* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday 6 April 2019

at Lepakshi ( R S Iyer Tumkur) 06-04-2019 ಲೇಪಾಕ್ಷಿಯಲ್ಲಿ...

ಸರ್ವರಿಗೂ ಯುಗಾದಿಯ ಶುಭಾಶಯಗಳು.
ಶ್ರೀ ವಿಕಾರಿ ಸಂವತ್ಸರದ ಮೊದಲ ದಿನವೂ ಆಗಿರುವ "ಯುಗಾದಿ" ಹಬ್ಬದ ಶುಭ ಸಂದರ್ಭದಲ್ಲಿ ಇಂದು (06-04-2019, ಶನಿವಾರ) ಬೆಳಗ್ಗೆ ಪಕ್ಕದ ಆಂಧ್ರಪ್ರದೇಶದ ಲೇಪಾಕ್ಷಿಯ ಐತಿಹಾಸಿಕ ಹಾಗೂ ಪುರಾತನ ಶ್ರೀ ವೀರಭದ್ರ ಸ್ವಾಮಿ ದೇವಾಲಯಕ್ಕೆ ನಮ್ಮ ತಂದೆ- ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಭೇಟಿ ನೀಡಿದ್ದೆವು. ವಿಪರೀತ ಬಿಸಿಲಿನ ಧಗೆಯ ನಡುವೆಯೂ ಈ ದೇವಾಲಯದ ಶಿಲ್ಪಕಲಾ ವೈಭವವು ಮನಕ್ಕೆ ಮುದ ನೀಡಿತು. ಆರೇಳು ವರ್ಷಗಳ ಬಳಿಕ ಇದು ನಮ್ಮ ಎರಡನೆಯ ಭೇಟಿ. ಬೃಹತ್ ನಂದಿ ವಿಗ್ರಹದ ಸಮೀಪ ಮತ್ತೊಂದು ಬದಿಯ ಬೆಟ್ಟದ ಬಂಡೆಯ ಮೇಲೆ ಬೃಹತ್ ಜಟಾಯು ಪಕ್ಷಿಯ ವಿಗ್ರಹವನ್ನು ರೂಪಿಸಿರುವುದನ್ನು ಬಿಟ್ಟರೆ, ಉಳಿದೆಲ್ಲ ಯಥಾಸ್ಥಿತಿಯಲ್ಲೇ ಇದೆ.






















No comments:

Post a Comment