* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 28 September 2023

M S Suhas Visit - 28-09-2023- ಎಂ.ಎಸ್. ಸುಹಾಸ್ ಭೇಟಿ

ನಮ್ಮ ಸಹೋದರಿ ದಿ|| ಶ್ರೀಮತಿ ಆರ್.ಮಹಾಲಕ್ಷ್ಮೀ ಶ್ರೀಧರ್ ರವರ ಪುತ್ರ ಎಂ.ಎಸ್. ಸುಹಾಸ್ ಮತ್ತು ಆತನ ಧರ್ಮಪತ್ನಿ ಶ್ರೀಮತಿ ಸುಭಾಷಿಣಿ ರವರು ಇಂದು (ದಿ. 28-09-2023) ಬೆಳಗ್ಗೆ ಬೆಂಗಳೂರಿನಿಂದ ನಮ್ಮ ಮನೆಗೆ ಆಗಮಿಸಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (94)ರವರ ಆಶೀರ್ವಾದ ಪಡೆದುಕೊಂಡರು. ತಾತ ಮತ್ತು ಮೊಮ್ಮಗನ ಈ ಭೇಟಿ ಉಭಯತ್ರರಲ್ಲೂ ಅಪಾರ ಸಂತೋಷ ಮೂಡಿಸಿತು.








****************************************************************************

ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರೊಡನೆ ಇಂದು (22-09-2023) ಬೆಂಗಳೂರಿನಿಂದ ಆಗಮಿಸಿದ್ದ ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್....









Wednesday 20 September 2023

ಸಾಲಿಗ್ರಾಮ ಹಸ್ತಾಂತರ - ದಿ. 20-09-2023 Saligrama

 ನಮ್ಮ ಮನೆಯಲ್ಲಿ ಪಾರಂಪರಿಕವಾಗಿ ಪೂಜಿಸಲ್ಪಡುತ್ತಿದ್ದ ಸಾಲಿಗ್ರಾಮಗಳನ್ನು ಇಂದು (ದಿ.20-09-2023, ಬುಧವಾರ) ಬೆಳಗ್ಗೆ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (94) ರವರು ಅನಿವಾರ್ಯ ಕಾರಣಗಳಿಂದ ನಮ್ಮ ತುಮಕೂರಿನ ಆಚಾರ್ಯರ ಬೀದಿ ನಿವಾಸಿಗಳೂ, ಕುಟುಂಬ ಸ್ನೇಹಿತರೂ ಆಗಿದ್ದ ದಿ|| ಶ್ರೀ ಶಾಮಾಚಾರ್ ಕುಟುಂಬ ವರ್ಗಕ್ಕೆ ಸೇರಿದ ಶ್ರೀ ಗುರುಪ್ರಸಾದ್ ರವರಿಗೆ ಹಸ್ತಾಂತರಿಸಿದರು. ಅದನ್ನು ಅವರು ಅತ್ಯಂತ ಶ್ರದ್ಧೆ-ಭಕ್ತಿಯಿಂದ ಸ್ವೀಕರಿಸಿ, ಪ್ರತಿನಿತ್ಯ ತಮ್ಮ ಮನೆಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದಾಗಿ ಕೃತಜ್ಞತೆಯಿಂದ ತಿಳಿಸಿದರು. ಅವರ ಮಿತ್ರ ಶ್ರೀ ಪ್ರವೀಣ್, ನಾನು ಮತ್ತು ಆರ್.ವಿಶ್ವನಾಥನ್ ಇದ್ದೆವು.

