* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Wednesday 11 January 2023

karate Krishnamurthy visit 2023

 “ಕರಾಟೆ ಕೃಷ್ಣಮೂರ್ತಿ” ಎಂದೇ “ನಮ್ಮ ತುಮಕೂರು” ನಗರದಲ್ಲಿ ಕೀರ್ತಿಶಾಲಿಗಳಾಗಿರುವ ಶ್ರೀ ಕೃಷ್ಣಮೂರ್ತಿಯವರು ಸುಮಾರು ನಾಲ್ಕು ದಶಕಗಳಿಂದ ನನಗೆ ಆತ್ಮೀಯರು. ತುಮಕೂರಿನ ಚಿಕ್ಕಪೇಟೆಯ ಹರಿಸಿಂಗರ ಬೀದಿ ನಿವಾಸಿಗಳು. ನಾಲ್ಕು ದಶಕಗಳ ಹಿಂದೆಯೇ ಖ್ಯಾತ ಕರಾಟೆ ಪಟುವಾಗಿ ಅವರು ಮಾಡಿರುವ ಸಾಧನೆಗಳು ಗಮನೀಯ. ಜೊತೆಗೆ ಕರಾಟೆ ಶಿಕ್ಷಕರಾಗಿ ಒಳ್ಳೆಯ ಹೆಸರು ಮಾಡಿರುವವರು. ಈವರೆಗೆ ಸಾವಿರಾರು ಜನರಿಗೆ ಕರಾಟೆ ಕಲಿಸಿ, ದೈಹಿಕವಾಗಿ-ಮಾನಸಿಕವಾಗಿ ಸಶಕ್ತರನ್ನಾಗಿಸಿರುವವರು. ಈಗಲೂ ಇವರ ಈ ಸೇವೆ ಯಶಸ್ವಿಯಾಗಿ ಸಾಗಿದೆಯೆಂಬುದು ಹೆಮ್ಮೆಯ ಸಂಗತಿ.

ಇಂದು (ದಿ. 08-01-2023, ಭಾನುವಾರ) ಬೆಳಗ್ಗೆ ಶ್ರೀ ಕರಾಟೆ ಕೃಷ್ಣಮೂರ್ತಿಯವರು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರ ಯೋಗಕ್ಷೇಮ ವಿಚಾರಿಸಲೆಂದೇ ಅನಿರೀಕ್ಷಿತವಾಗಿ ನಮ್ಮಮನೆಗೆ ಬಂದಿದ್ದರು. ಅತ್ಯಂತ ಪ್ರೀತಿಯಿಂದ ನಮ್ಮ ತಂದೆಯವರಿಗೆ ಫಲ ಸಮರ್ಪಣೆ ಮಾಡಿ ನಮಿಸಿದರು. ನಮ್ಮೊಡನೆ ಕುಳಿತು ಹಲವು ಪ್ರಸಂಗಗಳನ್ನು ಮೆಲುಕು ಹಾಕಿದರು. ಹಳೆಯ ತುಮಕೂರಿನ ಹಲವು ಸಾಧಕರನ್ನು ನೆನಪು ಮಾಡಿಕೊಂಡರು. ಬಹುಹೊತ್ತಿನ ಮಾತುಕತೆ ಎಲ್ಲರಲ್ಲೂ ಅದೊಂದು ರೀತಿಯ ಸಂತಸ ತಂದಿತು. ಇಂತಹ ನಿರ್ಮಲವಾದ ಪ್ರೀತಿ-ವಿಶ್ವಾಸ-ಸ್ನೇಹಗಳೇ ಬದುಕಿಗೆ ಚೈತನ್ಯ ಮೂಡಿಸುವಂತಹುದು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 08-01-2023




No comments:

Post a Comment