ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Thursday, 21 August 2025

ವಿಪ್ರ ಮುಖಂಡರಿಂದ ಸನ್ಮಾನ - ದಿ.21-08-2025- Honored by Vipra leaders


 ವಿಪ್ರ ಮುಖಂಡರಿಂದ ಗೌರವಾರ್ಪಣೆ
ದಶಕಗಳ ಹಿಂದಿನ ಸ್ನೇಹಿತರಾದ ಶ್ರೀ ಹೆಚ್.ಎನ್.ಚಂದ್ರಶೇಖರ್ ರವರು ಮೊದಲೇ ತಿಳಿಸಿದ್ದಂತೆ ಇಂದು (ದಿ. 21-08-2025) ಸಂಜೆ ನಮ್ಮ ಮನೆಗೆ ಆಗಮಿಸಿದ್ದರು. ತುಮಕೂರಿನ ಹಿರಿಯ ಸ್ಟಾಂಪ್ ವೆಂಡರ್ ಆಗಿರುವ ಶ್ರೀಯುತರು, ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಗೊಂಡ ಹಿರಿಮೆಯನ್ನೂ ಪಡೆದ ಸಜ್ಜನರು.
ಇವರೊಡನೆ ಯುವ ಮಿತ್ರ ಡಾ. ಹೆಚ್.ಹರೀಶ್ ರವರೂ ಆಗಮಿಸಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿಯೂ, ತುಮಕೂರು ಜಿಲ್ಲಾ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿಯೂ ಆದ ಇವರು, ಅನನ್ಯ ಶಿಕ್ಷಣ ಟ್ರಸ್ಟ್ ನ ಟ್ರಸ್ಟಿಯೂ ಆಗಿ ಶಿಕ್ಷಣ ಕ್ಷೇತ್ರದಲ್ಲಿ ಮುಂದಡಿಯಿಡುತ್ತಿದ್ದಾರೆ. ಇವರು ನಗರದ ಪ್ರಸಿದ್ಧ ಅಡುಗೆ ಕಂಟ್ರಾಕ್ಟರ್ ಆಗಿರುವ ಹಾಗೂ ಪ್ರಸ್ತುತ ಶ್ರೀ ಶಂಕರ ಮಠದ ಅಧ್ಯಕ್ಷರೂ ಆಗಿರುವ ಶ್ರೀ ಹಿರಿಯಣ್ಣನವರ ಸುಪುತ್ರರು.
ಬ್ರಾಹ್ಮಣ ಸಮಾಜದ ಈರ್ವರೂ ಮುಖಂಡರು ನಮ್ಮ ತಂದೆಯವರನ್ನು ಭೇಟಿ ಮಾಡಬೇಕೆಂಬ ಆಶಯದಿಂದ ಮೊದಲೇ ಫೋನ್ ಮಾಡಿ ಆಗಮಿಸಿದ್ದರು. ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೆ, 1968 ರಲ್ಲೇ ಶ್ರೀ ಶಂಕರ ಜಯಂತಿ ಸಭಾವನ್ನು ಸ್ಥಾಪಿಸಿ ಸುಮಾರು ನಾಲ್ಕು ದಶಕಗಳಕಾಲ ಮುನ್ನಡೆಸಿದವರು. ಈ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಂಘಟನೆಗಳ ಈ ಈರ್ವರೂ ಮುಖಂಡರು ರಾಮಚಂದ್ರನ್ ರವರನ್ನು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಫಲತಾಂಬೂಲ ಸಮರ್ಪಿಸಿ ಗೌರವಿಸಿದರಲ್ಲದೆ, ಹಿರಿಯರ ಆಶೀರ್ವಾದ ಪಡೆದುಕೊಂಡು ಹರ್ಷಿಸಿದರು. ಈ ಸಂದರ್ಭದಲ್ಲಿ ನಾನು ಮತ್ತು ವಿಶ್ವನಾಥನ್ ಇದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 21-08-2025








No comments:

Post a Comment