* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 24 February 2019

ಶಿವಾಜಿ ಜಯಂತಿಯಲ್ಲಿ ಸನ್ಮಾನ 24-10-2019, Felicitation- Shivaji Jayanthi

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಶುಭ ಸಂದರ್ಭದಲ್ಲಿ ಮಾಜಿ ಯೋಧರೊಂದಿಗೆ ಹಾಗೂ ಸಾಧಕರೊಂದಿಗೆ ನಾನೂ ಸನ್ಮಾನಿಸಲ್ಪಟ್ಟ ಸಂತೋಷ ಇಂದು ( ದಿ.24-02-2019, ಭಾನುವಾರ) ನನ್ನ ಪಾಲಿನದು. 
ನಮ್ಮ ತುಮಕೂರಿನ ಗೋಕುಲ ಬಡಾವಣೆ ಎರಡನೇ ಹಂತದ ಟೂಡಾಲೇಔಟ್ ನಲ್ಲಿ ಶ್ರೀಮತಿ ಸುಮಂಗಳಬಾಯಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಕೆ.ಬಿ.ಗೋಪಿರಾವ್ ಲೌಟೆ ರವರ ನೇತೃತ್ವದಲ್ಲಿ ಇಂದು ಟ್ರಸ್ಟ್ ನ ಪ್ರಥಮ ವಾರ್ಷಿಕೋತ್ಸವ, ಛತ್ರಪತಿ ಶಿವಾಜಿ ಮಹಾರಾಜರ 392 ನೇ ಜಯಂತಿ ಹಾಗೂ ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಯೋಧರಾದ ಶ್ರೀ ಪಾಂಡುರಂಗರವರು ಮತ್ತು ಖ್ಯಾತ ಕರಾಟೆ ಪಟು ಶ್ರೀ ಕೆ.ಕೃಷ್ಣಮೂರ್ತಿ ರವರೊಡನೆ ನಾನೂ ಸನ್ಮಾನಿತನಾದೆ. ಜೊತೆಗೆ ಅತ್ಯಂತ ಹಿರಿಯರಾದ ಶ್ರೀ ಕೆ.ವಿ. ವೆಂಕಟರಾವ್ ಮಹರ್ನೋರ್ (91 ವರ್ಷ) ಮತ್ತು ಶ್ರೀಮತಿ ಲಕ್ಷ್ಮೀಬಾಯಿ ಥಾವರೆ (80 ವರ್ಷ) ಅವರನ್ನೂ ಸನ್ಮಾನಿಸಲಾಯಿತು.
https://www.facebook.com/r.s.iyertumkur







No comments:

Post a Comment