* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 12 September 2024

Ganesha Chaturthi-2024 - ಗಣೇಶ ಚತುರ್ಥಿ - ದಿ. 07-09-2024, ಶನಿವಾರ









---------------------------------


Video-2


Video-1

ಈ ವರ್ಷದ -ಶ್ರೀ ಕ್ರೋಧಿ ಸಂವತ್ಸರದ- ಶ್ರೀ ಗಣೇಶ ಚತುರ್ಥಿಯ ಪೂಜೆಯನ್ನು ಇಂದು (07-09-2024, ಶನಿವಾರ) ನಮ್ಮ ಮನೆಯಲ್ಲಿ ಆಚರಿಸಲಾಯಿತು.
ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರು ಮಹಾಮಂಗಳಾರತಿ ಮಾಡುವುದರೊಂದಿಗೆ ಪೂಜೆ ಸಂಪನ್ನಗೊಂಡಿತು. ನಾನು ಮತ್ತು ವಿಶ್ವನಾಥನ್ ಇದ್ದೆವು.
||ಸರ್ವೇ ಜನಾಃ ಸುಖಿನೋ ಭವಂತು||
-ಆರ್.ಎಸ್.ಅಯ್ಯರ್, ತುಮಕೂರು, ದಿ. 07-09-2024, ಗಣೇಶ ಚತುರ್ಥಿ #rsiyertumakuru https://x.com/rsitmk https://www.instagram.com/r_s_iyer/?hl=en

Today (07-09-2024, Saturday) the Puja of Shri Ganesha Chaturthi of this year -Shri Krodhi Samvatsara- was celebrated at our house.
The pooja concluded with Mahamangalarathi performed by our father the freedom fighter Sri VS Ramachandran (95). Viswanathan and I were present.
||Sarve Janah Sukhino Bhavantu||
- R S Iyer Tumakuru, 07-09-2024, Ganesha Chaturthi

------------------------------------------------


 ಹಳೆಯ ತುಮಕೂರಿನ ಹೆಮ್ಮೆಯ ಕಲಾವಿದರಲ್ಲಿ ದಿವಂಗತ ಶ್ರೀ ಕಸ್ತೂರಿ ರಂಗಪ್ಪನವರೂ ಒಬ್ಬರಾಗಿದ್ದರು. ವಿಶೇಷವಾಗಿ ಮಣ್ಣಿನ ಗಣಪತಿ ವಿಗ್ರಹಗಳನ್ನು ರಚಿಸುವಲ್ಲಿ ಸಿದ್ಧಹಸ್ತರಾಗಿ, ತಮ್ಮದೇ ಛಾಪು ಮೂಡಿಸಿದ್ದರು. ಇವರ ಜೊತೆಯಲ್ಲಿ ಸಹೋದರರಾದ ದಿವಂಗತ ಶ್ರೀ ರಾಜು ರವರು ಮತ್ತು ಶ್ರೀ ಕುಮಾರ್ ರವರೂ ಕೈಜೋಡಿಸುತ್ತಿದ್ದರು.

ಗಣಪತಿ ಹಬ್ಬ ಬಂತೆಂದರೆ ತುಮಕೂರಿನ ಬಹುತೇಕ ಎಲ್ಲ ಬಡಾವಣೆಗಳಿಂದ ನೂರಾರು ಜನರು ಗಣಪತಿ ವಿಗ್ರಹಗಳನ್ನು ಖರೀದಿಸಲು ತುಮಕೂರಿನ ಚಿಕ್ಕಪೇಟೆಯ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯದ ಎದುರು ಬದಿ ಇರುವ ಇವರ ಮನೆಗೇ ಬರುತ್ತಿದ್ದರು. ಇವರು ಸಿದ್ಧಪಡಿಸುತ್ತಿದ್ದ ಗಣಪತಿ ವಿಗ್ರಹಗಳೆಂದರೆ ಅದೇನೋ ಆಕರ್ಷಣೆ. ಸುಮಾರು 60 ವರ್ಷಗಳಿಗೂ ಹಿಂದಿನಿಂದಲೂ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರು ಇಲ್ಲಿಂದಲೇ ಗಣಪತಿಯನ್ನು ತರುತ್ತಿದ್ದರು. ಅದೇ ಪರಂಪರೆ ಈಗಲೂ ಮುಂದುವರೆದಿದೆ. ದಿವಂಗತ ಶ್ರೀ ಕಸ್ತೂರಿ ರಂಗಪ್ಪನವರ ಸುಪುತ್ರ ಶ್ರೀ ಮಂಜುನಾಥ್ ರವರು ತಮ್ಮ ಈ ಕುಲಕಸುಬನ್ನು ಯಶಸ್ವಿಯಾಗಿ ಮುಂದುವರೆಸಿದ್ದಾರೆ. ಈಗಲೂ ನಗರದ ನಾನಾ ಭಾಗಗಳಿಂದ ಗಣಪತಿ ವಿಗ್ರಹ ಕೊಳ್ಳಲು ಜನರು ಇಲ್ಲಿಗೇ ಹುಡುಕಿಕೊಂಡು ಬರುತ್ತಾರೆಂಬುದು ಇಲ್ಲಿನ ವೈಶಿಷ್ಟ್ಯ.
ನಾನು ಮತ್ತು ವಿಶ್ವನಾಥನ್ ಇಂದು (ದಿನಾಂಕ 04-09-2024, ಬುಧವಾರ) ಮಧ್ಯಾಹ್ನ ಅಲ್ಲಿಗೆ ತೆರಳಿ ಶ್ರೀ ಗೌರಿ ಮತ್ತು ಶ್ರೀ ಗಣೇಶನ ಮಣ್ಣಿನ ಮೂರ್ತಿಗಳನ್ನು ಖರೀದಿಸಿ ಮನೆಗೆ ತಂದೆವು. ಇಲ್ಲಿಂದ ಮೂರ್ತಿಗಳನ್ನು ತರುವುದೇ ಅದೇನೋ ಖುಷಿಯ ಸಂಗತಿ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 04-09-2024 #rsiyertumakuru

No comments:

Post a Comment