96 ರ ಹೊಸ್ತಿಲಲ್ಲಿ ಸಂತಸದ ಕ್ಷಣಗಳು…
-------------------------------------
ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ ವಿ.ಎಸ್.ರಾಮಚಂದ್ರನ್ ರವರು ಇದೇ ಜನವರಿ 14 “ಸಂಕ್ರಾಂತಿ”ಯಂದು (ದಿ.14-01-2025) 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು.
ಅಂದೇ ರಾತ್ರಿ ಮೊಮ್ಮಗ ವಿ.ವಿವೇಕ್ - ಶ್ರೀಮತಿ ರಶ್ಮಿ ದಂಪತಿ (ಈರ್ವರೂ ಇಂಜಿನಿಯರ್ ಗಳು) ತಮ್ಮ ಏಳು ತಿಂಗಳ ಪುಟಾಣಿ ಗಂಡು ಮಗುವಿನೊಡನೆ ಆಗಮಿಸಿದ್ದರು. ನಮ್ಮ ತಂದೆಗೆ ಸಂಕ್ರಾಂತಿಯ ಎಳ್ಳುಬೆಲ್ಲದೊಡನೆ, ಫಲತಾಂಬೂಲ ನೀಡಿ ಜನ್ಮದಿನದ ಶುಭ ಕೋರಿದರು. ಇದೇ ಸಂದರ್ಭದಲ್ಲಿ 7 ತಿಂಗಳ “ಮರಿಮಗ” 96 ನೇ ವಸಂತಕ್ಕೆ ಕಾಲಿಟ್ಟ ತನ್ನ “ಮುತ್ತಜ್ಜನ ಮಡಿಲಲ್ಲಿ” ಕೆಲ ನಿಮಿಷ ಇದ್ದು ಮುತ್ತಜ್ಜನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಲಿದದ್ದು ಹಾಗೂ ವಿಶ್ವನಾಥನ್ ಎತ್ತಿಕೊಂಡಾಗ ಜೋರು ನಗುವಿನ ಪ್ರತಿಕ್ರಿಯೆ ನೀಡಿದ್ದು ಚೇತೋಹಾರಿಯಾಗಿತ್ತು.
ಹಿಂದಿನ ದಿನವಷ್ಟೇ ವಿವೇಕ್ ತನ್ನ ಹುಟ್ಟುಹಬ್ಬ ಆಚರಿಸಿದ್ದು, ಆ ಹಿನ್ನೆಲೆಯಲ್ಲಿ ನಮ್ಮ ತಂದೆ ತನ್ನ ಮೊಮ್ಮಗನಿಗೆ ಶಾಲುಹೊದಿಸಿ, ಹಾರ ಹಾಕಿ ಜನ್ಮದಿನದ ಶುಭಾಶಯ ಕೋರಿ ಸಂತಸ ಹಂಚಿಕೊಂಡರು.
ಜನವರಿ 15 ರಂದು ಮಗಳು ಶ್ರೀಮತಿ ಗಾಯತ್ರಿ ಸತ್ಯನಾರಾಯಣ್ ಬೆಂಗಳೂರಿನಿಂದ ಆಗಮಿಸಿ, ತಂದೆಗೆ ಶುಭಾಶಯ ಕೋರಿದ್ದು ಉಭಯತ್ರರಲ್ಲೂ ಉಲ್ಲಾಸವನ್ನುಂಟುಮಾಡಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 17-01-2025
No comments:
Post a Comment