ನಮ್ಮ ತಂದೆಯವರ ತಂದೆ ಶ್ರೀ ವಿ.ಎಸ್.ರಾಮಯ್ಯರ್ (ಇವರು ಆಗಿನ ರೈಲ್ವೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರು. ಅದಕ್ಕೂ ಮೊದಲು 2 ನೇ ಮಹಾಯುದ್ಧದಲ್ಲಿ ಸೈನಿಕರಾಗಿ ಕಾರ್ಯನಿರ್ವಹಿಸಿದ್ದರಂತೆ) ಕೇರಳದ ಪಾಲಕ್ಕಾಡ್ ಊರಿನವರು. ಆ ಕಾಲದಲ್ಲಿ ದಿನವೂ ಮನೆಗೆ ಪುರೋಹಿತರು ಬಂದು ಈ ಸಾಲಿಗ್ರಾಮಗಳನ್ನು ಪೂಜಿಸುತ್ತಿದ್ದರಂತೆ. ಈ ಸಾಲಿಗ್ರಾಮಗಳು ಅವರ ಹಿಂದಿನವರಿಂದ ಬಂದಿದ್ದಂತೆ. ತಾತ ರಾಮಯ್ಯರ್ ಅವರು ರೈಲ್ವೆ ವೃತ್ತಿ ಸಂಬಂಧ ವಿವಿಧೆಡೆ ವರ್ಗಾವಣೆಯಾಗುತ್ತ ಕೊನೆಗೆ ತುಮಕೂರಿಗೆ ಬಂದು ನಿವೃತ್ತರಾಗಿದ್ದರು. ಆಗೆಲ್ಲ ಅವರೇ ಪೂಜಿಸುತ್ತಿದ್ದರಂತೆ. ಅವರ ಬಳಿಕ ನಮ್ಮ ತಂದೆಯವರು ಇದನ್ನು ದಶಕಗಳ ಕಾಲದಿಂದ ಪೂಜಿಸುತ್ತಿದ್ದರು. ತೀರಾ ಇತ್ತೀಚಿನವರೆಗೂ ದಿನವೂ ಪೂಜೆ ಮಾಡುತ್ತಲೇ ಇದ್ದರು. ಆದರೆ ಇತ್ತೀಚೆಗೆ ಆರೋಗ್ಯದ ಕಾರಣದಿಂದ ಅವರಿಂದ ಪೂಜಿಸಲು ಆಗುತ್ತಿಲ್ಲ. ಹೀಗಾಗಿ ಪ್ರತಿನಿತ್ಯ ಶಾಸ್ತ್ರೋಕ್ತವಾಗಿ ಪೂಜಿಸುವವರಿಗೆ ಇದನ್ನು ಹಸ್ತಾಂತರಿಸಬೇಕೆಂಬ ಆಶಯ ನಮ್ಮೆಲ್ಲರಲ್ಲೂ ಇತ್ತು. ಅತ್ತ ಗುರುಪ್ರಸಾದ್ ರವರೂ ಸಾಲಿಗ್ರಾಮಕ್ಕಾಗಿ ಹುಡುಕಾಟ ನಡೆಸಿದ್ದು, ಅವರಿಗೆ ಈ ಮಾಹಿತಿ ದೊರೆತೊಡನೆ ಇಂದು ನಮ್ಮ ಮನೆಗೆ ಆಗಮಿಸಿ ಭಕ್ತಿಯಿಂದ ಸ್ವೀಕರಿಸಿದರು. ಉಭಯತ್ರರಿಗೂ ಸಮಾಧಾನ, ಸಂತೋಷ ಆಯಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 20-09-2023













