* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday 28 October 2016

R S Iyer with H.H. Swarnavalli Sri.... ಸೋಂದಾ ಸ್ವರ್ಣವಲ್ಲಿ ಶ್ರೀಗಳೊಂದಿಗೆ

ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಪೀಠಾಧಿಕಾರಿಗಳಾದ ಪ.ಪೂ.ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ದರ್ಶನ ಹಾಗೂ ಅವರ ಆಶೀರ್ವಾದ ಪಡೆಯುವ ಸುಯೋಗ ಇಂದು (28-10-2016, ಶುಕ್ರವಾರ) ಸಂಜೆ ತುಮಕೂರಿನ ಕ್ಯಾತಸಂದ್ರದ ಸುಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿ ನಮಗೆ ( ನಾನು, ವಿಶ್ವನಾಥನ್ Vishwanathan R. Tumkur ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್) ಲಭಿಸಿತು. Today evening we got the blessings of H.H. Sri Gangadharendra Saraswathi Swamiji, Peetadhipathi of Sonda Swarnavalli Mutt, Sirsi at Sri Chandramoulishwara Temple, Kyathasandra, Tumakuru.














Wednesday 26 October 2016

R.S.Iyer with Prof. Baraguru Ramachandrappa

ಶ್ರೀ ಬರಗೂರು ರಾಮಚಂದ್ರಪ್ಪ ಅವರೊಂದಿಗೆ.....
-------------------------------------------------------
"ಎಲ್ಲಿ, ನೀವು ಕಾಣಿಸುತ್ತಿಲ್ಲವಲ್ಲ" ಎಂದು ಅವರು ಹೇಳಿದಾಗ ನಾನು ಸಹಜವಾಗಿ "ಇದ್ದೇನಲ್ಲ" ಎಂದೆ. ಅದಕ್ಕವರು "ಪತ್ರಿಕೆಯಲ್ಲಿ ಕಾಣಿಸುತ್ತಿಲ್ಲವಲ್ಲ" ಎಂದಾಗ ಮತ್ತೆ ನಾನು "ಪತ್ರಿಕೆಯಲ್ಲೇ ಇದ್ದೇನಲ್ಲ..." ಎನ್ನುವಷ್ಟರಲ್ಲೇ ಅವರು ಮಧ್ಯೆಪ್ರವೇಶಿಸಿ "ವಾಚಕರ ವಾಣಿಯಲ್ಲಿ ಕಾಣಿಸುತ್ತಿಲ್ಲವಲ್ಲ" ಎಂದಾಗಲೇ ನನಗೆ ಅವರು ಏನು ಹೇಳಲು ಹೊರಟಿದ್ದಾರೆಂಬುದು ಅರ್ಥವಾದದ್ದು!! -- ಇದು ಇಂದು (26-10-2016, ಬುಧವಾರ) ಬೆಳಗ್ಗೆ ತುಮಕೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಖ್ಯಾತ ಸಾಹಿತಿಗಳಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರನ್ನು ನಾನು ಭೇಟಿ ಆದ ತಕ್ಷಣ ನಡೆದ ಸಂಭಾಷಣೆ. ದಶಕದ ಹಿಂದೆ ತುಮಕೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ಅವರು ಬಂದ ಸಂದರ್ಭದಿಂದಲೂ ಅವರು ಪರಿಚಿತರು. "ಪ್ರಜಾವಾಣಿ"ಯ ವಾಚಕರ ವಾಣಿಯಲ್ಲಿ ನಾನು ಬರೆಯುತ್ತಿದ್ದ ರಾಜಕೀಯ/ಸಾಂಸ್ಕೃತಿಕ ಸಂಗತಿ ಕುರಿತ ಪತ್ರವನ್ನು ಗಮನಿಸುತ್ತಿದ್ದ ಅವರು, ತುಮಕೂರಿನಲ್ಲಿ ಭೇಟಿ ಆದಾಗಲೆಲ್ಲ "ಪತ್ರ ಓದಿದೆ" ಎನ್ನುತ್ತಿದ್ದರು. ಕಾರಣಾಂತರಗಳಿಂದ ಇತ್ತೀಚೆಗೆ ನಾನು ಬರೆಯುತ್ತಿಲ್ಲ. ಅದನ್ನೂ ಅವರು ಗಮನಿಸಿದ್ದು ಇಂದು ಹೀಗೆ ಪ್ರತಿಕ್ರಿಯಿಸಿದರು. ಅವರ ವಿಶ್ವಾಸ ಸಂತೋಷವನ್ನುಂಟುಮಾಡಿತು. ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಅವರನ್ನು ಅಭಿನಂದಿಸಿದಾಗ ಮನಸಾರೆ ಮುಗುಳ್ನಕ್ಕರು. (ಆ ಕ್ಷಣಗಳನ್ನು ಸೆರೆಹಿಡಿದ ಛಾಯಾಗ್ರಾಹಕ ಶ್ರೀ ತ್ರಿಯಂಬಕ ಅವರಿಗೆ ಕೃತಜ್ಞತೆಗಳು)






