ಶ್ರೀ ಶೋಭಕೃತ ನಾಮ ಸಂವತ್ಸರದ ಭಾದ್ರಪದ ಶುಕ್ಲ ಚೌತಿಯಾದ ಇಂದು (ದಿ. 18-09-2023, ಸೋಮವಾರ) ನಮ್ಮ ಮನೆಯಲ್ಲಿ ಪ್ರತಿವರ್ಷದಂತೆ “ಶ್ರೀ ಗಣೇಶ ಚತುರ್ಥಿ”ಯನ್ನು ಆಚರಿಸಿದೆವು. ಮಣ್ಣಿನ ಗಣಪ ಮತ್ತು ಗೌರಿ ವಿಗ್ರಹಗಳಿಗೆ ಶಾಸ್ತ್ರೋಕ್ತವಾಗಿ ಪೂಜಿಸಿ ನಮಿಸಿದೆವು. “ಲೋಕಾಃ ಸಮಸ್ತಾಃ ಸುಖಿನೋ ಭವಂತು”, “ಸರ್ವೇ ಜನಾಃ ಸುಖಿನೋ ಭವಂತು” ಎಂದು ಪ್ರಾರ್ಥಿಸಿದೆವು. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (94) ರವರು ಮಂಗಳಾರತಿ ನೆರವೇರಿಸಿದರು. ಹೀಗೆ 2023 ರ “ಗಣಪತಿ ಹಬ್ಬ” ನೆರವೇರಿ, ನೆಮ್ಮದಿ ಮೂಡಿಸಿತು. Ganesha Chaturthi-2023











No comments:
Post a Comment