮುಖದಲ್ಲೂ ಮಂದಹಾಸ.
ಇವರ ಭೇಟಿಯ ಸಂತೋಷದ ಸವಿನೆನಪಿಗಾಗಿ ನಮ್ಮ ತಂದೆಯವರು ಕಲ್ಯಾಣರಾಮನ್ ಮತ್ತು ಕೇಶವಮೂರ್ತಿಯವರಿಗೆ ಶಾಲು ಹೊದಿಸಿ, ಹಾರ ಹಾಕಿ ಆಶೀರ್ವದಿಸಿದರು. ಎಲ್ಲರಲ್ಲೂ ದೀರ್ಘಕಾಲ ನೆನಪಿನಲ್ಲುಳಿಯುವಂಥ ಸಂತೋಷದ ಕ್ಷಣಗಳು ಏರ್ಪಟ್ಟವು. ನಾನು ಮತ್ತು ವಿಶ್ವನಾಥನ್ ಇದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 24-05-2024









Sunday 12 May 2024

Shankara Jayanthi - 12-05-2024 -VSR- ಶ್ರೀ ಶಂಕರ ಜಯಂತಿ ಆಚರಣೆ

 ಪ್ರತಿ ವರ್ಷದಂತೆ ಈ ವರ್ಷವೂ- ಇಂದು ದಿನಾಂಕ 12-05-2024, ಭಾನುವಾರ- ನಮ್ಮ ಮನೆಯಲ್ಲೇ ಶ್ರೀ ಶಂಕರ ಜಯಂತಿಯನ್ನು ಆಚರಿಸಿದೆವು. ನಮ್ಮ ತಂದೆ, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (95 ವರ್ಷಗಳು)ರವರು ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅವರಿಗೆ ನಾನು ಮತ್ತು ವಿಶ್ವನಾಥನ್ ಸಹಕಾರ ನೀಡಿದೆವು. ಇತ್ತೀಚೆಗಷ್ಟೇ ರಾಮಚಂದ್ರನ್ ರವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದ್ದು, ಮನೆಗೆ ಮರಳಿ ಚೇತರಿಸಿಕೊಳ್ಳುತ್ತಿದ್ದಾರೆ.

ತುಮಕೂರಿನಲ್ಲಿ 1968 ರಲ್ಲಿ ಶ್ರೀ ಶಂಕರ ಜಯಂತಿ ಸಭಾವನ್ನು ಸ್ಥಾಪಿಸಿ, ಸುಮಾರು 35 ವರ್ಷಗಳ ಕಾಲ ನಿರಂತರವಾಗಿ ಶಂಕರ ಜಯಂತಿಯನ್ನು ಆಚರಿಸಿದ ಹೆಮ್ಮೆ ಇವರದು. ಜೊತೆಗೆ ನಾಡಿನ ಪ್ರಸಿದ್ಧ ಸಂತರು, ಪ್ರವಚನಕಾರರನ್ನು ಆಹ್ವಾನಿಸಿ ಧಾರ್ಮಿಕ- ಆಧ್ಯಾತ್ಮಿಕ ಪ್ರವಚನಗಳನ್ನು ಏರ್ಪಡಿಸಿದ ಹೆಗ್ಗಳಿಕೆಯೂ ಇವರದ್ದು. ಇದೀಗ ಮನೆಯಲ್ಲೇ ಶ್ರೀ ಶಂಕರರನ್ನು ಆರಾಧಿಸಿದರು.
-ಆರ್.ಎಸ್.ಅಯ್ಯರ್, ತುಮಕೂರು ದಿ. 12-05-2024
Like every year this year too - today, 12-05-2024, Sunday - we celebrated Shri Shankarಅ Jayanti at our home. Our father, freedom fighter Shri VS Ramachandran (95 years) offered pooja to the portrait of Jagadguru Shri Adi Shankaracharya. I and Viswanathan assisted him. Recently, Ramachandran was admitted to the hospital due to illness. He underwent a successful surgery there and is recovering at home. He is proud to have established Sri Shankara Jayanti Sabha in Tumkur in 1968 and celebrated Shankara Jayanti continuously for nearly 35 years. In addition, he has the honor of arranging religious and spiritual discourses by inviting famous saints and preachers of the country. Now he worshiped Shri Shankara at home.
- R S Iyer Tumakuru Karnataka 12-05-2024







------------------------- VIDEO --------------------------





with Krishna 06-05-2024 ( Vivek Family Function)

 ತುಮಕೂರಿನ ಬಟವಾಡಿಯ ರಾಯಲ್ ಕನ್ವೆನ್ ಷನ್ ಹಾಲ್ ನಲ್ಲಿ ಇಂದು (ದಿ. 06-05-2024, ಸೋಮವಾರ) ನಡೆದ ವಿ.ವಿವೇಕ್ ಕುಟುಂಬದ ಕೌಟುಂಬಿಕ ಕಾರ್ಯಕ್ರಮದ ಸಂದರ್ಭದಲ್ಲಿ ಮುದ್ದು "ಕೃಷ್ಣ"ನ ಜೊತೆಯಲ್ಲಿ ಸಂತಸದ ಕ್ಷಣಗಳು....






****************************************


ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರ ಯೋಗಕ್ಷೇಮ ವಿಚಾರಿಸಲು ಇಂದು (ದಿ. 06-05-2024, ಸೋಮವಾರ) ಬೆಂಗಳೂರಿನಿಂದ ನಮ್ಮ ಸಹೋದರಿ ಶ್ರೀಮತಿ ಆರ್.ವಿದ್ಯಾ ಶಿವಸತ್ಯ ತನ್ನ ಮಗಳಾದ ಕು. ಶ್ರೀರಂಜಿನಿ (ಸಾಫ್ಟ್ ವೇರ್ ಇಂಜಿನಿಯರ್) ಜೊತೆಯಲ್ಲಿ ನಮ್ಮ ಮನೆಗೆ ಆಗಮಿಸಿದ್ದ ಸಂತಸದ ಸಮಯ.....