* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 22 March 2021

ವೀಕೆಂಡ್ ವಿತ್ ರಮೇಶ್.. R S Iyer & R Vishwanathan with Sri Ramesh Aravind, 2021

"ವೀಕೆಂಡ್ ವಿತ್ ಶ್ರೀ ರಮೇಶ್ ಅರವಿಂದ್…"

*****************************************

ಕನ್ನಡ ಚಲನಚಿತ್ರ ರಂಗದ ಖ್ಯಾತ ಕಲಾವಿದರಾದ ಶ್ರೀ ರಮೇಶ್ ಅರವಿಂದ್ ಅವರ ಭೇಟಿ ಮತ್ತೊಮ್ಮೆ ಭಾನುವಾರ (ದಿನಾಂಕ 28-02-2021) ಸಂಜೆ ಬೆಂಗಳೂರಿನಸುಚಿತ್ರದಲ್ಲಿ ಆದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ.

ಕಾರಿನಿಂದಿಳಿದುಸುಚಿತ್ರಆವರಣ ಪ್ರವೇಶಿಸುತ್ತಿದ್ದ ಶ್ರೀ ರಮೇಶ್ ರವರು ಅಲ್ಲೇ ಮೆಟ್ಟಿಲುಗಳ ಮೇಲೆ ನಿಂತಿದ್ದ ನಮ್ಮತ್ತ ನೋಟ ಬೀರಿ ಹಸನ್ಮುಖರಾದರು. ವಿಶ್ವನಾಥನ್ ಕಡೆಗೆ ಕೈಬೀಸುತ್ತಹೇಗಿದ್ದೀರಿ?” ಎಂದರು. ಸರಿಯಾಗಿ ಎರಡು ವರ್ಷಗಳ ಹಿಂದೆ (ದಿ. 23-12-2018) ಅವರನ್ನು ನಾವು ಬೆಂಗಳೂರಿನಲ್ಲೇ ಭೇಟಿ ಮಾಡಿ, “ಡಿವಿಜಿ ನೆನಪುಕಾರ್ಯಕ್ರಮದ ಬಗ್ಗೆ ಹೇಳಿದ್ದೆವು. ಅದನ್ನು ಇನ್ನೂ ನೆನಪಿಟ್ಟುಕೊಂಡೇ ಅವರಿಂದು ಮಾತನಾಡಿಸಿದ್ದು ನಮಗೆ ಅಚ್ಚರಿಯೋ ಅಚ್ಚರಿ ; ಜೊತೆಗೆ ಸಂತಸ. ಒಡನೆಯೇ ನಾವು ಅವರತ್ತ ಹೆಜ್ಜೆ ಹಾಕಿದೆವು. ಕೆಲ ನಿಮಿಷ ನಿಂತು ನಮ್ಮೊಡನೆ ಉಲ್ಲಾಸದಿಂದ ಮಾತನಾಡಿದರು. ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದರು. ದೀಪ ಬೆಳಗುವ ಮುನ್ನ ತಮ್ಮ ಪಾದರಕ್ಷೆ (ಶೂ) ಕಳಚಿಟ್ಟು ದೀಪ ಬೆಳಗುವ ಮೂಲಕ ಸಂವೇದನಾಶೀಲತೆಯನ್ನು ಮೆರೆದರು. ಮಾತನಾಡುವಾಗ ಚಲನಚಿತ್ರ ಕ್ಷೇತ್ರದ ಹಳೆಯ ದಿಗ್ಗಜರನ್ನು ನೆನೆಯುತ್ತಅವರಿಂದಷ್ಟೇ ಇಂದು ನಾವುಎಂಬ ವಿನಯ ಪ್ರದರ್ಶಿಸಿದರು. ಬಳಿಕ ವೇದಿಕೆ ಮುಂಭಾಗ ಸಾರ್ವಜನಿಕರೊಡನೆ ಕುಳಿತು ಕೆಲಹೊತ್ತು ಕಾರ್ಯಕ್ರಮ ಆಸ್ವಾದಿಸಿ ನಿರ್ಗಮಿಸಿದರು. ಬಂದುಹೋಗುವಾಗ ಅಲ್ಲಿದ್ದ ಅನೇಕರು ಫೋಟೋ ತೆಗೆಸಿಕೊಳ್ಳಲು ಮುಂದಾದಾಗ ಖುಷಿಯಿಂದ ಅದಕ್ಕೆ ಅನುವು ಮಾಡಿಕೊಟ್ಟರು.

ಅವರ ಸರಳತೆ, ಸಹೃದಯತೆ, ಲವಲವಿಕೆ, ಉಲ್ಲಾಸಪೂರ್ಣ ವ್ಯಕ್ತಿತ್ವ ನಮ್ಮೆಲ್ಲರ ಮನಸೂರೆಗೊಂಡಿತು. ಹೀಗೆ ಭಾನುವಾರ ನಮ್ಮ ಪಾಲಿಗೆ ಅಕ್ಷರಶಃವೀಕೆಂಡ್ ವಿತ್ ರಮೇಶ್ಆಯಿತು. (ಇಲ್ಲಿರುವ ಚಿತ್ರಗಳಲ್ಲಿ ನಾನು, ವಿಶ್ವನಾಥನ್, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್, ಖ್ಯಾತ ಸಂಗೀತ ಸಂಯೋಜಕರಾದ ಶ್ರೀ ಶಿವಸತ್ಯ, ಶ್ರೀಮತಿ ವಿದ್ಯಾ ಶಿವಸತ್ಯ ಮತ್ತು ಶ್ರೀ ಹೆಚ್.ಎಸ್.ಪವನ್ ಇದ್ದೇವೆ.)

-ಆರ್.ಎಸ್.ಅಯ್ಯರ್, ತುಮಕೂರು





No comments:

Post a Comment