ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Friday, 28 June 2019

Kaveri River, Japada Katte 27-06-2019 Thursday

"ಜಪದಕಟ್ಟೆ"ಯ ಕಾವೇರಿಯ ನದಿಯಲ್ಲಿ
**********************************
"ಜಪದಕಟ್ಟೆ"ಯಲ್ಲಿ ಕಾವೇರಿ ನದಿ ಶಾಂತವಾಗಿ ಹರಿದುಹೋಗುತ್ತಿದೆ. ನದಿಯಲ್ಲಿರುವ ಸಣ್ಣಪುಟ್ಟ ಬಂಡೆಗಳನ್ನೇರಿ ಕುಳಿತರೆ, ಸುತ್ತಲೂ ನೀರು ಹಾಗೂ ಹಸಿರುಮಯವಾದ ಆ ವಾತಾವರಣವು ಬೆರೆಯದೇ ಲೋಕಕ್ಕೆ ಒಯ್ದುಬಿಡುತ್ತದೆ! ಸಂಜೆಯ ತಂಪಾದ ಹೊತ್ತಿನಲ್ಲಿ ಮುಗಿಲತುಂಬ ಆವರಿಸಿದ್ದ ಮೋಡಗಳ ಮರೆಯಲ್ಲಿ ಸೂರ್ಯ ಅಡಗಿದ್ದ. ಆಗಾಗ ಸಣ್ಣ ತುಂತುರು ಮಳೆ.. ದಿ.27-06-2019 ರಂದು ಗುರುವಾರ ಸಂಜೆ ಅಲ್ಲಿ ನಮಗೆ (ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್) ಹೊತ್ತು ಕಳೆದಿದ್ದೇ ಗೊತ್ತಾಗಲಿಲ್ಲ. ನದಿಯ ಎದುರು ದಡದಲ್ಲಿ ಮುಂಗಸಿಗಳ ಹಿಂಡು, ನವಿಲುಗಳು ಮಿಂಚಿನಂತೆ ಕಂಡು ಮಾಯವಾಗಿದ್ದು ರೋಮಾಂಚನಗೊಳಿಸಿತು... Kaveri River @ Japada Katte, K.R.Nagara Taluk, Mysore Dist...













No comments:

Post a Comment