* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 28 April 2019

ಕಾಳಿಂಗಯ್ಯನ ಪಾಳ್ಯ ಮಠದಲ್ಲಿ... @ Kalingaiahna Palya Mutt 28-04-2019

ಶ್ರೀಗಳ ಆಶೀರ್ವಾದ ಪಡೆದಾಗ...
***************************
ತುಮಕೂರು ನಗರದಿಂದ ಹೊನ್ನುಡಿಕೆಗೆ ತೆರಳುವ ಮಾರ್ಗದಲ್ಲಿ ಕಾಳಿಂಗಯ್ಯನಪಾಳ್ಯ ಎಂಬ ಪುಟ್ಟ ಗ್ರಾಮವಿದೆ. ಇಲ್ಲಿನ ಪ್ರಶಾಂತ ಪರಿಸರದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆಯೇ ಇರುವ ವಿಶಾಲ ಪ್ರದೇಶದಲ್ಲಿ "ಶ್ರೀ ಬಾಲಕೃಷ್ಣಾನಂದ ಮಹಾ ಸಂಸ್ಥಾನಂ " (ತಲಕಾಡು) ಮಠವಿದೆ. ಇದರ ಪೀಠಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರ 43 ನೇ ವರ್ಧಂತಿ ಇಂದು (ದಿ. 28-04-2019, ಭಾನುವಾರ) ನೆರವೇರಿತು. ಇದರ ಅಂಗವಾಗಿ ಬೆಳಗಿನಿಂದ ಮಧ್ಯಾಹ್ನದವರೆಗೂ ಚಂಡಿಕಾ ಯಾಗ, ರುದ್ರ ಹೋಮ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಡೆದವು. ಸಂಜೆಯ ಪ್ರಶಾಂತ ಸಮಯದಲ್ಲಿ ನಾನು ಮತ್ತು ವಿಶ್ವನಾಥನ್ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ದರ್ಶನ- ಆಶೀರ್ವಾದ ಪಡೆದೆವು. ಶ್ರೀಗಳು ಶಾಲು ಹೊದಿಸಿ ಗೌರವಿಸಿದ್ದು ನಮ್ಮಪಾಲಿನ ಸುಯೋಗವೆನಿಸಿತು. ಆತ್ಮೀಯ ಮಿತ್ರರಾದ ಶ್ರೀ ಹರೀಶ್ ಅಗಡೀಕರ್ ಸಹ ನಮ್ಮೊಡನಿದ್ದಾರೆ..
.. we are @ Sri Balakrishnananda Maha Samsthanam (Talakadu), Honnudike Road, Tumkur Taluk,,, on the eve of 43 rd Vardhanthi Mahothsavam of Peetadhipathi H.H.Sri Govindananda Saraswathi Swamiji, Date 28-04-2019, Sunday.




No comments:

Post a Comment