ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Monday, 22 January 2024

Ratha Yathra ರಾಮ ರಥ ಯಾತ್ರೆ 1990

 1990 ರ ದಶಕದ ರಾಮ ರಥ ಯಾತ್ರೆಗಳ ಸಂಭ್ರಮ "ನಮ್ಮ ತುಮಕೂರು" ನಗರದಲ್ಲೂ ಅತ್ಯುತ್ಸಾಹದಿಂದ ಕೂಡಿತ್ತು. ಅಸಂಖ್ಯಾತ ಜನರು ಸ್ವಯಂಪ್ರೇರಣೆಯಿಂದ ಭಾಗವಹಿಸುತ್ತಿದ್ದರು. ಅಂತಹ ಒಂದು ಯಾತ್ರೆಯ ಮೆರವಣಿಗೆಯ ವಾಹನದ ಮೇಲೆ ನಾನು (ಬಲತುದಿ) ಮತ್ತು ಕೇಸರಿ ಪೇಟ ತೊಟ್ಟಿರುವ ಆತ್ಮೀಯ ಮಿತ್ರರಾದ ಪೃಥ್ವಿ ಮಲ್ಲಣ್ಣ (ಎಡಗಡೆ) ಪಾಲ್ಗೊಂಡಿದ್ದೆವು. ಈಗಿನ ವಿವೇಕಾನಂದ ರಸ್ತೆಯ ದ್ವಾರಕಾ ಹೋಟೆಲ್ ಕ್ರಾಸ್ ನಲ್ಲಿ ಈ ಫೋಟೋ ತೆಗೆಯಲಾಗಿದೆ. ಫೋಟೋ ಆಲ್ಬಂನಲ್ಲಿ ಆಕಸ್ಮಿಕವಾಗಿ ಈ ಹಳೆಯ ಫೋಟೋ ಕಾಣಿಸಿ, ಆ ಹೋರಾಟದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು.

-ಆರ್.ಎಸ್.ಅಯ್ಯರ್, ತುಮಕೂರು, ದಿ. 22-01-2024








No comments:

Post a Comment