* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 15 January 2023

VSR - 94, Birthday Celebration 14-01-2023, Saturday

 ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್. ರಾಮಚಂದ್ರನ್ ಅವರು 94 ನೇ ವಸಂತಕ್ಕೆ ಪದಾರ್ಪಣೆ ಮಾಡಿದ ಶುಭ ದಿನದಂದೇ (ದಿ. 14-01-2023, ಶನಿವಾರ) ಸಂಜೆ ಅನಿರೀಕ್ಷಿತವಾಗಿ ಮೊಮ್ಮಗಳು ಶ್ರೀಮತಿ ಸುನಯನ ಮತ್ತು ಆಕೆಯ ಪತಿ ಶ್ರೀ ಶಶಾಂಕ್ ಪಟ್ಟಾಜೆ (ಈರ್ವರೂ ಸಾಫ್ಟ್ ವೇರ್ ಇಂಜಿನಿಯರ್ ಗಳು) ದಂಪತಿ ತಮ್ಮ ಪುಟಾಣಿ ಮಗುವಿನೊಡನೆ ನಮ್ಮ ಮನೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಜನ್ಮದಿನದಂದೇ ನಮ್ಮ ತಂದೆಯವರು ಮರಿಮಗನೊಡನೆ ಸಂಭ್ರಮಿಸಿದ ಮಧುರ ಕ್ಷಣಗಳು ಮೂಡಿದವು.

ನಮ್ಮ ಸಹೋದರಿ ಶ್ರೀಮತಿ ರಾಜೇಶ್ವರಿ ಮತ್ತು ಶ್ರೀ ಹೆಚ್.ಕೆ. ವೇಣುಗೋಪಾಲ್ (ಎಲೆಕ್ಟ್ರಿಕಲ್ ಕಂಟ್ರಾಕ್ಟರ್) ರವರ ಸುಪುತ್ರಿಯೇ ಸುನಯನ. ಎರಡು ತಿಂಗಳುಗಳ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದು, ತಾತನ ಹುಟ್ಟುಹಬ್ಬದಂದೇ ಮಗುವಿನೊಡನೆ ಆಗಮಿಸಿ ಮಗುವಿಗೆ ಮುತ್ತಜ್ಜನ ದರ್ಶನ ಮಾಡಿಸಿದಳು. ಶ್ರೀಮತಿ ರಾಜೇಶ್ವರಿ, ಶ್ರೀ ಹೆಚ್.ಕೆ. ವೇಣುಗೋಪಾಲ್, ಇವರ ಪುತ್ರ ಇಂಜಿನಿಯರ್ ಶ್ರೀ ವಿ. ವಿವೇಕ್ ಸಹ ಜೊತೆಯಲ್ಲಿದ್ದರು.
ಮುತ್ತಜ್ಜನ ತೊಡೆಯಲ್ಲಿ ಮರಿಮಗ ನಲಿದಾಡಿದ. ಮರಿಮಗನ ಕಂಡು ಮುತ್ತಜ್ಜ ಸಂಭ್ರಮಿಸಿದರು. ಜನ್ಮದಿನದಂದು "ನಾಲ್ಕು ತಲೆಮಾರು ಒಂದೆಡೆ ಸೇರಿದ" ಅಪರೂಪದ ಸಂದರ್ಭ ಸೃಷ್ಟಿಗೊಂಡು, ಎಲ್ಲರ ಸಂತಸ ದುಪ್ಪಟ್ಟಾಯಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 15-01-2023, ಸಂಕ್ರಾಂತಿ.


















No comments:

Post a Comment