* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Tuesday 16 April 2024

Roopa- Naganna Visit 2024 ಶ್ರೀಮತಿ ರೂಪಾ ಮತ್ತು ಶ್ರೀ ನಾಗಣ್ಣ ಅವರ ಭೇಟಿ

ಮೂಲತಃ ಕೊಳ್ಳೆಗಾಲದವರಾಗಿದ್ದು, ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಹಾಗೂ ನಮ್ಮ ಬಂಧುಗಳೂ ಆದ ಶ್ರೀ ನಾಗರಾಜು (ನಾಗಣ್ಣ) ಮತ್ತು ಶ್ರೀಮತಿ ರೂಪಾ ನಾಗರಾಜ್ ದಂಪತಿ ತಮ್ಮ ಪುತ್ರ ಶರತ್ ಮತ್ತು ಸೊಸೆ ಶ್ರೀಮತಿ ಸುಷ್ಮ ಅವರೊಡನೆ ಇಂದು (ದಿ.15-04-2024) ಮಧ್ಯಾಹ್ನ ನಮ್ಮ ಮನೆಗೆ ಆಗಮಿಸಿದ್ದರು.

ತಮ್ಮ ಸೊಸೆಯ ಬಂಧುವೊಬ್ಬರ ಕುಟುಂಬದ ಉಪನಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುಬ್ಬಿ ಬಳಿಯ ಲಕ್ಕೇನಹಳ್ಳಿಗೆ ಅವರು ಬಂದಿದ್ದರು. ಅಲ್ಲಿಂದ ಬೆಂಗಳೂರಿಗೆ ಹಿಂತಿರುಗುವಾಗ ಮಾರ್ಗ ಮಧ್ಯೆ ತುಮಕೂರಿನಲ್ಲಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95 ವರ್ಷ) ರವರನ್ನು ಕಂಡು, ಮಾತನಾಡಿ, ಆಶೀರ್ವಾದ ಪಡೆದುಕೊಳ್ಳುವ ಆಶಯದಿಂದ ಆಗಮಿಸಿದ್ದರು. ಆ ಆಶಯ ಈಡೇರಿದ ಸಂತಸ ಅವರಲ್ಲಿತ್ತು. ಇವರ ಮಗ ಮತ್ತು ಸೊಸೆ ಇಬ್ಬರೂ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೀರ್ಘ ಕಾಲದ ಬಳಿಕ ಪರಸ್ಪರ ಭೇಟಿಯಾದುದು ಎಲ್ಲರಲ್ಲೂ ಅಪಾರ ಸಂತಸ ಮೂಡಿಸಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 15-04-2024







No comments:

Post a Comment