ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Thursday, 27 June 2019

Japada Katte, 27-06-2019 ಜಪದಕಟ್ಟೆಯಲ್ಲಿ

"ಜಪದಕಟ್ಟೆ"ಯಲ್ಲಿ....
*******************
ಕಾವೇರಿ ನದಿಯ ತಟದಲ್ಲಿರುವ "ಜಪದಕಟ್ಟೆ"ಯ ಸುಂದರ ಹಾಗೂ ಪ್ರಶಾಂತ ಪರಿಸರವನ್ನು ಸುಮ್ಮನೆ ಆಸ್ವಾದಿಸಬೇಕಷ್ಟೇ. ಹಾಸನ ಜಿಲ್ಲೆ ಹೊಳೆನರಸೀಪುರದಿಂದ 31 ಕಿ.ಮೀ. ದೂರವಿರುವ ಹಾಗೂ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಈ ಕ್ಷೇತ್ರದಲ್ಲಿ ಪುರಾತನ ಈಶ್ವರ ದೇವಾಲಯವಿದೆ. ಎಡತೊರೆ ಮಠವು ಈ ಕ್ಷೇತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ, ಸುವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ. ಹಿಂಬದಿಯೇ ಕಾವೇರಿ ನದಿಯ ಸೊಬಗನ್ನು ಕಾಣಬಹುದು. ದಿ.27-06-2019, ಗುರುವಾರ ಮಧ್ಯಾಹ್ನ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಇಲ್ಲಿಗೆ ಭೇಟಿ ನೀಡಿದ್ದೆವು.... @ Japada Katte, K.R.Nagara Taluk, Mysore Dist...27-06-2019






No comments:

Post a Comment