ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Thursday, 21 August 2025

ವಿಪ್ರ ಮುಖಂಡರಿಂದ ಸನ್ಮಾನ - ದಿ.21-08-2025- Honored by Vipra leaders


 ವಿಪ್ರ ಮುಖಂಡರಿಂದ ಗೌರವಾರ್ಪಣೆ
ದಶಕಗಳ ಹಿಂದಿನ ಸ್ನೇಹಿತರಾದ ಶ್ರೀ ಹೆಚ್.ಎನ್.ಚಂದ್ರಶೇಖರ್ ರವರು ಮೊದಲೇ ತಿಳಿಸಿದ್ದಂತೆ ಇಂದು (ದಿ. 21-08-2025) ಸಂಜೆ ನಮ್ಮ ಮನೆಗೆ ಆಗಮಿಸಿದ್ದರು. ತುಮಕೂರಿನ ಹಿರಿಯ ಸ್ಟಾಂಪ್ ವೆಂಡರ್ ಆಗಿರುವ ಶ್ರೀಯುತರು, ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಗೊಂಡ ಹಿರಿಮೆಯನ್ನೂ ಪಡೆದ ಸಜ್ಜನರು.
ಇವರೊಡನೆ ಯುವ ಮಿತ್ರ ಡಾ. ಹೆಚ್.ಹರೀಶ್ ರವರೂ ಆಗಮಿಸಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿಯೂ, ತುಮಕೂರು ಜಿಲ್ಲಾ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿಯೂ ಆದ ಇವರು, ಅನನ್ಯ ಶಿಕ್ಷಣ ಟ್ರಸ್ಟ್ ನ ಟ್ರಸ್ಟಿಯೂ ಆಗಿ ಶಿಕ್ಷಣ ಕ್ಷೇತ್ರದಲ್ಲಿ ಮುಂದಡಿಯಿಡುತ್ತಿದ್ದಾರೆ. ಇವರು ನಗರದ ಪ್ರಸಿದ್ಧ ಅಡುಗೆ ಕಂಟ್ರಾಕ್ಟರ್ ಆಗಿರುವ ಹಾಗೂ ಪ್ರಸ್ತುತ ಶ್ರೀ ಶಂಕರ ಮಠದ ಅಧ್ಯಕ್ಷರೂ ಆಗಿರುವ ಶ್ರೀ ಹಿರಿಯಣ್ಣನವರ ಸುಪುತ್ರರು.
ಬ್ರಾಹ್ಮಣ ಸಮಾಜದ ಈರ್ವರೂ ಮುಖಂಡರು ನಮ್ಮ ತಂದೆಯವರನ್ನು ಭೇಟಿ ಮಾಡಬೇಕೆಂಬ ಆಶಯದಿಂದ ಮೊದಲೇ ಫೋನ್ ಮಾಡಿ ಆಗಮಿಸಿದ್ದರು. ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೆ, 1968 ರಲ್ಲೇ ಶ್ರೀ ಶಂಕರ ಜಯಂತಿ ಸಭಾವನ್ನು ಸ್ಥಾಪಿಸಿ ಸುಮಾರು ನಾಲ್ಕು ದಶಕಗಳಕಾಲ ಮುನ್ನಡೆಸಿದವರು. ಈ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಂಘಟನೆಗಳ ಈ ಈರ್ವರೂ ಮುಖಂಡರು ರಾಮಚಂದ್ರನ್ ರವರನ್ನು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಫಲತಾಂಬೂಲ ಸಮರ್ಪಿಸಿ ಗೌರವಿಸಿದರಲ್ಲದೆ, ಹಿರಿಯರ ಆಶೀರ್ವಾದ ಪಡೆದುಕೊಂಡು ಹರ್ಷಿಸಿದರು. ಈ ಸಂದರ್ಭದಲ್ಲಿ ನಾನು ಮತ್ತು ವಿಶ್ವನಾಥನ್ ಇದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 21-08-2025








krishna

subramya

Saturday, 5 July 2025

Shivasathya Interview in DD- 02-07-2025- ಚಂದನ ವಾಹಿನಿಯಲ್ಲಿ ಶಿವಸತ್ಯ ಸಂದರ್ಶನ

 






