* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday 20 April 2024

Pavagada Prakash Rao and Mallepuram G Venkatesh ಪಾವಗಡ ಪ್ರಕಾಶರಾವ್ ಮತ್ತು ಮಲ್ಲೇಪುರಂ ಜಿ.ವೆಂಕಟೇಶ್ ರವರೊಡನೆ

 ನಾಡಿನ ಇಬ್ಬರು ಹಿರಿಯ ಹಾಗೂ ಖ್ಯಾತ ವಿದ್ವಾಂಸರನ್ನು "ನಮ್ಮ ತುಮಕೂರು" ನಗರದಲ್ಲೇ ಭೇಟಿ ಮಾಡುವ ಸುಯೋಗ ಇಂದು (ದಿ.20-04-2024) ನನಗೆ ಮತ್ತು ವಿಶ್ವನಾಥನ್ ಗೆ ಲಭ್ಯವಾಯಿತು. "ನಡೆದಾಡುವ ವಿಶ್ವಕೋಶ"ವೆಂದೇ ಖ್ಯಾತರಾಗಿರುವ ವಾಗ್ಮಿ ಡಾ. ಪಾವಗಡ ಪ್ರಕಾಶರಾವ್ ರವರು ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ, ಚಿಂತಕರೂ ಆದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ರವರನ್ನು ಮಾತನಾಡಿಸುವ ಸದವಕಾಶ ಒದಗಿತು. ನಾವು ನಮ್ಮ ಸರಸ್ ಸಂಸ್ಥೆ ವತಿಯಿಂದ ತುಮಕೂರಿನಲ್ಲಿ ನಡೆಸುವ "ಡಿವಿಜಿ ನೆನಪು" ಉಪನ್ಯಾಸ ಕಾರ್ಯಕ್ರಮ ಕುರಿತು ಈರ್ವರೂ ವಿದ್ವಾಂಸರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು.

ತುಮಕೂರಿನ ಸಿದ್ಧಾರ್ಥ ಇನ್ಸ್ ಟಿಟ್ಯೂಟ್ ಆಫ್ ಬಿಜಿನೆಸ್ ಮ್ಯಾನೇಜ್ ಮೆಂಟ್ ಕಾಲೇಜಿನ ಅಧ್ಯಾಪಕರೂ, ನಮ್ಮ ಆತ್ಮೀಯರೂ ಆದ ಡಾ. ಪಿ.ಆರ್. ರೇಣುಕಾಪ್ರಸಾದ್ ರವರ ಪುತ್ರನ ಬ್ರಹ್ಮೋಪದೇಶ ಕಾರ್ಯಕ್ರಮ ನಾಳೆ- ದಿ. 21-04-2024 ರಂದು- ತುಮಕೂರಿನ ಜಯನಗರದ ಶ್ರೀ ವೆಂಕಟೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ಏರ್ಪಟ್ಟಿದೆ. ಅದಕ್ಕೆ ಪೂರ್ವಭಾವಿಯಾಗಿ ಇಂದು ಇದೇ ಸ್ಥಳದಲ್ಲಿ ಶ್ರೀ ರೇಣುಕಾಪ್ರಸಾದ್ ರವರು ಬರೆದಿರುವ "ನನ್ನೂರು" (ಪಾವಗಡ ತಾಲ್ಲೂಕು ನಲಿಗಾನಹಳ್ಳಿಯ ಸಾಂಸ್ಕೃತಿಕ ಚಿತ್ರ) ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವನ್ನು ರೇಣುಕಾಪ್ರಸಾದ್ ರವರು ಆಯೋಜಿಸಿದ್ದರು. ಈ ಸಮಾರಂಭದಕ್ಕೆ ಈ ಇಬ್ಬರು ವಿದ್ವಾಂಸರೂ ಅತಿಥಿಗಳಾಗಿ ಆಗಮಿಸಿದ್ದರು. ರೇಣುಕಾಪ್ರಸಾದ್ ರವರು ನಮಗೂ ನೀಡಿದ್ದ ಆಮಂತ್ರಣದ ಹಿನ್ನೆಲೆ ನಾವು ಈ ಸಂಜೆ ಅಲ್ಲಿಗೆ ಹೋಗಿದ್ದಾಗ ಈ ಮಹನೀಯರ ಭೇಟಿ ಆಯಿತು. ಅಪಾರ ಸಂತಸ ಮೂಡಿಸಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 20-04-2024

ಖ್ಯಾತ ಚಿಂತಕರಾದ ಡಾ. ಪಾವಗಡ ಪ್ರಕಾಶರಾವ್ ರವರು ಮತ್ತು ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ರವರೊಂದಿಗೆ. (ಕೊನೆಯಲ್ಲಿ ಡಾ.ಪಾವಗಡ ರೇಣುಕಾಪ್ರಸಾದ್ ರವರೂ ಇದ್ದಾರೆ)


ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ರವರೊಂದಿಗೆ.

No comments:

Post a Comment