ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Monday, 29 January 2018

Kuppali- Kavi Shayla 14-01-2018 Sunday

ಕುವೆಂಪು ಮನೆ ಮತ್ತು ಕವಿಶೈಲದಲ್ಲಿ…
******************************************
ಶೃಂಗೇರಿಗೆ ತೆರಳುವ ಮಾರ್ಗಮಧ್ಯೆ (ದಿ.14-01-2018, ಭಾನುವಾರ) ಮಧ್ಯಾಹ್ನ ನಾವು (ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್) ಕುಪ್ಪಳಿಯಲ್ಲಿರುವ ರಸಋಷಿ ಕುವೆಂಪು ಅವರ ನಿವಾಸಕ್ಕೆ ಭೇಟಿ ಕೊಟ್ಟೆವು. ಮಲೆನಾಡಿನ ಸುಂದರ ಪ್ರಶಾಂತ ಶುಭ್ರ ಪರಿಸರದಲ್ಲಿರುವ ಆ ಭವ್ಯ ನಿವಾಸದ ಒಳಹೊಕ್ಕು ಹೊರಬರುವಷ್ಟರಲ್ಲಿ ನಮಗಾದ ಅನುಭವ ಅಷ್ಟಿಷ್ಟಲ್ಲ. ಜೊತೆಗೆ ಕವಿಶೈಲವನ್ನೂ ನೋಡಿದೆವು. ಎರಡೂ ಕಡೆ ಕಲಾತ್ಮಕತೆ ಚಿತ್ತಕರ್ಷಕವಾಗಿತ್ತು. ಇವೆರಡೂ ಸ್ಥಳಗಳಿಗೆ ಹರಿದು ಬರುತ್ತಿದ್ದ ಜನಸಮೂಹವು ಇದೊಂದು ಪ್ರವಾಸಿ ಕ್ಷೇತ್ರ ಆಗಿದೆಯೆಂಬುದನ್ನು ಸಂಕೇತಿಸುತ್ತಿತ್ತು. ಅಲ್ಲಿಂದ ನಿರ್ಗಮಿಸುವಾಗ ನಮ್ಮ ಮನದಲ್ಲಿಮೂಡಿದ ಪ್ರಶ್ನೆ- “ಈಗಲೂ ನಮ್ಮನ್ನಾಕರ್ಷಿಸುವ ಮಲೆನಾಡಿನ ನಿಸರ್ಗ ವೈಭವ ಆರೆಂಟು ದಶಕಗಳ ಹಿಂದೆ- ಕುವೆಂಪು ಅವರ ಬಾಲ್ಯದ ದಿನಗಳಲ್ಲಿ –ಹೇಗಿದ್ದಿರಬಹುದು?”








No comments:

Post a Comment