ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Monday, 9 June 2025

Sriranjini Visit /2025 / ಶ್ರೀರಂಜಿನಿ ಭೇಟಿ


 ತಾತ-ಮೊಮ್ಮಗಳ ಸಂತಸದ ಕ್ಷಣಗಳು.....
ನಮ್ಮ ಸಹೋದರಿ ಶ್ರೀಮತಿ ಆರ್.ವಿದ್ಯಾ ಮತ್ತು ಪ್ರಸಿದ್ಧ ಸಂಗೀತ ಸಂಯೋಜಕರೂ, ಸಂಗೀತ ನಿರ್ದೇಶಕರೂ ಆಗಿರುವ ಶ್ರೀ ಶಿವಸತ್ಯ ದಂಪತಿಯ ಸುಪುತ್ರಿ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಕು. ಶ್ರೀರಂಜಿನಿ ತನ್ನ ತಾತ (ನಮ್ಮ ತಂದೆ) ಸ್ವಾತಂತ್ರ್ಯ ಹೋರಾಟಗಾರರಾದ ವಿ.ಎಸ್.ರಾಮಚಂದ್ರನ್ (96) ಅವರ ಕುಶಲೋಪರಿ ವಿಚಾರಿಸಲು ಬೆಂಗಳೂರಿನಿಂದ ಆಗಮಿಸಿ, ಜೂನ್ 7 ಮತ್ತು 8 ರಂದು ಎರಡು ದಿನಗಳ ಕಾಲ ತನ್ನ ತಾತನೊಂದಿಗೆ ಸಂತಸದ ಕ್ಷಣಗಳನ್ನು ಕಳೆದಳು.
ಶನಿವಾರ ವಿಶ್ವನಾಥನ್ ಜೊತೆಯಲ್ಲಿ ಹೆಬ್ಬೂರಿನ ಶ್ರೀ ಕೋದಂಡಾಶ್ರಮ ಮಠಕ್ಕೆ ತೆರಳಿ ಶ್ರೀ ಕಾಮಾಕ್ಷಿ ದೇವಿಯ ದರ್ಶನ ಪಡೆದಳು. ಭಾನುವಾರ ಸುಪ್ರಸಿದ್ಧ ಯಾತ್ರಾ ಸ್ಥಳವಾದ ದೇವರಾಯನದುರ್ಗವನ್ನು ವೀಕ್ಷಿಸಿ ಸಂತೋಷಪಟ್ಟಳು.
ಭಾನುವಾರ ಮಧ್ಯಾಹ್ನ ಶ್ರೀರಂಜಿನಿ ಬೆಂಗಳೂರಿಗೆ ಹೊರಡುವಾಗ, ಪ್ರಸ್ತುತ TCS ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ಈ ಮೊಮ್ಮೊಗಳಿಗೆ ಶಾಲು ಹೊದಿಸುವ ಮೂಲಕ ತಾತ ರಾಮಚಂದ್ರನ್ ರವರು ಶುಭಾಶೀರ್ವಾದ ಮಾಡಿದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 08-06-2025 #rsiyertumakuru








Sunday, 1 June 2025

R Gayathri Visit - 01-06-2025

ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರ ಯೋಗಕ್ಷೇಮ ವಿಚಾರಿಸಲು ನಮ್ಮ ಸಹೋದರಿ ಶ್ರೀಮತಿ ಆರ್. ಗಾಯತ್ರಿ ಸತ್ಯನಾರಾಯಣ್ ತನ್ನ ಮಕ್ಕಳಾದ ಹೆಚ್.ಎಸ್. ಪವನ್ ಮತ್ತು ನಮಿತಾ ಅವರ ಜೊತೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದು, ಈ ಭೇಟಿ ನಮ್ಮೆಲ್ಲರಿಗೂ ಸಂತಸ ಮೂಡಿಸಿತು.
ನಿನ್ನೆ (ದಿ. 31-05-2025) ಸಂಜೆ ಅಗಮಿಸಿದ ಅವರು, ಸಂಜೆಯೇ ತುಮಕೂರಿನ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಇಂದು (ದಿ.01-06-2025) ಬೆಳಗ್ಗೆ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಾಲಯ, ಜಯನಗರದ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಬಳಿಕ ಸಮೀಪದ ನಾಮದ ಚಿಲುಮೆ, ದೇವರಾಯನದುರ್ಗ ಹಾಗೂ ದುರ್ಗದ ಹಳ್ಳಿಯ ಶ್ರೀ ವಿದ್ಯಾಶಂಕರ ದೇವಾಲಯ ವೀಕ್ಷಿಸಿ ಸಂತೋಷಪಟ್ಟರು. ಇಂದು ನಾಮದ ಚಿಲುಮೆ ಮತ್ತು ದೇವರಾಯನದುರ್ಗದಲ್ಲಿ ವಿಪರೀತ ಜನಜಂಗುಳಿ ಇತ್ತಂತೆ. ಮಧ್ಯಾಹ್ನಾನಂತರ ಇಲ್ಲಿಂದ ಬೆಂಗಳೂರಿಗೆ ತೆರಳಿದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 01-06-2025

