ನಮ್ಮ ಹತ್ತಿರದ ಬಂಧುಗಳೂ, ತುಮಕೂರಿನ ಶ್ರೀ ಶೃಂಗೇರಿ ಶಂಕರ ಮಠದ ಉಪಾಧ್ಯಕ್ಷರೂ, ನಂದಿನಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ, ಬಿಜೆಪಿ ಮುಖಂಡರೂ ಆದ ಶ್ರೀ ಹೆಚ್.ಕೆ. ರಮೇಶ್ ಮತ್ತು ಶ್ರೀಮತಿ ಶುಭ ದಂಪತಿ ಇಂದು (ದಿ. 06-11-2025) ರಾತ್ರಿ ನಮ್ಮ ಮನೆಗೆ ಆಗಮಿಸಿ ತಮ್ಮ ಪುತ್ರನ ವಿವಾಹದ ಆಮಂತ್ರಣ ಪತ್ರಿಕೆಯನ್ನು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (96) ಅವರಿಗೆ ನೀಡಿ ಶುಭಾಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ನಾನು ಮತ್ತು ಆರ್. ವಿಶ್ವನಾಥನ್ ಇದ್ದೆವು.
ಶ್ರೀ ಹೆಚ್.ಕೆ.ರಮೇಶ್ ಅವರ ಜ್ಯೇಷ್ಠ ಪುತ್ರ ಚಿ||ರಾ|| ರಾಹುಲ್ ಆರ್.ಭಟ್ ಇಂಗ್ಲೆಂಡ್ ನಲ್ಲಿ ವಿದ್ಯಾಭ್ಯಾಸ ಮಾಡಿ ಸದ್ಯ ಅಲ್ಲೇ ವೃತ್ತಿಯಲ್ಲಿರುವ ಪ್ರತಿಭಾವಂತ. ಉತ್ತರಕನ್ನಡ ಜಿಲ್ಲೆ ಅಂಕೋಲದ ಶ್ರೀ ಜಿ.ವಿ. ಹೆಗಡೆ ಮತ್ತು ಶ್ರೀಮತಿ ಭಾಗೀರಥಿ ದಂಪತಿಯ ಸುಪುತ್ರಿ ಚಿ||ಸೌ|| ಸೌಜನ್ಯ ಹೆಗಡೆ ಅವರೊಡನೆ ದಿ. 01-12-2025 ರಂದು ಅಂಕೋಲದಲ್ಲಿ ವಿವಾಹ ಮಹೋತ್ಸವ ನೆರವೇರಲಿದೆ.
ರಮೇಶ್ ರವರು ಅತ್ಯಂತ ಗೌರವಾದರಗಳಿಂದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ್ದು ಹಿತಾನುಭವವನ್ನುಂಟುಮಾಡಿತು. ಅವರ ಪುತ್ರನ ವಿವಾಹ ಮಹೋತ್ಸವ ಮಂಗಳಕರವಾಗಿ ನೆರವೇರಲೆಂದು ನಾವೆಲ್ಲ ಹೃದಯತುಂಬಿ ಹಾರೈಸಿದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 06-11-2025 #rsiyertumakuru




No comments:
Post a Comment