Monday 18 September 2023

Ganesha Chaturthi-2023 ಗಣೇಶನ ಹಬ್ಬ ಆಚರಣೆ ದಿ. 18-09-2023

 ಶ್ರೀ ಶೋಭಕೃತ ನಾಮ ಸಂವತ್ಸರದ ಭಾದ್ರಪದ ಶುಕ್ಲ ಚೌತಿಯಾದ ಇಂದು (ದಿ. 18-09-2023, ಸೋಮವಾರ) ನಮ್ಮ ಮನೆಯಲ್ಲಿ ಪ್ರತಿವರ್ಷದಂತೆ “ಶ್ರೀ ಗಣೇಶ ಚತುರ್ಥಿ”ಯನ್ನು ಆಚರಿಸಿದೆವು. ಮಣ್ಣಿನ ಗಣಪ ಮತ್ತು ಗೌರಿ ವಿಗ್ರಹಗಳಿಗೆ ಶಾಸ್ತ್ರೋಕ್ತವಾಗಿ ಪೂಜಿಸಿ ನಮಿಸಿದೆವು. “ಲೋಕಾಃ ಸಮಸ್ತಾಃ ಸುಖಿನೋ ಭವಂತು”, “ಸರ್ವೇ ಜನಾಃ ಸುಖಿನೋ ಭವಂತು” ಎಂದು ಪ್ರಾರ್ಥಿಸಿದೆವು. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (94) ರವರು ಮಂಗಳಾರತಿ ನೆರವೇರಿಸಿದರು. ಹೀಗೆ 2023 ರ “ಗಣಪತಿ ಹಬ್ಬ” ನೆರವೇರಿ, ನೆಮ್ಮದಿ ಮೂಡಿಸಿತು. Ganesha Chaturthi-2023

-ಆರ್.ಎಸ್. ಅಯ್ಯರ್, ತುಮಕೂರು














Wednesday 13 September 2023

Vidyashankara Temple and surroundings 11-09-2023 ವಿದ್ಯಾಶಂಖರ ದೇಗುಲ ಮತ್ತು ಸುತ್ತಮುತ್ತ

ಬಹುದಿನಗಳ ಬಳಿಕ ನಮ್ಮ ನೆಚ್ಚಿನ ತಾಣ, ತುಮಕೂರು ಸನಿಹದ ದೇವರಾಯನದುರ್ಗ ಅರಣ್ಯದ ನಡುವಿನ ದುರ್ಗದ ಹಳ್ಳಿಯಲ್ಲಿರುವ ಪುರಾತನ ಶ್ರೀ ವಿದ್ಯಾಶಂಕರ ದೇವಾಲಯಕ್ಕೆ ದಿ. 11-09-2023 ರಂದು ಭೇಟಿ..... After a long time, today ( 11-09-2023) evening we visited Sri Vidyashankara Temple @ Devarayanadurga Forest, near to Tumakuru.



R S Iyer Tumkur & R Vishwanathan Tumkur
 





Temple priest Sri Vijayakumar 











                                                     *************************

ದೇವರಾಯನದುರ್ಗ ಅರಣ್ಯದ ನಡುವಿನ ದುರ್ಗದ ಹಳ್ಳಿ ಬಳಿಯಿರುವ ಶ್ರೀ ವಿದ್ಯಾಶಂಕರ ದೇವಾಲಯಕ್ಕೆ ಹೊಂದಿಕೊಂಡಂತೆ ಪ್ರಸಾದ ವಿತರಣೆಗೆ ಅನುಕೂಲವಾಗುವ ಷೆಲ್ಟರ್ ಒಂದು ನಿರ್ಮಾಣವಾಗುತ್ತಿದೆ. ಮುಜರಾಯಿ ಇಲಾಖೆಯ ವತಿಯಿಂದ ಈ ಉದ್ದೇಶಕ್ಕಾಗಿ 10 ಲಕ್ಷ ರೂ. ಮಂಜೂರಾಗಿದ್ದು, ನಿರ್ಮಿತಿ ಕೇಂದ್ರದ ವತಿಯಿಂದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಹಿಂದೆ ತುಮಕೂರು ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಎಸ್.ಆರ್.ಉಮಾಶಂಕರ್ ರವರು ಇತ್ತೀಚೆಗೆ ಮುಜರಾಯಿ ಇಲಾಖೆಯ ಆಯುಕ್ತರಾಗಿದ್ದ ಅವಧಿಯಲ್ಲಿ ಈ ಷೆಲ್ಟರ್ ನಿರ್ಮಾಣಕ್ಕೆ ಹಣ ಮಂಜೂರು ಮಾಢಿದ್ದಾರೆಂದು ಹೇಳಲಾಗುತ್ತಿದೆ. ಅರಣ್ಯದ ನಡುವಿನ ನಿರ್ಜನ ಪ್ರದೇಶದಲ್ಲಿರುವ ಈ ದೇಗುಲಕ್ಕೆ ಇಂತಹುದೊಂದು ಸೌಲಭ್ಯದ ಅವಶ್ಯಕತೆ ಇತ್ತು. ಇದರಿಂದ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ.



