ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95 ವರ್ಷ) ಅವರ ಕೋರಿಕೆ ಮೇರೆಗೆ ಇಂದು (ದಿ. 29-04-2024) ಮುಸ್ಸಂಜೆ ಮಿತ್ರರಾದ ಶ್ರೀ ಕೆ.ಎಂ.ಶಿವಕುಮಾರ್ (ಆಟೋ ಯಡಿಯೂರಪ್ಪ) ಅವರ ಆಟೋದಲ್ಲಿ "ನಗರ ಸಂಚಾರ" ಮಾಡಿಸಲಾಯಿತು. ಕಳೆದ ಎರಡೂವರೆ ವರ್ಷಗಳಿಂದ ಅವರಿಗೆ ಹೊರಗಡೆ ಹೋಗಲಾಗಿಲ್ಲ. ಅಲ್ಲದೆ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಗುಣಮುಖರಾಗಿದ್ದಾರೆ. ಹೀಗಾಗಿ ಮನೆಯೊಳಗೇ ಇದ್ದ ಅವರನ್ನು ಬದಲಾವಣೆಯಿರಲೆಂದು ಇಂದು ನಾನು ಮತ್ತು ವಿಶ್ವನಾಥನ್ ಜೊತೆಯಾಗಿ ಕರೆದೊಯ್ದೆವು.
Monday 29 April 2024
VSR in Auto- 29-04-2024 ಆಟೋದಲ್ಲಿ ವಿ.ಎಸ್.ಆರ್. ಪ್ರಯಾಣ
Sunday 28 April 2024
Shettyhalli Rathothsava 2024 ಶೆಟ್ಟಿಹಳ್ಳಿ ರಥೋತ್ಸವ-ತುಮಕೂರು
Saturday 20 April 2024
Pavagada Prakash Rao and Mallepuram G Venkatesh ಪಾವಗಡ ಪ್ರಕಾಶರಾವ್ ಮತ್ತು ಮಲ್ಲೇಪುರಂ ಜಿ.ವೆಂಕಟೇಶ್ ರವರೊಡನೆ
ನಾಡಿನ ಇಬ್ಬರು ಹಿರಿಯ ಹಾಗೂ ಖ್ಯಾತ ವಿದ್ವಾಂಸರನ್ನು "ನಮ್ಮ ತುಮಕೂರು" ನಗರದಲ್ಲೇ ಭೇಟಿ ಮಾಡುವ ಸುಯೋಗ ಇಂದು (ದಿ.20-04-2024) ನನಗೆ ಮತ್ತು ವಿಶ್ವನಾಥನ್ ಗೆ ಲಭ್ಯವಾಯಿತು. "ನಡೆದಾಡುವ ವಿಶ್ವಕೋಶ"ವೆಂದೇ ಖ್ಯಾತರಾಗಿರುವ ವಾಗ್ಮಿ ಡಾ. ಪಾವಗಡ ಪ್ರಕಾಶರಾವ್ ರವರು ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ, ಚಿಂತಕರೂ ಆದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ರವರನ್ನು ಮಾತನಾಡಿಸುವ ಸದವಕಾಶ ಒದಗಿತು. ನಾವು ನಮ್ಮ ಸರಸ್ ಸಂಸ್ಥೆ ವತಿಯಿಂದ ತುಮಕೂರಿನಲ್ಲಿ ನಡೆಸುವ "ಡಿವಿಜಿ ನೆನಪು" ಉಪನ್ಯಾಸ ಕಾರ್ಯಕ್ರಮ ಕುರಿತು ಈರ್ವರೂ ವಿದ್ವಾಂಸರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು.
Tuesday 16 April 2024
Roopa- Naganna Visit 2024 ಶ್ರೀಮತಿ ರೂಪಾ ಮತ್ತು ಶ್ರೀ ನಾಗಣ್ಣ ಅವರ ಭೇಟಿ
ಮೂಲತಃ ಕೊಳ್ಳೆಗಾಲದವರಾಗಿದ್ದು, ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಹಾಗೂ ನಮ್ಮ ಬಂಧುಗಳೂ ಆದ ಶ್ರೀ ನಾಗರಾಜು (ನಾಗಣ್ಣ) ಮತ್ತು ಶ್ರೀಮತಿ ರೂಪಾ ನಾಗರಾಜ್ ದಂಪತಿ ತಮ್ಮ ಪುತ್ರ ಶರತ್ ಮತ್ತು ಸೊಸೆ ಶ್ರೀಮತಿ ಸುಷ್ಮ ಅವರೊಡನೆ ಇಂದು (ದಿ.15-04-2024) ಮಧ್ಯಾಹ್ನ ನಮ್ಮ ಮನೆಗೆ ಆಗಮಿಸಿದ್ದರು.
V S R Voting -2024 Loksabha Election ವಿ.ಎಸ್.ಆರ್. ಮತದಾನ
ಸ್ವಾತಂತ್ರ್ಯಯೋಧ ವಿ.ಎಸ್.ರಾಮಚಂದ್ರನ್