Monday 24 October 2016

R S Iyer with Dr.Khader

ಡಾ.ಖಾದರ್ ಅವರೊಂದಿಗೆ... ಇಂದು ( 24-10-2016, ಸೋಮವಾರ) ಸಂಜೆ ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಮೈಸೂರಿನ ಡಾ. ಖಾದರ್ ಅವರ ಉಪನ್ಯಾಸ ಕೇಳುವ ಸುಯೋಗ ನಮಗೆ ಲಭಿಸಿತು. ವಿಜ್ಞಾನಿಯಾಗಿ, ಹೋಮಿಯೋಪತಿ ವೈದ್ಯರಾಗಿ ಖ್ಯಾತಿ ಪಡೆದಿರುವ ಜೊತೆಗೆ ಇದೀಗ ಸಿರಿಧಾನ್ಯಗಳ ಸಂಶೋಧಕರಾಗಿ ಅದರ ಪ್ರಯೋಜನದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತ ಅಪಾರ ಜನಮನ್ನಣೆಗೆ, ಜನಾಕರ್ಷಣೆಗೆ ಪಾತ್ರರಾಗಿದ್ದಾರೆ. ಅವರೊಡನೆ ನಾನು, ಆರ್.ವಿಶ್ವನಾಥನ್Vishwanathan R. Tumkur ಕೆಲಹೊತ್ತು ಕಳೆದಾಗ...Today evening we met Dr.Khader at Sira town. Dr. Khader from Mysore is a renowned Scientist, Homeopathic Doctor, a unique farmer. He has done extensive research on Millets. He speaks wonderfully about the advantages of Millets and how if used in our daily diet will improve our Health. He is extensively working on promoting Millets (SIRI DHANYA) in our daily diet. (Photo Courtesy: Renuka)










Tuesday 20 September 2016

R S Iyer with Padmashree Girish Kasaravalli

"ಪದ್ಮಶ್ರೀ" ಪುರಸ್ಕೃತ ಅಂತರ ರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕರಾದ ಶ್ರೀ ಗಿರೀಶ್ ಕಾಸರವಳ್ಳಿ ಅವರು ಇಂದು (20-09-2016, ಮಂಗಳವಾರ) ತುಮಕೂರು ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದ್ದಾಗ ಅವರೊಂದಿಗೆ ಚರ್ಚಿಸುವ ಸುಸಂದರ್ಭ ಲಭಿಸಿತು.
 wirh Padmashree awardee, International famous film maker Sri Girish Kasaravalli at Tumakuru University today (20-09-2016).