ಹೆಸರಾಂತ ಸಂಗೀತ ನಿರ್ದೇಶಕರೂ, ಸಂಗೀತ ಸಂಯೋಜಕರೂ, ಪಕ್ಕವಾದ್ಯ ಕಲಾವಿದರೂ (ವಿಶೇಷವಾಗಿ ತಬಲ), ಅಸಂಖ್ಯಾತ ಧಾರಾವಾಹಿಗಳಿಗೆ ಹಿನ್ನೆಲೆ ಸಂಗೀತ ನೀಡಿರುವವರೂ ಆಗಿರುವ ಬಹುಮುಖ ಪ್ರತಿಭೆಯ ಕಲಾವಿದ ಶ್ರೀ ಶಿವಸತ್ಯ ಅವರ ನೇರ ಸಂದರ್ಶನ (ಲೈವ್) ಬೆಂಗಳೂರು ದೂರದರ್ಶನ “ಚಂದನ” ವಾಹಿನಿಯಲ್ಲಿ ಇಂದು (ದಿ. 02-07-2025) ಬೆಳಗ್ಗೆ 8 ರಿಂದ 9 ಗಂಟೆಯವರೆಗೆ ಪ್ರಸಾರವಾಯಿತು. ನಿರೂಪಕಿ ಶ್ರೀಮತಿ ಸಂಧ್ಯಾಭಟ್ ರವರು ನಡೆಸಿಕೊಟ್ಟ ಈ ಸುಂದರ ಕಾರ್ಯಕ್ರಮದಲ್ಲಿ ಶ್ರೀ ಶಿವಸತ್ಯ ರವರು ತಮ್ಮ ಕಲಾ ಸಾಧನೆಯನ್ನು ಮನಮುಟ್ಟುವಂತೆ ವಿವರಿಸಿದರು.
ಶ್ರೀ ಶಿವಸತ್ಯ ರವರ ಸಂಗೀತ ನಿರ್ದೇಶನದಲ್ಲಿ ಖ್ಯಾತ ಗಾಯಕ ದಿ|| ಶ್ರೀ ಸಿ.ಅಶ್ವಥ್ ರವರು ಹಾಡು ಹಾಡಿದ್ದಾರೆ. ಪ್ರಖ್ಯಾತ ಗಾಯಕರಾದ ದಿ|| ಶ್ರೀ ಪಿ.ಬಿ. ಶ್ರೀನಿವಾಸ್ ರವರು, ದಿ|| ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂರವರು, ಗಾನ ಕೋಗಿಲೆ ಶ್ರೀಮತಿ ಎಸ್.ಜಾನಕಿಯವರು ಮೊದಲಾದ ದಿಗ್ಗಜರಿಗೆ ಪಕ್ಕವಾದ್ಯ ನುಡಿಸಿದ ಹೆಗ್ಗಳಿಕೆಯನ್ನು ಶ್ರೀ ಶಿವಸತ್ಯ ಹೊಂದಿದ್ದಾರೆ.
ಶ್ರೀ ಶಿವಸತ್ಯರವರು ಕನ್ನಡ ಚಿತ್ರರಂಗದ ಜನಪ್ರಿಯ ನಟರಾಗಿದ್ದ ದಿ|| ಶ್ರೀ ಎಂ.ಎಸ್.ಸತ್ಯರವರ ಸುಪುತ್ರರು. ನಮ್ಮ ಸಹೋದರಿ ಶ್ರೀಮತಿ ಆರ್.ವಿದ್ಯಾ ಅವರ ಪತಿ.
ಇಂದು ಟಿ.ವಿ.ಯಲ್ಲಿ ಈ ಕಾರ್ಯಕ್ರಮವನ್ನು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ಅತ್ಯುತ್ಸಾಹದಿಂದ ವೀಕ್ಷಿಸಿ ಆನಂದಿಸಿದರು. ತಮ್ಮ ಅಳಿಯನ ಸಾಧನೆಯನ್ನು ಹೆಮ್ಮೆಯಿಂದ ನೋಡಿ ಸಂತೋಷಪಟ್ಟರು. ಆ ಸಂತೋಷದಲ್ಲಿ ನಾನು ಮತ್ತು ವಿಶ್ವನಾಥನ್ ಸಹಾ ಭಾಗಿಯಾದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 02-07-2025 #rsiyertumakuru


