1990 ರ ದಶಕದ ರಾಮ ರಥ ಯಾತ್ರೆಗಳ ಸಂಭ್ರಮ "ನಮ್ಮ ತುಮಕೂರು" ನಗರದಲ್ಲೂ ಅತ್ಯುತ್ಸಾಹದಿಂದ ಕೂಡಿತ್ತು. ಅಸಂಖ್ಯಾತ ಜನರು ಸ್ವಯಂಪ್ರೇರಣೆಯಿಂದ ಭಾಗವಹಿಸುತ್ತಿದ್ದರು. ಅಂತಹ ಒಂದು ಯಾತ್ರೆಯ ಮೆರವಣಿಗೆಯ ವಾಹನದ ಮೇಲೆ ನಾನು (ಬಲತುದಿ) ಮತ್ತು ಕೇಸರಿ ಪೇಟ ತೊಟ್ಟಿರುವ ಆತ್ಮೀಯ ಮಿತ್ರರಾದ ಪೃಥ್ವಿ ಮಲ್ಲಣ್ಣ (ಎಡಗಡೆ) ಪಾಲ್ಗೊಂಡಿದ್ದೆವು. ಈಗಿನ ವಿವೇಕಾನಂದ ರಸ್ತೆಯ ದ್ವಾರಕಾ ಹೋಟೆಲ್ ಕ್ರಾಸ್ ನಲ್ಲಿ ಈ ಫೋಟೋ ತೆಗೆಯಲಾಗಿದೆ. ಫೋಟೋ ಆಲ್ಬಂನಲ್ಲಿ ಆಕಸ್ಮಿಕವಾಗಿ ಈ ಹಳೆಯ ಫೋಟೋ ಕಾಣಿಸಿ, ಆ ಹೋರಾಟದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು.
Monday 22 January 2024
Sunday 21 January 2024
Sri Ramayana Books in our Home.... 57 ವರ್ಷಗಳ ಹಿಂದಣ ಶ್ರೀ ರಾಮಾಯಣ ಗ್ರಂಥ- 22-01-2024
57 ವರ್ಷಗಳ
ಹಿಂದಣ “ಶ್ರೀರಾಮಾಯಣ ಗ್ರಂಥ”
-------------------------------------
ತುಮಕೂರಿನ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸ್ಥಾಪಕರೂ ಆಗಿರುವ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರು ಇಲ್ಲಿನ ಚಿತ್ರದಲ್ಲಿರುವಂತೆ ತಮ್ಮ ಕೈಲಿ ಹಿಡಿದಿರುವ ಈ ಗ್ರಂಥದ ಹೆಸರು “ಶ್ರೀ ಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ”. ಇದನ್ನು ಬೆಂಗಳೂರಿನ “ಶ್ರೀಮದ್ರಾಮಾಯಣ ಮಹಾಭಾರತಾದಿ ಪ್ರಕಟನ ಸಮಿತಿ”ಯು 1967 ರಲ್ಲಿ ಪ್ರಕಾಶನಗೊಳಿಸಿದೆ. ಅದೇ ವರ್ಷದ ಜುಲೈ ಮಾಹೆಯಲ್ಲಿ ನಮ್ಮ ತಂದೆ ಇದನ್ನು ಖರೀದಿಸಿದ್ದಾರೆ. 600 ಪುಟಗಳುಳ್ಳ ಹಾಗೂ “ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯ ಕಾಂಡ ಮತ್ತು ಕಿಷ್ಕಿಂದಾ ಕಾಂಡ” ಒಳಗೊಂಡ ಈ “ಮೊದಲನೇ ಸಂಪುಟ”ದ ಆಗಿನ ಬೆಲೆ 12 ರೂಪಾಯಿಗಳು. ಈ ಗ್ರಂಥಕ್ಕೆ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಮುನ್ನುಡಿ ಬರೆದಿದ್ದು, ಖ್ಯಾತ ಸಾಹಿತಿ-ದಾರ್ಶನಿಕ ಡಾ. ಡಿ.ವಿ.ಗುಂಡಪ್ಪನವರು ಪ್ರಸ್ತಾವನೆ ಬರೆದಿದ್ದಾರೆ. ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ಶ್ರೀ ಎನ್. ರಂಗನಾಥ ಶರ್ಮಾರವರು ಪ್ರಧಾನ ಸಂಪಾದಕರಾಗಿದ್ದರೆಂಬುದು ಉಲ್ಲೇಖಾರ್ಹ.
Monday 15 January 2024
VSR Sankranthi- 15-01- 2024 ಸಂಕ್ರಾಂತಿಯಂದು ಮುತ್ತಜ್ಜನ ಆಶೀರ್ವಾದ ಪಡೆದುಕೊಂಡ ಮರಿಮಗ
ಮರಿಮಗನೊಂದಿಗೆ (ಮಗಳ ಮೊಮ್ಮಗ) ಮುತ್ತಜ್ಜ ಒಂದಿಷ್ಟು ಹೊತ್ತು ಸಂತಸದಿಂದ ಕಾಲಕಳೆದ ಸಂಭ್ರಮ ನೀಡಿತು ಇಂದಿನ ಮಕರ ಸಂಕ್ರಾಂತಿ.
Sunday 14 January 2024
V S Ramachandran- 95 (14-01-2024) ವಿ.ಎಸ್.ರಾಮಚಂದ್ರನ್-95
95 ನೇ ವಸಂತಕ್ಕೆ ಪಾದಾರ್ಪಣೆ