* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 27 June 2019

Japada Katte, 27-06-2019 ಜಪದಕಟ್ಟೆಯಲ್ಲಿ

"ಜಪದಕಟ್ಟೆ"ಯಲ್ಲಿ....
*******************
ಕಾವೇರಿ ನದಿಯ ತಟದಲ್ಲಿರುವ "ಜಪದಕಟ್ಟೆ"ಯ ಸುಂದರ ಹಾಗೂ ಪ್ರಶಾಂತ ಪರಿಸರವನ್ನು ಸುಮ್ಮನೆ ಆಸ್ವಾದಿಸಬೇಕಷ್ಟೇ. ಹಾಸನ ಜಿಲ್ಲೆ ಹೊಳೆನರಸೀಪುರದಿಂದ 31 ಕಿ.ಮೀ. ದೂರವಿರುವ ಹಾಗೂ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಈ ಕ್ಷೇತ್ರದಲ್ಲಿ ಪುರಾತನ ಈಶ್ವರ ದೇವಾಲಯವಿದೆ. ಎಡತೊರೆ ಮಠವು ಈ ಕ್ಷೇತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ, ಸುವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ. ಹಿಂಬದಿಯೇ ಕಾವೇರಿ ನದಿಯ ಸೊಬಗನ್ನು ಕಾಣಬಹುದು. ದಿ.27-06-2019, ಗುರುವಾರ ಮಧ್ಯಾಹ್ನ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಇಲ್ಲಿಗೆ ಭೇಟಿ ನೀಡಿದ್ದೆವು.... @ Japada Katte, K.R.Nagara Taluk, Mysore Dist...27-06-2019






No comments:

Post a Comment