* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 7 April 2019

ವಿದುರಾಶ್ವತ್ಥ "ಸ್ವಾತಂತ್ರ್ಯ ಸ್ಮಾರಕ".. "Freedom Memorial" at Vidurashwatha

ವಿದುರಾಶ್ವತ್ಥವು "ದಕ್ಷಿಣದ ಜಲಿಯನ್ ವಾಲಾಬಾಗ್ "ಸಹ ಹೌದು..
*****************************************************
ವಿದುರಾಶ್ವತ್ಥವು ಕೇವಲ ನಾಗವಿಗ್ರಹಗಳಿಗಷ್ಟೇ ಪ್ರಸಿದ್ಧವಲ್ಲ; ಜೊತೆ-ಜೊತೆಗೇ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಿಂದಲೂ ಗಮನ ಸೆಳೆದ ವೀರ ಭೂಮಿ. 1938 ರಲ್ಲಿ ಇಲ್ಲಿ ಸತ್ಯಾಗ್ರಹ ನಡೆಯುತ್ತಿದ್ದಾಗ, ಬ್ರಿಟಿಷ್ ಆಡಳಿತದ ಪೊಲೀಸರು ಏಕಾಏಕಿ ನುಗ್ಗಿ 96 ಸುತ್ತು ಗುಂಡು ಹಾರಿಸಿದ್ದರಿಂದ 32 ಕ್ಕೂ ಅಧಿಕ ಸತ್ಯಾಗ್ರಹಿಗಳು ಹುತಾತ್ಮರಾದರು ಎಂಬುದು ಇಲ್ಲಿನ ಉಜ್ವಲ ಇತಿಹಾಸ. ಹೀಗಾಗಿ ಇದು "ದಕ್ಷಿಣದ ಜಲಿಯನ್ ವಾಲಾಬಾಗ್" ಎಂದೂ ಗುರುತಿಸಲ್ಪಟ್ಟಿದೆ.
ನಮ್ಮ ತಂದೆ -ಸ್ವಾತಂತ್ರ್ಯ ಹೋರಾಟಗಾರರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ದಿ.06-04-2019, ಶನಿವಾರ ಸಂಜೆ ವಿದುರಾಶ್ವತ್ಥಕ್ಕೆ ತೆರಳಿದ್ದಾಗ, ದೇವಾಲಯದ ಪಕ್ಕದಲ್ಲೇ ಇರುವ "ಸ್ವಾತಂತ್ರ್ಯ ಸ್ಮಾರಕ"ಕ್ಕೂ ಭೇಟಿ ಕೊಟ್ಟೆವು. ಆದರೆ ಶನಿವಾರ "ಯುಗಾದಿ" ಹಬ್ಬದ ಕಾರಣಕ್ಕೆ ರಜೆ ಘೋಷಿಸಲಾಗಿತ್ತು. ಹೀಗಾಗಿ ಪ್ರವೇಶದ್ವಾರದ ಹೊರಗಿನಿಂದಲೇ ವೀಕ್ಷಿಸುತ್ತ, ಹುತಾತ್ಮರಿಗೆಲ್ಲ ಮನದಲ್ಲೇ ನಮಿಸಿದೆವು. ಸ್ಮಾರಕಕ್ಕೆ ಸಂಬಂಧಿಸಿದಂತೆ ಫಲಕದಲ್ಲಿದ್ದ ವಿವರಣೆಯನ್ನು ಓದುವಾಗ ಕ್ಷಣಕಾಲ ಭಾವುಕರಾದೆವು. ಇಂತಹ ಸ್ಥಳಗಳನ್ನು ಪ್ರತಿಯೊಬ್ಬರೂ ನೋಡಲೇಬೇಕು. (ಪ್ರವೇಶದ ವೇಳೆಯನ್ನು ಬೆಳಗ್ಗೆ 9-30 ರಿಂದ ಸಂಜೆ 4 ಗಂಟೆಯವರೆಗೆ ನಿಗದಿಪಡಿಸಲಾಗಿದೆ. ಮಕ್ಕಳಿಗೆ 5 ರೂ. ಹಾಗೂ ವಯಸ್ಕರಿಗೆ ತಲಾ 10 ರೂ. ಪ್ರವೇಶ ಶುಲ್ಕ ನಿಗದಿಯಾಗಿದೆ. ಪ್ರತಿ ಮಂಗಳವಾರ ರಜೆ ಇರುತ್ತದೆ.).







No comments:

Post a Comment