* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Wednesday 10 October 2018

R S Iyer with Dr.K.Radhakrishnan, ಖ್ಯಾತ ವಿಜ್ಞಾನಿ ಡಾ.ಎಸ್.ರಾಧಾಕೃಷ್ಣನ್ ಅವರೊಡನೆ

ನಮ್ಮ ಪಾಲಿಗೆ ಅದೊಂದು ಅದೃಷ್ಟದ ದಿನ. 2010 ರ ಮಾರ್ಚ್ 3 ರಂದು ತುಮಕೂರು ವಿಶ್ವವಿದ್ಯಾನಿಲಯದ ಮೂರನೇ ಘಟಿಕೋತ್ಸವವು ಆಗಿನ ಕುಲಪತಿ ಮಾನ್ಯ ಡಾ. ಎಸ್.ಸಿ.ಶರ್ಮಾ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆಯಿತು. ಅಂದು ಘಟಿಕೋತ್ಸವ ಭಾಷಣ ಮಾಡಲು ಆಗಿನ "ಇಸ್ರೋ" (Indian Space Research Organisation) ಅಧ್ಯಕ್ಷರೂ, ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳೂ ಆದ ಡಾ.ಕೆ.ರಾಧಾಕೃಷ್ಣನ್ ರವರು ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ವಿದ್ವಾಂಸರಾದ "ಶತಾವಧಾನಿ" ಡಾ.ಆರ್.ಗಣೇಶ್ ರವರಿಗೆ ಮತ್ತು ಖ್ಯಾತ ಆಹಾರ ತಜ್ಞರಾದ ಶ್ರೀ ಸದಾನಂದ ಮಯ್ಯರವರಿಗೆ "ಗೌರವ ಡಾಕ್ಟರೇಟ್" ಪದವಿ ಪ್ರದಾನ ಮಾಡಲಾಯಿತು. ಸಮಾರಂಭದ ಬಳಿಕ ಈ ಮೂವರು ಮಹನೀಯರನ್ನು ನಾನು, ನನ್ನ ಸಹೋದರ ಆರ್.ವಿಶ್ವನಾಥನ್, ನಮ್ಮ ತಂದೆ-ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಮತ್ತು ವಿ.ವಿವೇಕ್ ಭೇಟಿ ಮಾಡುವ ಮತ್ತು ಆ ಮಹನೀಯರೊಡನೆ ಫೋಟೋ ತೆಗೆಸಿಕೊಳ್ಳವ ಸದವಕಾಶ  ಲಭಿಸಿದ್ದು ನಮ್ಮ ಪಾಲಿನ ಅವಿಸ್ಮರಣೀಯ ಪ್ರಸಂಗ. with ISRO chairman Dr.K.Radhakrishnan, "Shatavadhani" Dr.R Ganesh,& Food expert Dr.Sadananda Mayya..03-03-2010.



No comments:

Post a Comment