 







Sunday, 4 May 2025

Shankara Jayanthi- 02-05-2025- ಶ್ರೀ ಶಂಕರ ಜಯಂತಿ ಆಚರಣೆ

 


ಶ್ರೀ ಶಂಕರ ಜಯಂತಿ ಆಚರಣೆ-2025

ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ಅವರೊಂದಿಗೆ ನಾವು (ನಾನು ಮತ್ತು ವಿಶ್ವನಾಥನ್ ) ಇಂದು (ದಿ.02-05-2025, ಶುಕ್ರವಾರ) ಜಗದ್ಗುರು ಶ್ರೀ ಆದಿಶಂಕರಾಚಾರ್ಯರ ಜಯಂತಿಯನ್ನು ನಮ್ಮ ಮನೆಯಲ್ಲೇ ಶ್ರದ್ಧೆ-ಭಕ್ತಿಯಿಂದ ಆಚರಿಸಿದೆವು.

ತುಮಕೂರಿನಲ್ಲಿ 1968 ರಲ್ಲೇ ಶ್ರೀ ಶಂಕರ ಜಯಂತಿ ಸಭಾವನ್ನು ಸ್ಥಾಪಿಸಿ, ಆ ಮೂಲಕ ಚಿಕ್ಕಪೇಟೆಯ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯದಲ್ಲಿ ಮೂರೂವರೆ ದಶಕಕ್ಕೂ ಅಧಿಕ ಕಾಲ ಶ್ರೀ ಶಂಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿದ್ದ ಹೆಗ್ಗಳಿಕೆ ನಮ್ಮ ತಂದೆಯವರದ್ದಾಗಿದೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 02-05-2025 #rsiyertumakuru #follower #highlight
Sri Shankara Jayanti Celebration-2025
--------------------------------------
With our father Sri V.S. Ramachandran (96), the founder of Sri Shankara Jayanti Sabha and a freedom fighter, we (I and Viswanathan) celebrated the Jayanti of Jagadguru Sri Adi Shankaracharya with devotion today (02-05-2025, Friday) at our home.
Our father has the distinction of having established the Sri Shankara Jayanti Sabha in Tumkur in 1968, and through this, Sri Shankara Jayanti has been celebrated meaningfully at the Sri Laxmikantha Swamy Temple in Chikkapet for more than three and a half decades.
-R.S.Iyer, Tumkur, Date. 02-05-2025









Tuesday, 1 April 2025

VSR Felicitated by MLA Jyothi Ganesh/ 2025/ ಶಾಸಕರಿಂದ ವಿ.ಎಸ್.ಆರ್. ಅವರಿಗೆ ಗೌರವಾರ್ಪಣೆ

 


ಶಾಸಕರಿಂದ ವಿ.ಎಸ್.ಆರ್. ಅವರಿಗೆ ಗೌರವಾರ್ಪಣೆ

---------------------------------

"ಎಲ್ಲಿದ್ದೀರಿ? ನಿಮ್ಮ ಮನೆಗೆ ಈಗ ಬರುತ್ತಿದ್ದೇನೆ" - ಶಾಸಕ ಮಿತ್ರರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಇಂದು (ದಿ. 31-03-2025) ಸಂಜೆ 6 ಗಂಟೆಯಲ್ಲಿ ಕರೆ ಮಾಡಿದರು. ಮುಂದಿನ ಹತ್ತು ನಿಮಿಷಗಳಲ್ಲಿ ನಮ್ಮ ಮನೆಯಲ್ಲಿದ್ದರು. "ಯುಗಾದಿ" ಹಬ್ಬದ ಹಿನ್ನೆಲೆಯಲ್ಲಿ ನಮ್ಮ ತಂದೆ ಸ್ವಾತಂತ್ರ್ಯ ಯೋಧರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ಅವರಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಗೌರವಿಸಿದರು. ಕುಶಲೋಪರಿ ವಿಚಾರಿಸಿ, ಆಶೀರ್ವಾದ ಪಡೆದುಕೊಂಡರು.

