* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 15 January 2024

VSR Sankranthi- 15-01- 2024 ಸಂಕ್ರಾಂತಿಯಂದು ಮುತ್ತಜ್ಜನ ಆಶೀರ್ವಾದ ಪಡೆದುಕೊಂಡ ಮರಿಮಗ

 ಮರಿಮಗನೊಂದಿಗೆ (ಮಗಳ ಮೊಮ್ಮಗ) ಮುತ್ತಜ್ಜ ಒಂದಿಷ್ಟು ಹೊತ್ತು ಸಂತಸದಿಂದ ಕಾಲಕಳೆದ ಸಂಭ್ರಮ ನೀಡಿತು ಇಂದಿನ ಮಕರ ಸಂಕ್ರಾಂತಿ.

ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95) ರವರ ಯೋಗಕ್ಷೇಮ ವಿಚಾರಿಸಿ, ಸಂಕ್ರಾಂತಿಯ ಶುಭಾಶಯ ತಿಳಿಸಿ ಆಶೀರ್ವಾದ ಪಡೆಯಲು ಇಂದು (ದಿ. 15-01-2024, ಸೋಮವಾರ) ರಾತ್ರಿ ನಮ್ಮ ಸಹೋದರಿ ಶ್ರೀಮತಿ ರಾಜೇಶ್ವರಿ ಮತ್ತು ಅವರ ಪತಿ ಶ್ರೀ ಹೆಚ್.ಕೆ.ವೇಣುಗೋಪಾಲ್ ರವರು ತಮ್ಮ ಮೊಮ್ಮಗ (ಮಗಳ ಮಗ) "ಕೃಷ್ಣ"ನೊಂದಿಗೆ ನಮ್ಮ ಮನೆಗೆ ಆಗಮಿಸಿದ್ದರು. ಆಗ 95 ವಸಂತಗಳ ಮುತ್ತಜ್ಜ ರಾಮಚಂದ್ರನ್ ಅವರು ತಮ್ಮ ಮರಿಮಗ ಒಂದು ವರ್ಷ ವಯಸ್ಸಿನ ಕೃಷ್ಣನ ಜೊತೆ ಒಂದಿಷ್ಟು ಹೊತ್ತು ಖುಷಿಯಾಗಿ ಕಾಲಕಳೆಯುವ ಅವಕಾಶ ದೊರೆಯಿತು. ಈ "ಬಾಲ ಕೃಷ್ಣ" ಎಲ್ಲರಲ್ಲೂ ಹರ್ಷದ ಹೊನಲನ್ನೇ ಹರಿಸಿದ.






**********************************************************************

ಬಾಲ “ಕೃಷ್ಣ”ನ ಲೀಲೆಗಳು.. !!!
--------------------------
“ಸಂಕ್ರಾಂತಿ”ಯ ಶುಭದಿನ (ದಿ.15-01-2024, ಸೋಮವಾರ) ರಾತ್ರಿ ಈ ನಮ್ಮ “ಕೃಷ್ಣ” ನಮ್ಮ ಮನೆಗೆ ಆಗಮಿಸಿದ ಹೊತ್ತಲ್ಲಿ ಅವನ ಮುತ್ತಜ್ಜ (ನಮ್ಮ ತಂದೆ) ವಿ.ಎಸ್.ರಾಮಚಂದ್ರನ್ (95) ರವರು ಮಲಗಿದ್ದರು. ಈಗಷ್ಟೇ ಒಂದು ವರ್ಷ ದಾಟಿರುವ ಈ ಮುದ್ದು “ಕೃಷ್ಣ” ಮುತ್ತಜ್ಜನ ಕೈಕುಲುಕಿ ಖುಷಿಪಟ್ಟ. ಅವರಿಗೆ ಬೀಸಣಿಕೆಯಿಂದ ಗಾಳಿ ಬೀಸಿ ಆನಂದಿಸಿದ. ಅಲ್ಲೇ ಇದ್ದ ಚೆಂಡನ್ನು ಎಸೆದು ಅವರೊಡನೆ ಕ್ಷಣ ಕಾಲ ಆಟವಾಡಿದ. ಎದ್ದುಕುಳಿತ ಮುತ್ತಜ್ಜನ ತಲೆಯನ್ನು ಬಾಚಣಿಕೆಯಿಂದ ಬಾಚಿ ನಗೆಚೆಲ್ಲಿದ. ಕೊನೆಗೆ ತನ್ನ ತಾತ ಶ್ರೀ ಹೆಚ್.ಕೆ.ವೇಣುಗೋಪಾಲ್ ಮತ್ತು ಅಜ್ಜಿ ಆರ್.ರಾಜೇಶ್ವರಿ ಅವರ ಜೊತೆ ಹೊರಡುವಾಗ ಮುತ್ತಜ್ಜನ ಪಾದಕ್ಕೆ ಶಿರಬಾಗಿ ನಮಿಸಿದ. ಪಕ್ಕದಲ್ಲೇ ಇದ್ದ ಮುತ್ತಜ್ಜಿ ದಿವಂಗತ ಶ್ರೀಮತಿ ಪಾರ್ವತಿ ಅವರ ಭಾವಚಿತ್ರ ನೋಡಿ ಕಣ್ಣಿಗೊತ್ತಿಕೊಂಡ. ನಂತರ ಪಕ್ಕದ ದೇವರ ಕೋಣೆಗೆ ಹೋಗಿ ಕೈಚಾಚಿ ಹಣೆಗೊತ್ತಿಕೊಂಡ. ಇವುಗಳೇ ಅಲ್ಲವೇ ಬಾಲ-ಮುದ್ದು “ಕೃಷ್ಣ”ನ ಲೀಲೆಗಳು…!!!
-ಆರ್.ಎಸ್.ಅಯ್ಯರ್, ತುಮಕೂರು,











-----------------------------------------------
YouTube video






No comments:

Post a Comment