* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 25 November 2021

ರಾಜ್ಯಪಾಲರುಗಳೊಂದಿಗೆ ವಿ.ಎಸ್.ರಾಮಚಂದ್ರನ್ / VSR with Governers

 ಕರ್ನಾಟಕದ ರಾಜ್ಯಪಾಲರುಗಳೊಂದಿಗೆ ನಮ್ಮ ತಂದೆ ..... with H'ble Governors of Karnataka






***************************
#ಫೋಟೊಆಲ್ಬಂ ನಲ್ಲಿ ಸಿಕ್ಕ ಅಪರೂಪದ ಫೋಟೊ
ಇದು 2008 ರ ಒಂದು ಅಪೂರ್ವ ಚಿತ್ರ. ಆಗ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ ಠಾಕೂರ್ ರವರು ಬೆಂಗಳೂರಿನ ರಾಜಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದಿನಾಂಕ 09-08-2008, ಶನಿವಾರ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಕಾರ್ಯಕ್ರಮ ಏರ್ಪಡಿಸಿದ್ದರು. ಆ ಸ್ಮರಣೀಯ ಕಾರ್ಯಕ್ರಮಕ್ಕೆ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರೂ ಆಹ್ವಾನಿತರಾಗಿದ್ದರು. ಆ ಸಂದರ್ಭದಲ್ಲಿ ರಾಜ್ಯಪಾಲರೊಡನೆ ಇದ್ದಾಗ ತೆಗೆಯಲಾದ ಚಿತ್ರವಿದು. ಅಂದು ನಮ್ಮ ತಂದೆಯವರೊಡನೆ ನಮ್ಮ ಪ್ರೀತಿಯ ಸಹೋದರಿ, ನಮ್ಮನ್ನಗಲಿದ ದಿವಂಗತ ಶ್ರೀಮತಿ ಮಹಾಲಕ್ಷ್ಮೀ ಸಹ ಇದ್ದುದು ಈ ಚಿತ್ರದ ಮಹತ್ವವನ್ನು ನಮ್ಮ ಪಾಲಿಗೆ ದುಪ್ಪಟ್ಟುಗೊಳಿಸಿದೆ.

@ Raj Bhavan, Bangalore , With the H'ble Governer of Karnataka Sri Rameshwar Takur... Sri V S Ramachandran, Freedom Fighter and his daughter Late Smt Mahalakshmi Sridhar. 2008

----------------------------------------------------



2006 ರ ಸ್ವಾತಂತ್ರ್ಯೋತ್ಸವದ ಪೂರ್ವಭಾವಿಯಾಗಿ ಬೆಂಗಳೂರಿನ ರಾಜಭವನದಲ್ಲಿ ಸ್ವಾತಂತ್ರ್ಯ ಯೋಧರನ್ನು ಗೌರವಿಸುವ ಕಾರ್ಯಕ್ರಮ ಏರ್ಪಟ್ಟಿತ್ತು. ಅಂದಿನ ರಾಜ್ಯಪಾಲರಾದ ಶ್ರೀ ಟಿ.ಎನ್.ಚತುರ್ವೇದಿಯವರ ಆಹ್ವಾನದ ಮೇರೆಗೆ ತುಮಕೂರಿನಿಂದ ಶ್ರೀ ವಿ.ಎಸ್.ರಾಮಚಂದ್ರನ್ ಅವರು ಪಾಲ್ಗೊಂಡಿದ್ದರು. ಅವರ ಜೊತೆಯಲ್ಲಿ ಪುತ್ರ ಶ್ರೀ ಆರ್.ವಿಶ್ವನಾಥನ್ ಇದ್ದರು.



****************************************************


ಬೆಂಗಳೂರಿನ ರಾಜಭವನದಲ್ಲಿ 2006 ರಲ್ಲಿ ಆಗಿನ ಸಚಿವರಾದ ಶ್ರೀ ಹೆಚ್.ಎಸ್.ಮಹದೇವ ಪ್ರಸಾದ್ ರವರೊಂದಿಗೆ...


No comments:

Post a Comment