                                                 ******************************

Sri Vidyashankara Temple Surroundings....


R S Iyer Tumkur & R Vishwanathan Tumkur













***************************



Tuesday 5 September 2023

Sri Sanandana Karanic visit 2023 ಶ್ರೀ ಸನಂದನ ಕರಣೀಕ ರವರ ಭೇಟಿ

 

“ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ - ಹಿನ್ನೆಲೆ” ಕೃತಿ ಸಮರ್ಪಣೆ

--------------------------------------

ಮೂಲತಃ ತುಮಕೂರಿನವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ ಆಡಿಟರ್ ಆಗಿರುವ ಶ್ರೀ ಸನಂದನ ಕರಣೀಕರವರು ತಮ್ಮ ಧರ್ಮಪತ್ನಿ ಶ್ರೀಮತಿ ಸರಳರವರೊಂದಿಗೆ ಇಂದು (ದಿ. 05-09-2023, ಮಂಗಳವಾರ) ಮಧ್ಯಾಹ್ನ ತುಮಕೂರಿನ ನಮ್ಮ ನಿವಾಸಕ್ಕೆ ಆಗಮಿಸಿ, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸ್ಥಾಪಕರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (94) ರವರನ್ನು ಭೇಟಿ ಮಾಡಿ, ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಿರುವ “ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು : ನೆಲೆ - ಹಿನ್ನೆಲೆ” ಎಂಬ ಐತಿಹಾಸಿಕ ಮಾಹಿತಿಯ ಬೃಹತ್ ಗ್ರಂಥವನ್ನು ಸಮರ್ಪಿಸಿದರು.

 562 ಪ್ಲಸ್ ಪುಟಗಳ, 36 ಲೇಖನಗಳುಳ್ಳ ಈ ಗ್ರಂಥವನ್ನು ಖ್ಯಾತ ಬರಹಗಾರ ಹಾಗೂ ಭೂವಿಜ್ಞಾನಿಗಳಾದ ಡಾ. ಟಿ.ಆರ್.ಅನಂತರಾಮು ರವರು ಸಂಪಾದಿಸಿದ್ದಾರೆ. ಕನ್ನಡದ ಪ್ರಸಿದ್ಧ ವಿದ್ವಾಂಸರಾದ ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಮುನ್ನುಡಿ ಬರೆದಿದ್ದಾರೆ. ಶತಾವಧಾನಿಗಳೂ, ಬಹುಶ್ರುತ ವಿದ್ವಾಂಸರೂ ಆದ ಡಾ. ಆರ್.ಗಣೇಶ್ ರವರು ಹಿನ್ನುಡಿ ಬರೆದಿದ್ದಾರೆ. ಕರ್ನಾಟಕದ ಸ್ಮಾರ್ತ ಬ್ರಾಹ್ಮಣ ಸಮುದಾಯದ ಎಲ್ಲ ಒಳಪಂಗಡಗಳ ಸಮಗ್ರ ಐತಿಹಾಸಿಕ ಮಾಹಿತಿ ಈ ಗ್ರಂಥದಲ್ಲಿದ್ದು, “ವಂಗೀಪುರಂ ಬ್ರಾಹ್ಮಣರು” ಕುರಿತಂತೆ ಆಡಿಟರ್ ಶ್ರೀ ಸನಂದನ ಕರಣೀಕರವರು ಲೇಖನ ಬರೆದಿದ್ದಾರೆ. ಈ ಗ್ರಂಥದ ಮುಖಬೆಲೆ 800 ರೂ. ಆಗಿದ್ದು, ಹರಿವು ಕ್ರಿಯೇಷನ್ಸ್ ಪ್ರೈ.ಲಿ. ಇದನ್ನು ಪ್ರಕಟಿಸಿದೆ.

