* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 23 September 2018

with Dr.Sridhar & Sri Suryaprakash Pandith...

“ಜೀವನವದೊಂದು ಕಲೆ” – ನಾಡಿನ ಖ್ಯಾತ ವಿದ್ವಾಂಸರೂ, ಪತ್ರಕರ್ತರೂ, ನಮ್ಮ ಸನ್ಮಿತ್ರರೂ ಆದ ಶ್ರೀ ಸೂರ್ಯಪ್ರಕಾಶ್ ಪಂಡಿತ್ ಅವರ ಈ ಗ್ರಂಥ ಇಂದು (23-09-2018, ಭಾನುವಾರ) ಸಂಜೆ ಬೆಂಗಳೂರಿನ ರಾಜಾಜಿನಗರದ “ರಸಧ್ವನಿ ಕಲಾಕೇಂದ್ರ”ದಲ್ಲಿ ನಡೆದ ವಿದ್ವತ್ಪೂರ್ಣ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡಿತು. 
ಪ್ರಸಿದ್ಧ ಚಲನಚಿತ್ರ ಹಾಗೂ ಭರತನಾಟ್ಯ ಕಲಾವಿದರೂ, ಚಿಂತಕರೂ, ನಮ್ಮ ಸನ್ಮಿತ್ರರೂ ಆದ ಡಾ. ಶ್ರೀಧರ್ ಅವರು ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ನಿವೃತ್ತ ಪ್ರಾಧ್ಯಾಪಕರೂ, ಬರಹಗಾರರೂ ಆದ ಡಾ. ಎಚ್.ಎನ್.ಮುರಳೀಧರ್ ಮತ್ತು ಶತಾವಧಾನಿಗಳೂ, ಬಹುಶ್ರುತ ವಿದ್ವಾಂಸರೂ ಆದ ಡಾ.ಆರ್.ಗಣೇಶ್ ಅವರು ಗ್ರಂಥವನ್ನು ಕುರಿತು ಮಾತನಾಡಿದರು.
ಇಂಥ ವಿದ್ವಾಂಸರನ್ನು ನೋಡುವ, ಅವರ ವಿದ್ವತ್ಪೂರ್ಣ ನುಡಿಗಳನ್ನಾಲಿಸುವ ಸುಯೋಗ ನಮ್ಮದಾಗಿತ್ತು. ಈ ಸಂದರ್ಭದಲ್ಲಿ ಡಾ.ಶ್ರೀಧರ್, ಶ್ರೀ ಸೂರ್ಯಪ್ರಕಾಶ್ ಪಂಡಿತ್ ಮತ್ತು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಂತ್ರಜ್ಞರೂ, ಬರಹಗಾರರೂ ಆದ ಶ್ರೀ ಸತ್ಯೇಶ್ ಬೆಳ್ಳೂರು ಅವರೊಡನೆ ನಾನು, ವಿಶ್ವನಾಥನ್, ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಹಾಗೂ ಎಂ.ಎಸ್.ಸುಹಾಸ್ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ನೆನಪಿಗಾಗಿ ತೆಗೆದ ಫೋಟೋಗಳಿವು...
ಸನ್ಮಿತ್ರರಾದ ಪತ್ರಕರ್ತ ಶ್ರೀ ಘನಶ್ಯಾಮ್, ಖ್ಯಾತ ಆಹಾರತಜ್ಞರಾದ ಕೆ.ಸಿ.ರಘು, “ವಿವೇಕ ಹಂಸ” ಪತ್ರಿಕೆಯ ಶ್ರೀ ವಿ.ರಘು, ಪತ್ರಕರ್ತ ಶ್ರೀ ಶ್ರೀನಿವಾಸರಾವ್ ಮೊದಲಾದರವರ ಭೇಟಿಯೂ ಸಂತೋಷ ತಂದಿತು.












No comments:

Post a Comment