ನಮ್ಮ ತುಮಕೂರು ನಗರದ ಅಗ್ರಹಾರದ ನಿವಾಸಿಗಳೂ, ಪ್ರಸಿದ್ಧ ಪುರೋಹಿತರೂ, ಜ್ಯೋತಿಷಿಗಳೂ ಆಗಿರುವ ವೇ||ಬ್ರ||ಶ್ರೀ ಹೆಚ್.ಎಸ್.ರಾಜಾರಾವ್ ರವರು ತಮ್ಮ ಪತ್ನಿ ಶ್ರೀಮತಿ ನಾಗರತ್ನಮ್ಮ, ಪುತ್ರ -ಪುರೋಹಿತರಾದ ಶ್ರೀ ಮಧುಸೂಧನರಾವ್ ಮತ್ತು ಅಗ್ರಹಾರದ ಮತ್ತೋರ್ವ ಪ್ರಸಿದ್ಧ ವೈದಿಕರಾದ ವೇ||ಬ್ರ||ಶ್ರೀ ಅಶ್ವತ್ಥನಾರಾಯಣ ಶಾಸ್ತ್ರಿ ಅವರೊಂದಿಗೆ ಇಂದು (ದಿ.24-01-2025) ರಾತ್ರಿ ನಮ್ಮ ಮನಗೆ ಆಗಮಿಸಿ, ಮೊನ್ನೆಯಷ್ಟೇ 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿರುವ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರಿಗೆ ಫಲತಾಂಬೂಲ ನೀಡಿ, ಶಾಲು ಹೊದಿಸಿ ಗೌರವಿಸಿ, ಆಶೀರ್ವಾದ ಪಡೆದುಕೊಂಡರು.
ಶ್ರೀ ರಾಜಾರಾವ್ ರವರು ನಮಗೆ ಸುಮಾರು 40 ವರ್ಷಗಳಿಗೂ ಅಧಿಕ ಕಾಲದ ಪರಿಚಯ. ಒಂದು ಕಾಲದಲ್ಲಿ ಪತ್ರಕರ್ತರಾಗಿದ್ದ ಅವರು, ಆ ನಂತರ ಪೌರೋಹಿತ್ಯ ಕ್ಷೇತ್ರದಲ್ಲಿ ಸಾಗಿದರು. ಇನ್ನು ಅವರ ಕುಟುಂಬದ ಹಿರಿಯರು ನಮ್ಮ ತಂದೆಯವರಿಗೆ ಇನ್ನೂ ಹಳೆಯ ಪರಿಚಯ. ಈ ಭೇಟಿಯ ಸಂದರ್ಭದಲ್ಲಿ ಆ ಹಳೆಯ ಸವಿನೆನಪುಗಳು ಮಾತುಕತೆಯಲ್ಲಿ ಸಾಗಿ, ಸಂತೋಷ ಮೂಡಿಸಿತು. ಅವರ ಈ ಪ್ರೀತಿ-ವಿಶ್ವಾಸದ ಭೇಟಿ ದೀರ್ಘಕಾಲ ನೆನಪಿನಲ್ಲಿ ಉಳಿಯುವಂಥದ್ದು.
No comments:
Post a Comment