R S Iyer with Sri Gururaja Karajagi

ಅಂತರರಾಷ್ಟ್ರೀಯ ಖ್ಯಾತಿಯ ಶಿಕ್ಷಣತಜ್ಞರಾದ ಡಾ.ಗುರುರಾಜ ಕರಜಗಿ ಅವರು ಇಂದು (19-09-2016, ಸೋಮವಾರ) ತುಮಕೂರು ತಾಲ್ಲೂಕು ಹೊನಸಿಗೆರೆ ಸರ್ಕಾರಿ ಶಾಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ಅವರೊಂದಿಗೆ ಕೆಲವು ಕ್ಷಣ ಕಳೆಯುವ ಸುಸಂದರ್ಭ ಒದಗಿಬಂತು. ಅವರ ಸಜ್ಜನಿಕೆ, ಸೌಜನ್ಯ ಹಾಗೂ ವಿನಮ್ರತೆ ಮನಸೂರೆಗೊಂಡಿತು.
Today (19-09-2016) I met international famous educationist Dr.Gururaja Karajagi in Govt school function @ Honasigere Village, Tumakuru Taluk.






Saturday 17 September 2016

Alasettykere Anthima Yathre 05-06-2002 ಅಳಸೆಟ್ಟಿಕೆರೆ ಅಂತಿಮಯಾತ್ರೆ-

ಅಗಲಿದ ಕೆರೆಗೆ ಹೀಗೊಂದು ಅಂತಿಮ ನಮನ....
**************************************
ಇದು 2002 ರ ಸಂಗ್ರಹ ಚಿತ್ರ. ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿ ಈಗಿರುವ ಹೇಮಾವತಿ ಕಛೇರಿ ಒಳಗೊಂಡು ಹಿಂಬದಿಯ ಪ್ರದೇಶ "ಅಳಸೆಟ್ಟಿಕೆರೆ" ಆಗಿತ್ತು. ಆ ಕೆರೆ ಅಂಗಳ ವಿವಿಧೋದ್ದೇಶಗಳಿಗೆ ವಿಂಗಡಣೆಗೊಂಡಿತು. ಆ ಮೂಲಕ ಆ ಕೆರೆ ಇನ್ನಿಲ್ಲವಾಯಿತು. ಆ ವರ್ಷದ ವಿಶ್ವಪರಿಸರ ದಿನಾಚರಣೆಯನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಮುಖ್ಯಸ್ಥ ಶ್ರೀ ಟಿ.ವಿ.ಎನ್.ಮೂರ್ತಿ ಅವರು ಈ ಕೆರೆಗೆ ಅರ್ಪಿಸಿ, ವಿಶಿಷ್ಟ ರೀತಿಯ ಪ್ರತಿಭಟನಾ ಕಾರ್ಯಕ್ರಮ ರೂಪಿಸಿದ್ದರು. ಅಂದು (05-06-2002) ತುಮಕೂರು ನಗರದ ಟೌನ್ ಹಾಲ್ ವೃತ್ತದಿಂದ "ಅಳಸೆಟ್ಟಿಕೆರೆಯ ಶವಯಾತ್ರೆ" ಹಮ್ಮಿಕೊಳ್ಳಲಾಗಿತ್ತು. ಅಲ್ಲಿಂದ ಹೊರಟು ಕುಣಿಗಲ್ ರಸ್ತೆಯ ಹೇಮಾವತಿ ಕಛೇರಿ ಪಕ್ಕ ಅದನ್ನು ಹೂತು, ಅಲ್ಲೊಂದು ಕಲ್ಲು ನೆಡಲಾಯಿತು. ಆ ಮೂಲಕ ಅಳಸೆಟ್ಟಿಕೆರೆಗೆ ಅಂತಿಮ ನಮನ ಸಲ್ಲಿಸಲಾಯಿತು. ಆ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅಂದು ಸರ್ವಶ್ರೀ ಟಿ.ವಿ.ಎನ್.ಮೂರ್ತಿ, ಬಿ.ವಿ. ಗುಂಡಪ್ಪ, ಸಿ.ಯತಿರಾಜು, ಚಂದ್ರಶೇಖರ ಉಪಾಧ್ಯಾಯ, ನವೀನ್, ನರಸಿಂಹರಾಜು, ಮುರಳಿಕೃಷ್ಣ, ಅಮೀನ್ ಅಹಮದ್, ಸುರೇಶ್ ಅಗ್ರಹಾರ ಮತ್ತಿತರ ಪರಿಸರಾಸಕ್ತರು ಭಾಗಿಯಾಗಿದ್ದರು. ನಾನೂ ( R. S. Iyer ) ಸಹಾ ಪಾಲ್ಗೊಂಡಿದ್ದೆ.

