* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 14 March 2019

Felicitation to R S Iyer - Womens Day Function 14-03-2019- ಸನ್ಮಾನ-

ನಮ್ಮ ಬಡಾವಣೆಯಲ್ಲೇ ಸನ್ಮಾನ ಸ್ವೀಕರಿಸುವ ಸಂತೋಷವನ್ನು ಬಣ್ಣಿಸಲಾಗದು. ಹೌದು, ಇಂದು (14-03-2019, ಗುರುವಾರ) ಸಂಜೆ ನಮ್ಮ ತುಮಕೂರಿನ ನೃಪತುಂಗ ಬಡಾವಣೆಯ "ನಿರ್ಭಯ ಮಹಿಳಾ ಜಾಗೃತಿ ವೇದಿಕೆ" ಏರ್ಪಡಿಸಿದ್ದ "ಮಹಿಳಾ ದಿನಾಚರಣೆ"ಯಲ್ಲಿ ಇತರೆ ಮೂವರು ಸಾಧಕರೊಡನೆ ನನ್ನನ್ನೂ ಸನ್ಮಾನಿಸಿದರು.
ಒಂದಕ್ಕಿಂತ ಒಂದು ಭಿನ್ನವಾದ 9500 ರಂಗೋಲೆ ಚಿತ್ರ ಬಿಡಿಸುವ ಮೂಲಕ "ವರ್ಲ್ಡ್ ಬುಕ್ ಆಫ್ ರೆಕಾರ್ಡ್''ಗೆ ಭಾಜನರಾಗಿರುವ ಶ್ರೀಮತಿ ಎಸ್.ವಿ.ಜಯ ಸೋ.ಮು.ಭಾಸ್ಕರಾಚಾರ್, "ಸಹಕಾರ ರತ್ನ" ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ, ವೃತ್ತಿನಿಷ್ಠ ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಶ್ರೀ ಮಹೇಶ್ ಅವರೊಂದಿಗೆ "ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ" ಪುರಸ್ಕೃತನಾಗಿರುವ ನನ್ನನ್ನೂ ಸನ್ಮಾನಿಸಿದರು.
ವೇದಿಕೆ ಅದ್ಯಕ್ಷೆ ಶ್ರೀಮತಿ ಗೀತಾ ನಾಗೇಶ್ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀ ಕವಿತಾಕೃಷ್ನ, ಸಾಹಿತಿ ಶ್ರೀ ಜಿ.ಕೆ.ಕುಲಕರ್ಣಿ, ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಶ್ರೀಮತಿ ಬಾ.ಹ.ರಮಾಕುಮಾರಿ, ಶ್ರೀಮತಿ ಸುಗುಣಾದೇವಿ ಮೊದಲಾದವರು ವೇದಿಕೆಯಲ್ಲಿದ್ದರು. ಬಡಾವಣೆಯ ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡಿದ್ದರು.













No comments:

Post a Comment