ನಮ್ಮ ತಂದೆ ಸ್ವಾತಂತ್ರ್ಯಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರನ್ನು ನೋಡಿ ಕುಶಲೋಪರಿ ವಿಚಾರಿಸಲು ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್ ಮತ್ತು ಆಕೆಯ ಪುತ್ರ ಹೆಚ್.ಎಸ್.ಪವನ್ ಅವರು ಬೆಂಗಳೂರಿನಿಂದ ಇಂದು (ದಿ. 08-10-2025) ತುಮಕೂರಿನ ನಮ್ಮ ಮನೆಗೆ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಮಧ್ಯಾಹ್ನ ನಮ್ಮ ತಂದೆಯವರನ್ನು ಅವರ ಕಾರಿನಲ್ಲಿ ಕೂರಿಸಿಕೊಂಡು ಗೂಳೂರಿನ ಸುಪ್ರಸಿದ್ಧ ಶ್ರೀ ಗಣಪತಿ ದೇವಾಯಲಕ್ಕೆ ತೆರಳಿದೆವು. ಅವರು ನಡೆಯಲಾಗದಿರುವುದರಿಂದ ಕಾರಿನಲ್ಲಿ ಕುಳಿತೇ ವೀಕ್ಷಿಸಿದರು. ನಾನು ಜೊತೆಯಲ್ಲಿ ಹೋಗಿದ್ದೆ. ವಿಶ್ವನಾಥನ್ ಮನೆಯಲ್ಲೇ ಇದ್ದ.
ಜಯನಗರದಿಂದ ಗಾರೆನರಸಯ್ಯನ ಕಟ್ಟೆ ಮೂಲಕ ಗೂಳೂರಿಗೆ ಹೋಗಿಬರುವಾಗ ರಿಂಗ್ ರಸ್ತೆ, ಮರಳೂರು ವೃತ್ತ, ಮರಳೂರು ಕೆರೆ, ಗೂಳೂರು, ಗಣಪತಿ ದೇವಾಲಯ, ಕುಣಿಗಲ್ ರಸ್ತೆ, ಲಕ್ಕಪ್ಪ ವೃತ್ತ, ಟೌನ್ ಹಾಲ್ ವೃತ್ತ, ಅಶೋಕ ರಸ್ತೆ, ಸ್ವಾತಂತ್ರ್ಯ ಚೌಕ, ಕೋಟೆ ಆಂಜನೇಯ ವೃತ್ತ, ಅಮಾನಿ ಕೆರೆ ರಸ್ತೆ, ಕೋತಿತೋಪು, ಎಸ್.ಎಸ್.ವೃತ್ತ, ಬಿ.ಹೆಚ್.ರಸ್ತೆ, ಎಸ್.ಐ.ಟಿ. ಕಾಲೇಜು, ಗಂಗೋತ್ರಿ ರಸ್ತೆ, ಎಸ್.ಐ.ಟಿ. ಮುಖ್ಯರಸ್ತೆ, ಶೆಟ್ಟಿಹಳ್ಳಿ ಮುಖ್ಯರಸ್ತೆ -ಹೀಗೊಂದು "ತುಮಕೂರು ನಗರ ಸಂಚಾರ"ವನ್ನು ನಮ್ಮ ತಂದೆಯವರು ಕಾರಿನಲ್ಲೇ ಮಾಡಿ, ಊರನ್ನು ನೋಡಿ ಬೆರಗಿನೊಂದಿಗೆ ಸಂತೋಷಪಟ್ಟರು. ಗಾಯತ್ರಿ ಮತ್ತು ಪವನ್ ಅವರು ಸಂಜೆ ಬೆಂಗಳೂರಿಗೆ ನಿರ್ಗಮಿಸಿದರು. ಪರಸ್ಪರ ಭೇಟಿ ಉಭಯತ್ರರಲ್ಲಿ ಅಪಾರ ಸಂತೋಷವನ್ನುಂಟುಮಾಡಿತು.








No comments:
Post a Comment