ದೇವರಾಯನದುರ್ಗದ ಮೇಲಿನ ಬೆಟ್ಟದಲ್ಲಿರುವ ಬಂಡೆಯೊಂದರ ಮೇಲೆ ಮುಸ್ಸಂಜೆಯಲ್ಲಿ ಕುಳಿತು ಊರ್ಡಿಗೆರೆ ಸುತ್ತಲಿನ ಪೂರ್ವ ಭಾಗದ ಪರಿಸರವನ್ನು ಅವಲೋಕಿಸುವುದೇ ಒಂದು ವಿಶಿಷ್ಟ ಅನುಭವ. ಮಿಂಚು ಹುಳುಗಳಂತೆ ಕಾಣುವ ದೂರದ ಊರುಗಳ ಸಾಲುಸಾಲು ವಿದ್ಯುತ್ ದೀಪಗಳ ಸಮೂಹವನ್ನು ನೋಡುವುದೇ ಆನಂದ. ಜೊತೆಗೆ ಆಗಸದಲ್ಲಿ ಚಂದ್ರನ ದರ್ಶನದ ಸೊಬಗು... ಇಂದು (16-06-2019, ಭಾನುವಾರ) ಸಂಜೆ 7 ಗಂಟೆಯಲ್ಲಿ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅಲ್ಲಿಗೆ ತೆರಳಿದ್ದೆವು.ಈ ಆಹ್ಲಾದಕರ ವಾತಾವರಣವನ್ನು ಆಸ್ವಾದಿಸಲು ಅಲ್ಲಿ ಅನೇಕ ಜನರು ಸೇರಿದ್ದರು...





No comments:
Post a Comment