 

 – ಆರ್.ಎಸ್.ಅಯ್ಯರ್, ತುಮಕೂರು 











Thursday 25 August 2016

wirh Former Lokayuktha Sri Santhosh Hegde ಮಾಜಿ ಲೋಕಾಯುಕ್ತರಾದ ಶ್ರೀ ಸಂತೋಷ್ ಹೆಗ್ಡೆ ಅವರೊಂದಿಗೆ

ಸುಪ್ರಿಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರೂ, ಕರ್ನಾಟಕದ ಮಾಜಿ ಲೋಕಾಯುಕ್ತರೂ ಆದ ನ್ಯಾ|| ಸಂತೋಷ್ ಹೆಗ್ಡೆ ಅವರು ದಿನಾಂಕ 24-08-2016, ಬುಧವಾರ ತುಮಕೂರು ನಗರದ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಉಪನ್ಯಾಸ ನೀಡಲು ಆಗಮಿಸಿದ್ದಾಗ ಅವರೊಂದಿಗೆ ...



R.S.Iyer with Sri Santhosh Hegde, Former Lokayuktha of karnataka


Tuesday 23 August 2016

With Sri M ( Mumtaz Ali Khan ) @ Tumakuru - 2015 - R.S.Iyer and R.Vishwanathan - ಶ್ರೀ ಎಂ (ಮುಮ್ತಾಜ್ ಅಲಿ ಖಾನ್ ) ಅವರೊಂದಿಗೆ

Walk of Hope – A 15-month long padayatra from Kanyakumari to Kashmir, led by Sri "M", spanning 7500 kms across 11 states of India in 2015-16 for "peace, harmony and tolerance". when he came to Tumakuru on 12-04-2015 we (R.S.Iyer, R.Vishwanathan and Sri G.K.Srinivas) met him at Nandihalli...    

(Sri M (born Mumtaz Ali Khan) is a yogi and a disciple of Sri Maheshwarnath Babaji, who was a disciple of Mahavatar Babaji . Sri M, also known as Sri Madhukarnath ji, is an initiate of the Nath sub-tradition of Hinduism. He lives in MadanapalleAndhra Pradesh, India. Sri M received the Padma Bhushan, India's third-highest civilian award, in 2020.)



Sri M and R.S.Iyer, Tumakuru


ಅಖಿಲ ಭಾರತ ಪಾದಯಾತ್ರೆ ಕೈಗೊಂಡಿದ್ದ ಶ್ರೀ "ಎಂ" ಅವರು ದಿನಾಂಕ 12-04-2015 ರಂದು  ತುಮಕೂರು ಮೂಲಕ ಪ್ರಯಾಣಿಸುವಾಗ ಬೆಂಗಳೂರು ರಸ್ತೆಯ  ನಂದಿಹಳ್ಳಿ ಬಳಿ ಅವರನ್ನು ಭೇಟಿಯಾಗಿ ಅವರೊಂದಿಗೆ ಸಂಕ್ಷಿಪ್ತ ಮಾತುಕತೆ ನಡೆಸಿದಾಗ....




               R.Vishwanathan and Sri M


  Sri M , R.S.Iyer and Sri G.K.Srinivas.  




ಪಾದಯಾತ್ರೆಯ ಒಂದು ನೋಟ... one view of Padayathra


ಪಾದಯಾತ್ರೆಯ ಒಂದು ನೋಟ... one view of Padayathra