Monday, 9 June 2025

Sriranjini Visit /2025 / ಶ್ರೀರಂಜಿನಿ ಭೇಟಿ


 ತಾತ-ಮೊಮ್ಮಗಳ ಸಂತಸದ ಕ್ಷಣಗಳು.....
ನಮ್ಮ ಸಹೋದರಿ ಶ್ರೀಮತಿ ಆರ್.ವಿದ್ಯಾ ಮತ್ತು ಪ್ರಸಿದ್ಧ ಸಂಗೀತ ಸಂಯೋಜಕರೂ, ಸಂಗೀತ ನಿರ್ದೇಶಕರೂ ಆಗಿರುವ ಶ್ರೀ ಶಿವಸತ್ಯ ದಂಪತಿಯ ಸುಪುತ್ರಿ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಕು. ಶ್ರೀರಂಜಿನಿ ತನ್ನ ತಾತ (ನಮ್ಮ ತಂದೆ) ಸ್ವಾತಂತ್ರ್ಯ ಹೋರಾಟಗಾರರಾದ ವಿ.ಎಸ್.ರಾಮಚಂದ್ರನ್ (96) ಅವರ ಕುಶಲೋಪರಿ ವಿಚಾರಿಸಲು ಬೆಂಗಳೂರಿನಿಂದ ಆಗಮಿಸಿ, ಜೂನ್ 7 ಮತ್ತು 8 ರಂದು ಎರಡು ದಿನಗಳ ಕಾಲ ತನ್ನ ತಾತನೊಂದಿಗೆ ಸಂತಸದ ಕ್ಷಣಗಳನ್ನು ಕಳೆದಳು.
ಶನಿವಾರ ವಿಶ್ವನಾಥನ್ ಜೊತೆಯಲ್ಲಿ ಹೆಬ್ಬೂರಿನ ಶ್ರೀ ಕೋದಂಡಾಶ್ರಮ ಮಠಕ್ಕೆ ತೆರಳಿ ಶ್ರೀ ಕಾಮಾಕ್ಷಿ ದೇವಿಯ ದರ್ಶನ ಪಡೆದಳು. ಭಾನುವಾರ ಸುಪ್ರಸಿದ್ಧ ಯಾತ್ರಾ ಸ್ಥಳವಾದ ದೇವರಾಯನದುರ್ಗವನ್ನು ವೀಕ್ಷಿಸಿ ಸಂತೋಷಪಟ್ಟಳು.
ಭಾನುವಾರ ಮಧ್ಯಾಹ್ನ ಶ್ರೀರಂಜಿನಿ ಬೆಂಗಳೂರಿಗೆ ಹೊರಡುವಾಗ, ಪ್ರಸ್ತುತ TCS ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ಈ ಮೊಮ್ಮೊಗಳಿಗೆ ಶಾಲು ಹೊದಿಸುವ ಮೂಲಕ ತಾತ ರಾಮಚಂದ್ರನ್ ರವರು ಶುಭಾಶೀರ್ವಾದ ಮಾಡಿದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 08-06-2025 #rsiyertumakuru








Sunday, 1 June 2025

R Gayathri Visit - 01-06-2025

ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರ ಯೋಗಕ್ಷೇಮ ವಿಚಾರಿಸಲು ನಮ್ಮ ಸಹೋದರಿ ಶ್ರೀಮತಿ ಆರ್. ಗಾಯತ್ರಿ ಸತ್ಯನಾರಾಯಣ್ ತನ್ನ ಮಕ್ಕಳಾದ ಹೆಚ್.ಎಸ್. ಪವನ್ ಮತ್ತು ನಮಿತಾ ಅವರ ಜೊತೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದು, ಈ ಭೇಟಿ ನಮ್ಮೆಲ್ಲರಿಗೂ ಸಂತಸ ಮೂಡಿಸಿತು.
ನಿನ್ನೆ (ದಿ. 31-05-2025) ಸಂಜೆ ಅಗಮಿಸಿದ ಅವರು, ಸಂಜೆಯೇ ತುಮಕೂರಿನ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಇಂದು (ದಿ.01-06-2025) ಬೆಳಗ್ಗೆ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಾಲಯ, ಜಯನಗರದ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಬಳಿಕ ಸಮೀಪದ ನಾಮದ ಚಿಲುಮೆ, ದೇವರಾಯನದುರ್ಗ ಹಾಗೂ ದುರ್ಗದ ಹಳ್ಳಿಯ ಶ್ರೀ ವಿದ್ಯಾಶಂಕರ ದೇವಾಲಯ ವೀಕ್ಷಿಸಿ ಸಂತೋಷಪಟ್ಟರು. ಇಂದು ನಾಮದ ಚಿಲುಮೆ ಮತ್ತು ದೇವರಾಯನದುರ್ಗದಲ್ಲಿ ವಿಪರೀತ ಜನಜಂಗುಳಿ ಇತ್ತಂತೆ. ಮಧ್ಯಾಹ್ನಾನಂತರ ಇಲ್ಲಿಂದ ಬೆಂಗಳೂರಿಗೆ ತೆರಳಿದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 01-06-2025