ಬಳಿಕ ನಮ್ಮೊಡನೆ (ಅಂದರೆ ನನ್ನ ಮತ್ತು ವಿಶ್ವನಾಥನ್ ಜೊತೆ) ಚರ್ಚಿಸುತ್ತ ಕುಳಿತರು. ಮೂಲತಃ ಕೇರಳದ ಪಾಲಕ್ಕಾಡ್ ನವರಾದ ನಮ್ಮ ತಾತ ಶ್ರೀ ವಿ.ಎಸ್.ರಾಮ ಅಯ್ಯರ್ ಅವರು ಆ ಕಾಲದ ಸೈನ್ಯದಲ್ಲಿ ಸೇರಿ ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಏಡನ್ ವರೆಗೆ ಹೋಗಿದ್ದದ್ದು, ಆ ಬಳಿಕ ಅವರು ಉತ್ತರ ಭಾರತದ ರೈಲ್ವೆಯಲ್ಲಿದ್ದದ್ದು, ನಂತರ ಮೈಸೂರು ರೈಲ್ವೆಗೆ ಬಂದು, ಆಗಿನ ಮೈಸೂರು ಪ್ರಾಂತ್ಯದ ಹಲವೆಡೆ ರೈಲ್ವೇ ಸ್ಟೇಷನ್ ಮಾಸ್ಟರ್ ಆಗಿದ್ದು ಕೊನೆಗೆ ತುಮಕೂರು ಜಿಲ್ಲೆಯ ಸಂಪಿಗೆಯಲ್ಲಿ ನಿವೃತ್ತರಾದುದು, ಬಳಿಕ ತುಮಕೂರಿನಲ್ಲಿ ನೆಲೆನಿಂತ ವಿಷಯದಿಂದ ಹಿಡಿದು ಅನೇಕ ವಿಷಯಗಳು ಮಾತುಕತೆಯಲ್ಲಿ ಬಂದುಹೋದವು. ಮಾತನಾಡುತ್ತಾ ಸರಿಸುಮಾರು ಎರಡು ತಾಸು ಸರಿದದ್ದು ಗೊತ್ತಾದದ್ದೇ ಅವರು ರಾತ್ರಿ 8-15 ರಲ್ಲಿ ಹೊರಟಾಗ! ಈ ಅನಿರೀಕ್ಷಿತ ಭೇಟಿ ಹಾಗೂ ಸುದೀರ್ಘ ಮಾತುಕತೆ ಉಭಯತ್ರರಲ್ಲೂ ಸಂತೋಷವನ್ನುಂಟುಮಾಡಿತು. ಕೊನೆಯಲ್ಲಿ ಅವರಿಗೆ ಶುಭ ಕೋರುತ್ತಾ, ಆತ್ಮೀಯವಾಗಿ ಬೀಳ್ಕೊಟ್ಟೆವು.
ಶ್ರೀ ಜ್ಯೋತಿಗಣೇಶ್ ರವರು ಸತತ ಎರಡನೇ ಬಾರಿ "ನಮ್ಮ ತುಮಕೂರು" ನಗರದ ಶಾಸಕರಾಗಿದ್ದಾರೆ. ಬಿ.ಇ. ಮತ್ತು ಎಂ.ಬಿ.ಎ. ಪದವೀಧರರು. ನಮಗೆ ಸುಮಾರು 25 ವರ್ಷಗಳಷ್ಟು ದೀರ್ಘಕಾಲದ ಸನ್ಮಿತ್ರರು. ಸರಳತೆ, ಸಜ್ಜನಿಕೆಗಳಿಂದ ಕೂಡಿದವರು. ಶಾಸಕರಾಗುವ ಮೊದಲು ಹಾಗೂ ಶಾಸಕರಾದ ಬಳಿಕ ನಾವು ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿಯೂ ಪಾಲ್ಗೊಂಡಿದ್ದವರು. ಶ್ರೀಯುತರ ಇಂದಿನ ಸೌಜನ್ಯಯುತ ಭೇಟಿಗೆ ಕೃತಜ್ಞತೆಗಳು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 31-03-2025, #rsiyertumakuru



-----Video---