 ಶ್ರೀ ಸನಂದನ ಕರಣೀಕರವರ ತಂದೆ ದಿ. ಶ್ರೀ ಟಿ.ಕೆ.ನಲ್ಲಪ್ಪನವರು ನಮ್ಮ ತಂದೆಯವರಿಗೆ ಪರಿಚಿತರಾಗಿದ್ದವರು. ಶ್ರೀ ನಲ್ಲಪ್ಪನವರ ಸಹೋದರರೂ,  ಖ್ಯಾತ ಸಂಗೀತ-ಸಂಸ್ಕೃತ ವಿದ್ವಾಂಸರೂ ಆಗಿದ್ದ ದಿ. ಟಿ.ಕೆ.ರಾಮಮೂರ್ತಿರವರು ಮತ್ತು ದಿ. ಶ್ರೀ ಟಿ.ಕೆ.ಪುಟ್ಟಣ್ಣಯ್ಯರವರು ತುಮಕೂರಿನ ಚಿಕ್ಕಪೇಟೆಯ ನಿವಾಸಿಗಳೇ ಆಗಿದ್ದು, ನಮ್ಮ ತಂದೆಗೆ ಅತ್ಯಂತ ಆತ್ಮೀಯರಾಗಿದ್ದರು. ಶ್ರೀಮತಿ ಸರಳರವರ ತಂದೆ ತುಮಕೂರಿನ ಅಗ್ರಹಾರದ ನಿವಾಸಿಗಳಾಗಿದ್ದ ದಿ. ಶ್ರೀ ನರಸಿಂಹಮೂರ್ತಿ (ಹಲ್ಲಿನ ಡಾಕ್ಟರ್) ರವರೂ, ತಾತ ಶ್ರೀ ರಾಮಾಶಾಸ್ತ್ರಿಗಳೂ ನಮ್ಮ ತಂದೆಯವರಿಗೆ ತುಂಬ ಹತ್ತಿರದವರಾಗಿದ್ದವರು. ಇಂದಿನ ಭೇಟಿಯ ಮಾತುಕತೆಯಲ್ಲಿ ಹಳೆಯ ತುಮಕೂರಿನ ಗತವೈಭವದ ಇವೆಲ್ಲ ಮಧುರ ಸಂಗತಿಗಳೂ ಮತ್ತೊಮ್ಮೆ ನೆನಪಿಗೆ ಬಂದು, ಎಲ್ಲರಲ್ಲೂ ಹರ್ಷವನ್ನುಂಟುಮಾಡಿತು.

 ಶ್ರೀ ಸನಂದನ ಕರಣೀಕ ಮತ್ತು ಶ್ರೀಮತಿ ಸರಳ ದಂಪತಿಗಳು ನಮ್ಮ ತಂದೆಯವರಿಗೆ ನಮಿಸಿ ಆಶೀರ್ವಾದ ಪಡೆದುಕೊಂಡರು. ಈ ಭೇಟಿಯ ಸವಿನೆನಪಿಗಾಗಿ ನಮ್ಮ ತಂದೆಯವರೂ ಶ್ರೀ ಸನಂದನರವರಿಗೆ ಶಾಲುಹೊದಿಸಿ ಗೌರವಿಸಿದರು.  

 -ಆರ್.ಎಸ್.ಅಯ್ಯರ್, ತುಮಕೂರು, ದಿ. 05-09-2023