ಮೊಮ್ಮಗನ ಮದುವೆಗೆ ಶುಭ ಕೋರಿದ ತಾತ...
--------------------------
ತನ್ನ ವಿವಾಹದ ಆಮಂತ್ರಣ ಪತ್ರಿಕೆ ನೀಡಿದ ಮೊಮ್ಮಗ ಎಂ.ಎಸ್. ವಿಶ್ವಾಸ್ ಗೆ ನಮ್ಮ ತಂದೆ, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ಶುಭ ಕೋರಿ ಶಾಲು ಹೊದಿಸಿ ಆಶೀರ್ವದಿಸಿ ಹರ್ಷಗೊಂಡರು.
ನಮ್ಮ ಸಹೋದರಿ ದಿವಂಗತ ಶ್ರೀಮತಿ ಆರ್. ಮಹಾಲಕ್ಷ್ಮೀ ಶ್ರೀಧರ್ ಅವರ ದ್ವಿತೀಯ ಪುತ್ರನೇ ಎಂ.ಎಸ್. ವಿಶ್ವಾಸ್. ಇಂದು (ದಿ.07-02-2025) ಬೆಂಗಳೂರಿನಿಂದ ತನ್ನ ತಂದೆ ಶ್ರೀ ಎಂ.ಎಸ್.ಶ್ರೀಧರ್ ರವರ ಜೊತೆಯಲ್ಲಿ ವಿಶ್ವಾಸ್ ನಮ್ಮ ಮನೆಗೆ ಆಗಮಿಸಿ, ವಿವಾಹ ಆಮಂತ್ರಣ ನೀಡಿದಾಗ ತಾತ ಶ್ರೀ ವಿ.ಎಸ್.ರಾಮಚಂದ್ರನ್ ಹೃತ್ಪೂರ್ವಕವಾಗಿ ಆಶೀರ್ವದಿಸಿದರು. ಅಳಿಯ ಮತ್ತು ಮೊಮ್ಮಗನಿಗೆ ಶಾಲು ಹೊದಿಸಿ ಶುಭ ಕೋರಿ ಸಂತಸ ಪಟ್ಟರು. ನಾನು ಮತ್ತು ವಿಶ್ವನಾಥನ್ ಸಹಾ ವಿಶ್ವಾಸ್ ನನ್ನು ಆಶೀರ್ವದಿಸಿದೆವು. ಈ ಭೇಟಿ ಉಭಯತ್ರರಲ್ಲೂ ಉಲ್ಲಾಸವನ್ನುಂಟುಮಾಡಿತು.
ವಿಶ್ವಾಸ್ ನ ವಿವಾಹವು ಸೌ|| ಎನ್.ರಕ್ಷಿತಾ ಜೊತೆಯಲ್ಲಿ ಇದೇ ಫೆಬ್ರವರಿ 23 ರಂದು ಬೆಂಗಳೂರಿನಲ್ಲಿ ನೆರವೇರಲಿದೆ.
----------------------------------------
Youtube Video
No comments:
Post a Comment