* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 25 January 2021

Republic Day 2021-Sunrise Kyathasandra VSR Sanmana- ಗಣರಾಜ್ಯೋತ್ಸವ, ಸನ್ಮಾನ

 ಕ್ಯಾತಸಂದ್ರದ ‘ಸನ್ ರೈಸ್’ ನಲ್ಲಿ ಗಣರಾಜ್ಯೋತ್ಸವ:

ಧ್ವಜಾರೋಹಣ, ಪುಷ್ಪಾರ್ಚನೆ, ಸನ್ಮಾನ
---------------------------------

ನಮ್ಮ ತುಮಕೂರು ನಗರದ ಕ್ಯಾತಸಂದ್ರದ “ಸನ್ ರೈಸ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ”ದಲ್ಲಿ ಇಂದು (26-01-2021, ಮಂಗಳವಾರ) ಬೆಳಗ್ಗೆ ಏರ್ಪಟ್ಟಿದ್ದ “ಗಣರಾಜ್ಯೋತ್ಸವ” ಸಮಾರಂಭದಲ್ಲಿ ಆಹ್ವಾನಿತರಾಗಿ ಪಾಲ್ಗೊಳ್ಳುವ ಸದವಕಾಶ ಇಂದು ನಮಗೆ ಲಭಿಸಿತು.

“ಸನ್ ರೈಸ್” ನ ಅಧ್ಯಕ್ಷರೂ, ನಮ್ಮ ದೀರ್ಘಕಾಲದ ಸನ್ಮಿತ್ರರೂ ಆದ ಶ್ರೀ ಸಿ.ಪಿ.ವಿಜಯ್ ಅವರು ನೀಡಿದ್ದ ಪ್ರೀತಿಯ ಆಹ್ವಾನದ ಮೇರೆಗೆ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಭಾಗವಹಿಸಿದ್ದೆವು.

ಶ್ರೀ ವಿ.ಎಸ್.ರಾಮಚಂದ್ರನ್ ರವರು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿದರು. ಎಲ್ಲರೂ ಸಾಮೂಹಿಕವಾಗಿ ರಾಷ್ಟ್ರಗೀತೆಯನ್ನು ಹಾಡಿದರು. ಬಳಿಕ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು. ನಂತರ ಸಾಂದರ್ಭಿಕವಾಗಿ ಶ್ರೀ ಸಿ.ಪಿ.ವಿಜಯ್ ರವರು ಮಾತನಾಡಿದರು. ಅನಿರೀಕ್ಷಿತವಾಗಿ ನಾನೂ ಸಹ ಒಂದೆರಡು ಮಾತುಗಳನ್ನಾಡಿದೆ. ಕೊನೆಯಲ್ಲಿ ನಮ್ಮ ತಂದೆಯವರನ್ನು “ಸನ್ ರೈಸ್” ಪರವಾಗಿ ಆಡಳಿತ ಮಂಡಲಿಯವರು ಶಾಲುಹೊದಿಸಿ, ಮೈಸೂರು ಪೇಟ ತೊಡಿಸಿ, ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿ ಸಂತಸ ಪಟ್ಟರು.

“ಸನ್ ರೈಸ್” ಅಧ್ಯಕ್ಷರಾದ ಶ್ರೀ ಸಿ.ಪಿ.ವಿಜಯ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ, ನಿರ್ದೇಶಕರುಗಳಾದ ಶ್ರೀ ಕೆ.ಸಿ.ಶಾಂತರಾಜು, ಶ್ರೀ ಪ್ರಮೋದ್ ಕುರ್ ಬೆಟ್, ಶ್ರೀ ಕೆ.ಎ.ವಿಜಯ್, ಶ್ರೀ ಮಹೇಶ್ ರೆಡ್ಡಿ, “ಸನ್ ರೈಸ್” ನ ಆಡಳಿತಾಧಿಕಾರಿಗಳಾದ ಶ್ರೀ ದಕ್ಷಿಣಾ ಮೂರ್ತಿ, ಶ್ರೀ ಆರ್.ಮಲ್ಲೇಶ್, ಶ್ರೀ ಕೃಷ್ಣಾಚಾರ್, ಮಾಜಿ ಗ್ರಾ.ಪಂ. ಸದಸ್ಯರಾದ ಶ್ರೀ ಬಿ.ಎಸ್.ವೆಂಕಟೇಶ್ ರವರು ಮೊದಲಾದ ಗಣ್ಯರುಗಳು, “ಸನ್ ರೈಸ್” ಸ್ನೇಹಿತರುಗಳು ಪಾಲ್ಗೊಂಡಿದ್ದರು.

ಈ ವರ್ಷದ ಅಂದರೆ 2021 ರ ಗಣರಾಜ್ಯೋತ್ಸವ ಆಚರಣೆಯ ಸಂಭ್ರಮ ಈ ರೀತಿ ನಮ್ಮದಾಯಿತು. ಶ್ರೀ ಸಿ.ಪಿ.ವಿಜಯ್ ರವರ ಹಾಗೂ "ಸನ್ ರೈಸ್" ಬಳಗದ ಪ್ರೀತಿ-ವಿಶ್ವಾಸಕ್ಕೆ ನಾವು ಕೃತಜ್ಞರಾಗಿದ್ದೇವೆ.
-ಆರ್.ಎಸ್.ಅಯ್ಯರ್, ತುಮಕೂರು https://twitter.com/rsitmk












No comments:

Post a Comment