* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday 14 September 2018

Visit to Himavad Gopalaswamy Hills 09-09-2018 Sunday

ಹಿಮವದ್ ಗೋಪಾಲಸ್ವಾಮಿ ಸನ್ನಿಧಿಯಲ್ಲಿ...
************************************
ಭಾಗ-1
ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರಾಕೃತಿಕ ಸೊಬಗನ್ನು ಅಲ್ಲಿಗೆ ತೆರಳಿಯೇ ಅನುಭವಿಸಬೇಕು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿಗೆ ಸೇರಿದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಶ್ರೀ ಗೋಪಾಲಸ್ವಾಮಿಯ ಸುಂದರ ದೇಗುಲವಿದೆ. ಪುರಾತನವಾದರೂ ಆಕರ್ಷಕವಾಗಿದೆ. ದಟ್ಟ ಕಾನನದ ನಡುವಿನ ಬೆಟ್ಟದಲ್ಲಿದೆ ಈ ದೇಗುಲ. ಸುತ್ತಲೂ- ಕಣ್ಣು ಹಾಯ್ದಷ್ಟು ದೂರವೂ ನಮಗೆ ಕಾಣುವುದು ಬೆಟ್ಟಗುಡ್ಡಗಳು ಹಾಗೂ ದಟ್ಟ ಕಾನನ. ಅದೃಷ್ಟವಿದ್ದರೆ ಕಾಡಾನೆಗಳ ದರ್ಶನ!! (ನಮಗಂತೂ ಕಾಡಾನೆಗಳ ದರ್ಶನ ಆಗಿದ್ದು ರೋಮಾಂಚನ ಉಂಟುಮಾಡಿತು). ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಬೆಟ್ಟದ ಬುಡದಲ್ಲಿ ಮಾಡಿರುವ "ಪಾರ್ಕಿಂಗ್ ಜಾಗ"ದಲ್ಲಿ ಶುಲ್ಕ ನೀಡಿ ವಾಹನ ನಿಲುಗಡೆ ಮಾಡಬೇಕು. ಬಳಿಕ ಬೆಟ್ಟಕ್ಕೆ 20 ರೂ. ಟಿಕೆಟ್ ಪಡೆದು, ಸಾರಿಗೆ ಸಂಸ್ಥೆ ಬಸ್ ನಲ್ಲಿ ಮಾತ್ರ ಹೋಗಿ ಬರಬೇಕು. ಬೆಳಗ್ಗೆ 11-30 ರಿಂದ ಮಧ್ಯಾಹ್ನದವರೆಗೂ ಇಲ್ಲಿಗೆ ಬಂದವರೆಲ್ಲರಿಗೂ "ಪ್ರಸಾದ" (ಊಟ)ದ ವ್ಯವಸ್ಥೆ ಮಾಡಿರುವುದು ಭಕ್ತಾದಿಗಳ ಪಾಲಿಗೆ ವರಪ್ರದವಾಗಿದೆ. ದೇವಾಲಯದಲ್ಲಿ ಅರ್ಚಕರು ಮತ್ತು ಸಿಬ್ಬಂದಿಯವರು ಇಲ್ಲಿಗೆ ಬರುವ ಭಕ್ತಾದಿಗಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದು ಮತ್ತು ಭಕ್ತಾದಿಗಳಿಗೆ ಪ್ರಸಾದ ಸ್ವೀಕರಿಸಿ ಹೋಗುವಂತೆ ಪ್ರೀತಿಯಿಂದ ಮನವಿ ಮಾಡುವುದು ವಿಶೇಷವಾಗಿ ನಮ್ಮ ಗಮನ ಸೆಳೆಯಿತು. ಇಂದು (09-09-2018, ಭಾನುವಾರ) ಬೆಳಗ್ಗೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಬೆಟ್ಟಕ್ಕೆ ತೆರಳಿದ್ದೆವು. ನಮ್ಮೊಡನೆ ನಮ್ಮ ಆತ್ಮೀಯ ಮಿತ್ರರಾದ ಶ್ರೀ ಬೆಳಗುಂಬ ವೆಂಕಟೇಶ್ ಮತ್ತು ಶ್ರೀ ಕೆ.ಎಂ.ಶಿವಕುಮಾರ್ (ಆಟೋ ಯಡಿಯೂರಪ್ಪ) ಇದ್ದರು.










No comments:

Post a Comment